ಜಿಲ್ಲೆಗೆ ಬೇಕು 19,428 ಕ್ವಿಂಟಲ್ ಬಿತ್ತನೆ ಬೀಜ
ಕೃಷಿ ಇಲಾಖೆಗೆ ರೈತರಿಗೆ ಸಮರ್ಪಕವಾಗಿ ರಸಗೊಬ್ಬರ, ಬಿತ್ತನೆ ಬೀಜ ಒದಗಿಸುವ ಸವಾಲು
Team Udayavani, May 7, 2020, 3:03 PM IST
ಸಾಂದರ್ಭಿಕ ಚಿತ್ರ
ಚಿಕ್ಕಬಳ್ಳಾಪುರ: ಜಿಲ್ಲಾದ್ಯಂತ ಮುಂಗಾರು ಹಂಗಾಮಿನ ಮಳೆ ಶುಭಾರಂಭ ಮಾಡುತ್ತಿದ್ದಂತೆ ರೈತರು ಉತ್ಸಾಹದಿಂದ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದು, ಹಲವು ದಿನಗಳಿಂದ ಬೀಳುತ್ತಿರುವ ಮಳೆಯಿಂದ ಭೂಮಿಯನ್ನು ಹದ ಮಾಡಿಕೊಂಡಿದ್ದ ರೈತರು ಇದೀಗ ಸದ್ದಿಲ್ಲದೇ ಬಿತ್ತನೆ ಕಾರ್ಯಕ್ಕೆ ಮುಂದಾಗಿದ್ದು, ಜಿಲ್ಲೆಗೆ ಬರೋಬ್ಬರಿ 19,428 ಕ್ವಿಂಟಲ್ ಬಿತ್ತನೆ ಬೀಜ ಅವಶ್ಯಕವಾಗಿದೆ. ಜಿಲ್ಲಾದ್ಯಂತ ಈ ವರ್ಷ 1.40 ಲಕ್ಷ ಹೆಕ್ಟೇರ್ ಭೂ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಈಗಾಗಲೇ ಜಿಲ್ಲೆಯ ಬಾಗೇಪಲ್ಲಿ, ಚಿಂತಾಮಣಿ, ಗುಡಿಬಂಡೆ, ಗೌರಿಬಿದನೂರು ತಾಲೂಕುಗಳಲ್ಲಿ ರೈತರು ಬಿತ್ತನೆ ಕಾರ್ಯಕ್ಕೆ ಮುಂದಾಗಿದ್ದು ವಾಡಿಕೆಯಂತೆ ರೈತರು ಆರಂಭದ ಬೆಳೆಯಾಗಿ ನೆಲಗಡಲೆ ಬಿತ್ತನೆಗೆ ಮುಂದಾಗಿದ್ದಾರೆ. ಜಿಲ್ಲೆಗೆ ನೆಲಗಡಲೆ ಮಾತ್ರ 9,438 ಕ್ವಿಂಟಲ್ನಷ್ಟು ಅವಶ್ಯಕವಾಗಿದೆ.
26 ಸಾವಿರ ಹೆಕ್ಟೇರ್ ಪ್ರದೇಶ: ಜಿಲ್ಲೆಯಲ್ಲಿ ನೀರಾವರಿ ಇಲ್ಲದ ರೈತರು ನೆಲಗಡಲೆಯನ್ನು ಪ್ರಮುಖ ವಾಣಿಜ್ಯ ಬೆಳೆಯಾಗಿ ಬೆಳೆಯುವುದರಿಂದ ನೆಲಗಡಲೆ ಬೆಳೆಯುವ ರೈತರ
ಸಂಖ್ಯೆ ಅಧಿಕವಾಗಿದೆ. ರಾಗಿ, ಮುಸುಕಿನ ಜೋಳ ಹೊರತುಪಡಿಸಿದರೆ ಜಿಲ್ಲೆಯಲ್ಲಿ ಮೂರನೇ ಅತಿದೊಡ್ಡ ಬೆಳೆಯಾಗಿ ನೆಲಗಲಡೆ ಬೆಳೆಯುತ್ತಾರೆ. ಈ ವರ್ಷ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರೂಪಾ ಸುಮಾರು 26 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ನೆಲಗಡಲೆ ಬಿತ್ತನೆ ಪ್ರದೇಶ ಗುರುತಿಸಿದೆ. ಜಿಲ್ಲೆಗೆ ಅವಶ್ಯಕ ವಾದ 19,428 ಕ್ವಿಂಟಲ್ನಷ್ಟು ವಿವಿಧ ಬಿತ್ತನೆ ಬೀಜ ಅವಶ್ಯಕವಾಗಿದ್ದು ಆ ಪೈಕಿ 4,569 ಕ್ವಿಂಟಲ್ಗೆ ಬೇಡಿಕೆ ಸಲ್ಲಿಸಲಾಗಿದೆ ಎಂದು ಕೃಷಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈಗಾಗಲೇ ಜಿಲ್ಲೆಯ ರೈತರು ಬಿತ್ತನೆ ಬೀಜ ಕ್ಕಾಗಿ ಕೃಷಿ ಇಲಾಖೆಗೆ ಸಂಪರ್ಕ ಮಾಡಿದ್ದು ಕೆಲವು ತಾಲೂಕುಗಳಲ್ಲಿ ನೆಲಗಲಡೆ, ತೊಗರಿ ವಿತರಿಸುವ ಕಾರ್ಯ ನಡೆದಿದೆ. ಆದರೆ ರೈತರ
ಬೇಡಿಕೆಗೆ ತಕ್ಕಂತೆ ಜಿಲ್ಲೆಗೆ ಅವಶ್ಯ ಕವಾದ ಬಿತ್ತನೆ ಬೀಜಗಳು, ರಸಗೊಬ್ಬರ ಪೂರೈಕೆ ಆಗಿಲ್ಲ ಎಂಬ ಮಾತು ಕೇಳಿ ಬರುತ್ತಿದೆ.
ಸರ್ಕಾರವು ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರಗಳನ್ನು ಸಕಾಲದಲ್ಲಿ ಒದಗಿಸಿ ರೈತರ ಆತಂಕ ದೂರ ಮಾಡ ಬೇಕಾಗಿದೆ. ಕಳೆದ ಸಲ ಬಾಗೇಪಲ್ಲಿ ತಾಲೂಕಿನಲ್ಲಿ ಮುಂಗಾರು ಮುಗಿದು ಹಿಂಗಾರಿನ ಸಮಯದಲ್ಲಿ ನೆಲಗಡಲೆ ಹಂಚಿಕೆಯಾಗಿತ್ತು. ಇದರಿಂದ ಬಹಳಷ್ಟು ರೈತರಿಗೆ ತೊಂದರೆಯಾಗಿತ್ತು.
● ಮಾಡಪ್ಪಲ್ಲಿ ನರಸಿಂಹಮೂರ್ತಿ, ಯುವ ರೈತ
● ಕಾಗತಿ ನಾಗರಾಜಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election; ಕಾಂಗ್ರೆಸ್ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ
Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ
ಜೆಡಿಎಸ್ -ಬಿಜೆಪಿ ಬಿ ಟೀಮ್ ಹೌದು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ
Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್
Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ