ಚಿಕ್ಕಬಳ್ಳಾಪುರದಲ್ಲಿ ಕೋವಿಡ್ 19 ಸೋಂಕಿಗೆ ಇಬ್ಬರು ಬಲಿ: 30ಕ್ಕೆ ಜಿಗಿದ ಸಾವಿನ ಸಂಖ್ಯೆ
ಒಂದೇ ದಿನ 81 ಹೊಸ ಪ್ರಕರಣ ಪತ್ತೆ : ಒಟ್ಟು ಸೋಂಕಿತರ ಸಂಖ್ಯೆ 1,439ಕ್ಕೆ ಏರಿಕೆ
Team Udayavani, Jul 26, 2020, 7:39 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿನ ಅರ್ಭಟ ಮುಂದುವರೆದಿದೆ. ಭಾನುವಾರ ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿಗೆ ಮತ್ತಿಬ್ಬರು ಬಲಿಯಾಗಿದ್ದಾರೆ.
ಈ ಮೂಲಕ ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಒಟ್ಟು 30ಕ್ಕೆ ಏರಿಕೆಯಾಗಿದೆ.
ಭಾನುವಾರ ಹೊಸದಾಗಿ 81 ಪಾಸಿಟೀವ್ ಪ್ರಕರಣಗಳು ಕಂಡು ಬಂದಿದ್ದು ಈ ಮೂಲಕ ಜಿಲ್ಲೆಯಲ್ಲಿ ಸೋಂಕುಪೀಡಿತರ ಒಟ್ಟು 1,439ಕ್ಕೆ ಏರಿಕೆ ಕಂಡಿದೆ.
81 ಹೊಸ ಪ್ರಕರಣಗಳ ಪೈಕಿ ಚಿಕ್ಕಬಳ್ಳಾಪುರ 23, ಬಾಗೇಪಲ್ಲಿ 12, ಚಿಂತಾಮಣಿ 15, ಗೌರಿಬಿದನೂರು 11, ಗುಡಿಬಂಡೆ 10, ಶಿಡ್ಲಘಟ್ಟದಲ್ಲಿ 10 ಪ್ರಕರಣಗಳು ಕಂಡು ಬಂದಿವೆ. ಇದರ ನಡುವೆ ಚಿಕ್ಕಬಳ್ಳಾಪುರ ಹಾಗೂ ಬಾಗೇಪಲ್ಲಿಯಲ್ಲಿ ಸೋಂಕಿತರು ಇಬ್ಬರು ಚಿಕಿತ್ಸೆ ಫಲಿಸದೇ ಕೋವಿಡ್ಗೆ ಬಲಿಯಾಗಿದ್ದಾರೆ.
ಜಿಲ್ಲೆಯಲ್ಲಿ ಕೋವಿಡ್ 19 ಪ್ರಕರಣಗಳು ಸಂಖ್ಯೆ ಹೆಚ್ಚಳ ಆಗುತ್ತಲೇ ಇದ್ದು ವಾರದಿಂದ ಈಚೆಗೆ ಸಾವಿರಕ್ಕೂ ಹೆಚ್ಚು ಪ್ರಕರಣ ದಾಖಲಾಗಿರುವುದು ಜಿಲ್ಲೆಯ ಸಾರ್ವಜನಿಕ ವಲಯದಲ್ಲಿ ತೀವ್ರ ದಿಗ್ಬ್ರಮೆ ಮೂಡಿಸಿದೆ.
ಇದುವರೆಗೂ 1,439 ಪ್ರಕರಣಗಳ ಪೈಕಿ ಚಿಕ್ಕಬಳ್ಳಾಪುರ 480, ಬಾಗೇಪಲ್ಲಿ 196, ಚಿಂತಾಮಣಿ 225, ಗೌರಿಬಿದನೂರು 337, ಗುಡಿಬಂಡೆ 68, ಶಿಡ್ಲಘಟ್ಟದಲ್ಲಿ 133 ಪ್ರಕರಣಗಳು ದಾಖಲಾಗಿವೆ, ಇನ್ನೂ ಸಾವಿನ ಪ್ರಮಾಣದಲ್ಲಿ ಒಟ್ಟು 30 ರಲ್ಲಿ ಚಿಕ್ಕಬಳ್ಳಾಪುರ 13, ಬಾಗೇಪಲ್ಲಿ 3, ಚಿಂತಾಮಣಿ 2, ಗೌರಿಬಿದನೂರು 9, ಗುಡಿಬಂಡೆ 1 ಹಾಗೂ ಶಿಡ್ಲಘಟ್ಟದಲ್ಲಿ 2 ಸಾವಿನ ಪ್ರಕರಣಗಳು ಸಂಭವಿಸಿವೆ.
30 ಮಂದಿ ಡಿಸ್ಚಾರ್ಜ್:
ಜಿಲ್ಲೆಯಲ್ಲಿ ಭಾನುವಾರ ಒಟ್ಟು 30 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು ಇದುವರೆಗೂ ಒಟ್ಟಾರೆ 1,439 ಸೋಂಕಿತರಲ್ಲಿ 651 ಮಂದಿ ಬಿಡುಗಡೆ ಹೊಂದಿ ಇನ್ನೂ 757 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election; ಕಾಂಗ್ರೆಸ್ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ
Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ
ಜೆಡಿಎಸ್ -ಬಿಜೆಪಿ ಬಿ ಟೀಮ್ ಹೌದು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ
Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್
Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ