ವೃತ್ತಕ್ಕೆ ಸಿದ್ಧಗಂಗಾ ಶಿವಕುಮಾರ ಸ್ವಾಮೀಜಿ ಹೆಸರಿಡಲು ಒತ್ತಾಯ
Team Udayavani, Dec 14, 2019, 3:19 PM IST
ಗೌರಿಬಿದನೂರು: ನಗರದ ಬೆಂಗಳೂರು ರಸ್ತೆಯ ನಿರ್ಮಾಣ ಹಂತದಲ್ಲಿರುವ ವರ್ತುಲ ರಸ್ತೆಯ ವೃತ್ತಕ್ಕೆ ತ್ರಿವಿಧ ದಾಸೋಹಿ, ಸಿದ್ಧಗಂಗಾದ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮಿಗಳ ಹೆಸರನ್ನು ನಾಮಕರಣ ಮಾಡಬೇಕು ಎಂದು ಅಖೀಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕ ಕ್ಷೇತ್ರದ ಶಾಸಕರನ್ನು ಒತಾಯಿಸಿದೆ.
ಗೌರಿಬಿದನೂರು ನಗರಕ್ಕೂ ಸಿದ್ಧಗಂಗಾ ಶ್ರೀಗಳಿಗೂ ಹೆಚ್ಚಿನ ಸಂಬಂಧವಿದೆ. ನಡೆದಾಡುವ ದೇವರು ಎಂದೇ ಬಿಂಬಿತವಾಗಿದ್ದ ಶ್ರೀಗಳ ಪುತ್ಥಳಿಯನ್ನು ವರ್ತುಲ ರಸ್ತೆಯ ವೃತ್ತಕ್ಕೆ ಸ್ಥಾಪಿಸುವ ಮೂಲಕ ಉತ್ತಮ ಸಂದೇಶ ಸಾರಿದಂತಾಗುತ್ತದೆ. ಈ ಬಗ್ಗೆ ಶಾಸಕರ ಬಳಿಗೆ ವೀರಶೈವ ಮಹಾಸಭಾ ವೇದಿಕೆಯ ತಾಲೂಕು ಘಟಕ ನಿಯೋಗವು ತೆರಳುತ್ತಿರುವುದಾಗಿ ವೇದಿಕೆಯ ರಾಜ್ಯ ಘಟಕದ ಯುವ ಕಾರ್ಯದರ್ಶಿ ಎನ್ .ವಿ.ಗೌರೀಶ್, ನಿರ್ದೇಶಕ ಟಿ.ಜಿ.ಗಂಗಾಧರಯ್ಯ, ತಾಲೂಕು ಅಧ್ಯಕ್ಷ ಬಿ.ಎಂ.ನಟರಾಜ್, ಉಪಾಧ್ಯಕ್ಷರಾದ ದೇವಿ ಮಂಜುನಾಥ್, ರುದ್ರಮ್ಮ, ಪ್ರಧಾನ ಕಾರ್ಯದರ್ಶಿ ಪ್ರವೀಣ್ಕುಮಾರ್, ಖಜಾಂಚಿ ಜಿ.ರಾಜಣ್ಣ, ಕಾರ್ಯದರ್ಶಿ ಹಳೇಹಳ್ಳಿಶಿವಕುಮಾರ್, ನಿರ್ದೇಶಕರಾದ ಯತೀಶ್, ನಾಗರಾಜು, ರೂಪಾ, ಗೌರಮ್ಮ, ದೀಪಾ, ಲತಾ, ಶಶಿಕಲಾ, ಪ್ರಸನ್ನ, ಕೌಶಿಕ್, ಗಂಗಾಧರ್, ಕಾದಲವೇಣಿ ಶಿವಕುಮಾರ್, ಮುಖಂಡರಾದ ಎನ್.ಆರ್.ರವಿ, ಎಂ. ಹರೀಶ್, ಎಚ್.ನಂಜುಂಡಪ್ಪ, ಮಲ್ಲೇಶ್ವರಯ್ಯ, ಹುದುಗೂರು ಚಂದ್ರಣ್ಣ ಮುಂತಾದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election; ಕಾಂಗ್ರೆಸ್ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ
Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ
ಜೆಡಿಎಸ್ -ಬಿಜೆಪಿ ಬಿ ಟೀಮ್ ಹೌದು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ
Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್
Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ
MUST WATCH
ಹೊಸ ಸೇರ್ಪಡೆ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ