ಶಾಸಕರ ಸಹಾಯದಿಂದ ಊರು ಸೇರಿದ ವಲಸಿಗರು

ತಾಲೂಕು ಆಡಳಿತದ ಅಚಾತುರ್ಯ ಮೂರು ಬಸ್‌ಗಳ ಸಂಚಾರದ ವೆಚ್ಚ ಭರಿಸಿದ ಬೆಳ್ಳಿಪ್ರಕಾಶ್

Team Udayavani, Apr 27, 2020, 3:56 PM IST

27-April-21

ಕಡೂರು: ಪಟ್ಟಣದಲ್ಲಿದ್ದ 57 ಜನ ಕ್ವಾರಂಟೈನರ್‌ಗಳನ್ನು ತುಂಬಿಕೊಂಡು ಹೊರಟ ಬಸ್‌ಗೆ ಶಾಸಕ ಬೆಳ್ಳಿಪ್ರಕಾಶ್‌ ಬೀಳ್ಕೊಟ್ಟರು.

ಕಡೂರು: ಕಡೂರು ಪಟ್ಟಣದ ವಿವಿಧ ವಿದ್ಯಾರ್ಥಿ ನಿಲಯಗಳಲ್ಲಿ ಕಳೆದ 21 ದಿನಗಳಿಂದ ಕ್ವಾರಂಟೈನ್‌ ಆಗಿದ್ದ ಸುಮಾರು 57 ಜನರನ್ನು ಸ್ವಗ್ರಾಮಕ್ಕೆ ಕಳುಹಿಸಲು ತಾಲೂಕು ಆಡಳಿತ ಮಾಡಿದ ಪ್ರಯತ್ನ ವಿಫಲಗೊಂಡು ಅಂತಿಮವಾಗಿ ಶಾಸಕ ಬೆಳ್ಳಿಪ್ರಕಾಶ್‌ ಅವರ ಸಂಧಾನ, ಸಹಾಯ ಹಸ್ತದಿಂದ ಊರು ತಲುಪಿ ನಿಟ್ಟುಸಿರು ಬಿಟ್ಟ ಘಟನೆ ಶನಿವಾರ ರಾತ್ರಿ ನಡೆದಿದೆ.

ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಕುಮಾರಹಳ್ಳಿ ತಾಂಡಾ, ಮುಸಲುವಾಡಿ, ಕೆ.ಕೆ. ತಾಂಡಾಗಳ ಸುಮಾರು 47 ಜನರ ತಂಡ ಕಳೆದ 3 ತಿಂಗಳ ಹಿಂದೆ ಸಕಲೇಶಪುರ ಸಮೀಪದ ಎಬಿಸಿ ಕಾಫಿ ತೋಟಕ್ಕೆ ಕೂಲಿ ಕೆಲಸಕ್ಕೆ ತೆರಳಿತ್ತು. ಲಾಕ್‌ಡೌನ್‌ ಸಮಯದಲ್ಲಿ ಸ್ವಗ್ರಾಮಕ್ಕೆ ತೆರಳುವಾಗ ಕಡೂರು ಪೊಲೀಸರಿಗೆ ಚೆಕ್‌ಪೋಸ್ಟ್‌ನಲ್ಲಿ ಸಿಕ್ಕಿದ್ದರು. ನಂತರ ಅವರನ್ನು ತಾಲೂಕು ಆಡಳಿತ ವ್ಯವಸ್ಥೆ ಮಾಡಿರುವ ವಿದ್ಯಾರ್ಥಿ ನಿಲಯದಲ್ಲಿ ಇರಿಸಲಾಗಿತ್ತು. ಜಿಲ್ಲಾಡಳಿತದ ನಿರ್ದೇಶನದಂತೆ 47 ಜನ ಬಳ್ಳಾರಿ ಜಿಲ್ಲೆಗೆ, ಉಳಿದವರನ್ನು ಹಾವೇರಿ ಜಿಲ್ಲೆ ಸವಣೂರಿಗೆ ಕಳುಹಿಸಲಾಯಿತು. ರಾಜ್ಯ ರಸ್ತೆ ಸಾರಿಗೆ ಕಡೂರು ಡಿಪೋಗೆ ಸೇರಿದ 3 ಬಸ್‌ ಗಳಲ್ಲಿ ಶನಿವಾರ ಸಂಜೆ 5 ಗಂಟೆಗೆ ಇವರನ್ನೆಲ್ಲಾ ಕಳುಹಿಸಲಾಯಿತು. ಆದರೆ ಬಸ್‌ಗಳು ಕಡೂರು ಪಟ್ಟಣ ಬಿಟ್ಟು 15 ಕಿ.ಮೀ ಸಾಗಿದ ನಂತರ ಸಮಸ್ಯೆ ಆರಂಭಗೊಂಡಿದೆ.

ಡಿಪೋ ವ್ಯವಸ್ಥಾಪಕರಿಂದ ಬಸ್‌ ಚಾಲಕರಿಗೆ ಕರೆ ಬಂದಿದ್ದು ಕೂಡಲೇ ಬಸ್‌ಗಳನ್ನು ಕಡೂರಿಗೆ ವಾಪಸ್‌ ತರುವಂತೆ ಸೂಚಿಸಿದ್ದಾರೆ. ನಂತರ ಚಾಲಕರು ಪೊಲೀಸ್‌ ಠಾಣೆಯ ಮುಂದೆ ಬಸ್‌ ತಂದು ನಿಲ್ಲಿಸಿದ್ದಾರೆ. ವಿಷಯ ಅರಿತ ಕೂಡಲೇ ಎಚ್ಚೆತ್ತುಕೊಂಡ ತಹಶೀಲ್ದಾರರು ಶಾಸಕ ಬೆಳ್ಳಿಪ್ರಕಾಶ್‌ ಅವರಿಗೆ ನಡೆದ ಸಂಗತಿ ವಿವರಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಶಾಸಕರು ಡಿಪೋ ವ್ಯವಸ್ಥಾಪಕ ಚನ್ನಬಸವೇಗೌಡ ಅವರನ್ನು ಕರೆಸಿ 3 ಬಸ್‌ ಗಳು ಅಲ್ಲಿಗೆ ತೆರಳಿ ವಾಪಸ್‌ ಬರುವ ವೆಚ್ಚವನ್ನು ತಾವು ಸ್ವಂತವಾಗಿ ಭರಿಸುತ್ತೇವೆ.

ಕೂಡಲೇ ಬಸ್‌ಗಳನ್ನು ಅವರವರ ಗ್ರಾಮಗಳಿಗೆ ಕಳುಹಿಸಲು ಸೂಚಿಸಿದ್ದಾರೆ. ಇದಾದ ನಂತರ ರಾತ್ರಿ 10 ಗಂಟೆಗೆ ಪುನಃ ಬಸ್‌ಗಳು ಬಳ್ಳಾರಿ, ಸವಣೂರು ದಾರಿ ಹಿಡಿದವು. ಕ್ವಾರೆಂಟೈನ್‌ನಲ್ಲಿರುವವರನ್ನು ಅವರ ಸ್ವಂತ ಊರುಗಳಿಗೆ ತಲುಪಿಸಲು ಸರ್ಕಾರದಿಂದ ಸೂಚನೆ ಬಂದಿದ್ದರಿಂದ ಡಿಪೋ ವ್ಯವಸ್ಥಾಪಕರಿಗೆ 3 ಬಸ್‌ಗಳಲ್ಲಿ ಕಳುಹಿಸಲು ಸೂಚಿಸಲಾಗಿತ್ತು. ಆದರೆ ಇದಕ್ಕೆ ತಗುಲುವ ವೆಚ್ಚವನ್ನು ಸರ್ಕಾರ ಭರಿಸುವುದಿಲ್ಲ. ಕ್ವಾರೆಂಟೈನರ್‌ಗಳೇ ಸ್ವತಃ ವೆಚ್ಚ ಭರಿಸಬೇಕೆಂಬ ಸೂಚನೆ ಮೇಲಧಿಕಾರಿಗಳಿಂದ ಬಂದ ಹಿನ್ನೆಲೆಯಲ್ಲಿ ಸಮಸ್ಯೆ ಉದ್ಭವವಾಗಿತ್ತು.

ನಂತರ ತಾವು ಶಾಸಕರಿಗೆ ಮಾಹಿತಿ ನೀಡಿದಾಗ ಶಾಸಕರು ಸಮಸ್ಯೆಯನ್ನು ಬಗೆಹರಿಸಿದರು ಎಂದು ತಹಶೀಲ್ದಾರ್‌ ಜೆ. ಉಮೇಶ್‌ ಮಾಹಿತಿ ನೀಡಿದರು. ಕಡೂರು ಡಿಪೋ ವ್ಯವಸ್ಥಾಪಕ ಚನ್ನಬಸವೇಗೌಡರು ಮಾತನಾಡಿ, ನಮ್ಮ ಮೇಲಧಿಕಾರಿಗಳು 1 ಕಿ.ಮೀ.ಗೆ 39 ರೂ. ದರದಂತೆ ಹಣ ಸಂದಾಯ ಮಾಡಿಸಿಕೊಂಡ ನಂತರವೇ ಬಸ್‌ ಕಳುಹಿಸಲು ಸೂಚನೆ ನೀಡಿದ್ದರಿಂದ 15 ಕಿ.ಮೀ ಸಾಗಿದ್ದ ಬಸ್‌ ಗಳನ್ನು ವಾಪಸ್‌ ಕರೆಸಿಕೊಳ್ಳಲಾಯಿತು. ಆದರೆ ಶಾಸಕರ ಮಧ್ಯಸ್ಥಿಕೆಯಲ್ಲಿ ಸುಮಾರು 60 ಸಾವಿರ ರೂ. ನೀಡುವುದಾಗಿ ಭರವಸೆ ನೀಡಿದ್ದರಿಂದ ಪುನಃ ಬಸ್‌ಗಳನ್ನು ಕಳುಹಿಸಿದ್ದೇವೆ. ಭಾನುವಾರ 60 ಸಾವಿರ ರೂ. ಶಾಸಕರು ನೀಡಿದ್ದಾರೆ ಎಂದರು.

ಹೂವಿನ ಹಡಗಲಿಯ ಗೊಣನಾಯ್ಕ ಮಾತನಾಡಿ, ಸರ್ಕಾರವೇ ಹಣ ನೀಡಿ ನಮ್ಮನ್ನು ಕಳುಹಿಸುತ್ತದೆ ಎಂಬ ನಂಬಿಕೆಯಿಂದ
ಬಸ್‌ ಹತ್ತಿದೆವು. ಹಣ ಊರಿನಲ್ಲಿ ನೀಡಬೇಕು. ಇಲ್ಲವಾದರೆ ವಾಪಸ್‌ ಕಡೂರಿಗೆ ಬಿಡುವುದಾಗಿ ಎಚ್ಚರಿಸಿದರು. ನಮ್ಮ ಬಳಿ ಹಣವಿಲ್ಲದ ಕಾರಣ ಕಡೂರಿಗೆ ವಾಪಸ್‌ ಕರೆ ತಂದರು. ಆ ಸಮಯಕ್ಕೆ ಅಲ್ಲಿಗೆ ಬಂದ ಕೆಲವು ಪತ್ರಕರ್ತರು ಹಾಗೂ ಶಾಸಕ ಬೆಳ್ಳಿ ಪ್ರಕಾಶ್‌ ಅವರು ನಮ್ಮನ್ನೆಲ್ಲ ಊರು ಸೇರಿಸಲು ನಮ್ಮ ಭಾಗದ ದೇವರಾಗಿ ಬಂದರು ಎಂದು ಸಂತಸದಿಂದ ನುಡಿದರು. ವೃತ್ತ ನಿರೀಕ್ಷಕ ಮಂಜುನಾಥ್‌, ಜಿಪಂ ಸದಸ್ಯ ಕೆ.ಆರ್‌. ಮಹೇಶ್‌ ಒಡೆಯರ್‌, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಶಂಕರಮೂರ್ತಿ ಮತ್ತಿತರರು ಇದ್ದರು.

ಕೋವಿಡ್ ವಿಷಯದಲ್ಲಿ ಸರ್ಕಾರ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮವಾಗಿದೆ. ಆದ ಕಾರಣ ಬಳ್ಳಾರಿ, ಹಾವೇರಿಯ ಸುಮಾರು 57 ಜನರನ್ನು ಸ್ವತಃ ವೆಚ್ಚ ಭರಿಸಿ ಕಳುಹಿಸಿದ್ದು, ಗ್ರಾಮೀಣ ಭಾಗದ ಕೂಲಿ ಕಾರ್ಮಿಕರು ಊರು ಸೇರಿರುವುದೇ ನಮಗೆ ಸಂತಸ ತಂದಿದೆ. ಇಂತಹ ಹತ್ತಾರು ಸಮಸ್ಯೆಗಳು ಬಂದರೂ ನಿಭಾಯಿಸುವ ಶಕ್ತಿ ನಮಗಿದೆ. ಯಾರೂ ಭಯಪಡಬೇಡಿ.
 ಬೆಳ್ಳಿ ಪ್ರಕಾಶ್‌, ಶಾಸಕ

ಟಾಪ್ ನ್ಯೂಸ್

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

4-chikkamagaluru

Chikkamagaluru: ವಿದ್ಯುತ್ ಶಾಕ್ ನಿಂದ ಲೈನ್ ಮ್ಯಾನ್ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.