ಮುಳ್ಳಯ್ಯಗಿರಿಯಲ್ಲಿ ವಿಶಿಷ್ಟ ಆರ್ಕಿಡ್ ಸಸ್ಯ ಪತ್ತೆ
Team Udayavani, Feb 10, 2021, 4:11 PM IST
ಚಿಕ್ಕಮಗಳೂರು: ಚಿಕ್ಕಮಗಳೂರು ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ವಾಹನ ಚಾಲಕ ಬಿ. ಮಂಜುನಾಥ್ ಮುಳ್ಳಯ್ಯನಗಿರಿ ಭಾಗದಲ್ಲಿ ಕಂಡು ಬರುವ ವಿಶಿಷ್ಟ ಆರ್ಕಿಡ್ ಸಸ್ಯ (ಸೀತಾಳೆ ಹೂವಿನ ಪ್ರಬೇಧ) ಪತ್ತೆ ಮಾಡಿದ್ದಾರೆ.
ಕೇರಳದ ವಯನಾಡುವಿನಲ್ಲಿ ಡಾ| ಕೆ.ವಿ.ಜಾರ್ಜ್ ಎಮರಿಟ್ ಸಸ್ಯ ತಜ್ಞ ಪತ್ತೆ ಮಾಡಿದ್ದರು. ವೈಭಿಯ ಜಾತಿಗೆ ಸೇರಿದ ಸಸ್ಯ ಇದಾಗಿದ್ದು, ತೇವಾಂಶ ಭರಿತ ಶೋಲಾ ಕಾಡಿನಲ್ಲಿ ಇದು ಹುಟ್ಟುತ್ತದೆ. ಡಿಸೆಂಬರ್ನಲ್ಲಿ ಚಿಗುರಿ ಫೆಬ್ರವರಿಯಲ್ಲಿ ಹೂವು ಬಿಡುತ್ತದೆ. ಮಂಜುನಾಥ್ ಸಸ್ಯಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದು, ವಿಶಿಷ್ಟ ಸಸ್ಯ ಪ್ರಭೇದಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದಾರೆ.