Datta Peeta ದಶಕಗಳ ಹೋರಾಟಕ್ಕೆ ನಮ್ಮ ಸರ್ಕಾರದಲ್ಲಿ ಜಯ ಸಿಕ್ಕಿದೆ : ಶೋಭಾ ಕರಂದ್ಲಾಜೆ
Team Udayavani, Aug 31, 2023, 3:56 PM IST
ಚಿಕ್ಕಮಗಳೂರು: ದತ್ತಪೀಠವನ್ನು ಬೇಲಿ ರಹಿತ ಮಾಡುವುದೇ ನಮ್ಮ ಸಂಕಲ್ಪ, ನಮ್ಮ ಸಂಕಲ್ಪ ಈಡೇರಲಿ ಎಂದು ದತ್ತನನ್ನು ಪ್ರಾರ್ಥೀಸದ್ದೇವೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ತಾಲೂಕಿನ ದತ್ತಪೀಠದಲ್ಲಿ ಪೂಜೆ ಬಳಿಕ ಮಾತನಾಡಿದ ಅವರು, ದತ್ತಪೀಠದ ಎಲ್ಲಾ ಬೇಲಿಗಳಿಂದ ನಾವು ಹೊರ ಬರಬೇಕು. ಅದು ನಮ್ಮ ಆಸೆ ಎಂದರು. ಈ ಎಲ್ಲಾ ಬೇಲಿಗಳು ನಿವಾರಣೆಯಾಗಬೇಕು ಎಂಬದೇ ನಮ್ಮ ಅಪೇಕ್ಷೆ ಎಂದು ಹೇಳಿದರು.
ದತ್ತ ಪಾದುಕೆ ಆರಾಧನೆಯಿಂದ ಎಲ್ಲರಿಗೂ ಖುಷಿಯಾಗಿದೆ. ದತ್ತಪೀಠದಲ್ಲಿ ಈ ಪೂಜೆ ನಿರಂತರವಾಗಿ ನಡೆಯಬೇಕು. ದತ್ತಾತ್ರೇಯರಿಗೆ ತ್ರಿಕಾಲ ಪೂಜೆ ಆಗಬೇಕು ಎಂಬುವುದು ನಮ್ಮ ಅಪೇಕ್ಷೆ ಎಂದ ಅವರು ದತ್ತಪೀಠದ ದಶಕಗಳ ಹೋರಾಟಕ್ಕೆ ನಮ್ಮ ಸರ್ಕಾರದಲ್ಲಿ ಜಯ ಸಿಕ್ಕಿದೆ ಎಂದರು.
ಹುಣ್ಣಿಮೆ ಪೂಜೆ ಅಂಗವಾಗಿ ಬಜರಂಗದಳ, ವಿಶ್ವಹಿಂದೂ ಪರಿಷತ್ ಅಯೋಜಿಸಿದ್ದ ಹೋಮದಲ್ಲಿ ಶೋಭಾ ಕರಂದ್ಲಾಜೆ ಭಾಗಿಯಾದರು.