ಲಕ್ಯಾ ಹೋಬಳಿ ಕೆರೆ ತುಂಬಿಸುವ ಯೋಜನೆಗೆ ಟೆಂಡರ್
Team Udayavani, Jun 11, 2021, 10:32 PM IST
ಚಿಕ್ಕಮಗಳೂರು: ರಣಘಟ್ಟ ಪಿಕಪ್ನಿಂದ ಲಕ್ಯಾ ಹೋಬಳಿ ಕೆರೆ ತುಂಬಿಸುವ ಯೋಜನೆಗೆ ಟೆಂಡರ್ ಕರೆಯಲಾಗಿದೆ ಎಂದು ಶಾಸಕ ಸಿ.ಟಿ. ರವಿ ತಿಳಿಸಿದ್ದಾರೆ.
ಗುರುವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಹಾಸನ ಜಿಲ್ಲೆಯ ಬೇಲೂರು ತಾಲೂಕು ಯಗಚಿನದಿಯ ರಣಘಟ್ಟ ಪಿಕಪ್ ನಿಂದ ಬೇಲೂರು ತಾಲೂಕಿನ ಮಾದಿಹಳ್ಳಿ ಮತ್ತು ಹಳೇಬೀಡು ಹೋಬಳಿಯ 7 ಕೆರೆಗಳು ಮತ್ತು ಚಿಕ್ಕಮಗಳೂರು ತಾಲೂಕು ಲಕ್ಯಾ ಹೋಬಳಿ ಬೆಳವಾಡಿ ಕೆರೆಗೆ ಗುರುತ್ವ ನಾಲೆಯ ಮೂಲಕ ನೀರು ತುಂಬಿಸುವ ಯೋಜನೆಗೆ ಕಾವೇರಿ ನೀರಾವರಿ ನಿಗಮದ ಯಗಚಿ ಯೋಜನಾ ವಿಭಾಗದಿಂದ ಟೆಂಡರ್ ಕರೆಯಲಾಗಿದೆ ಎಂದು ಹೇಳಿದ್ದಾರೆ.
ರಣಘಟ್ಟ ನೀರಾವರಿ ಯೋಜನೆ 125.46 ಕೋಟಿ ರೂ. ವೆಚ್ಚದಲ್ಲಿ 8 ಕೆರೆಗಳನ್ನು ಮತ್ತು ಯಗಚಿ ನದಿಯಲ್ಲಿ ಹೆಚ್ಚುವರಿ ನೀರು ಲಭ್ಯವಿರುವ ಸಂದರ್ಭದಲ್ಲಿ ನಂತರದ ಕೆರೆಗಳಿಗೂ ಸಹ ನೀರು ತುಂಬಿಸುವ ಯೋಜನೆಯಾಗಿದ್ದು, ರಣಘಟ್ಟ ಪಿಕಪ್ನಿಂದ 2.40 ಕಿ.ಮೀ. ಉದ್ದದ ತೆರೆದ ಕಾಲುವೆ, 4.20 ಕಿ.ಮೀ. ಉದ್ದದ ಸುರಂಗ ನಾಲೆ ಮತ್ತು 1.70 ಕಿ.ಮೀ. ನಿರ್ಗಮನ ತೆರೆದ ನಾಲೆ ಸೇರಿದಂತೆ 8.30 ಕಿ.ಮೀ. ಉದ್ದದ ಗುರುತ್ವ ನಾಲೆಯ ಮೂಲಕ 100 ಕ್ಯೂಸೆಕ್ಸ್ ನೀರಿನ ಹರಿವಿನೊಂದಿಗೆ ಕೆರೆಗಳನ್ನು ತುಂಬಿಸುವ ಯೋಜನೆಯಾಗಿದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ
ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್ ಹೆಗ್ಡೆ: ವಿಠಲ ಹೆಗ್ಡೆ