ಪೊಲೀಸ್‌ ವಸತಿ ಗೃಹದಲ್ಲಿ ಸೌಲಭ್ಯ ಕೊರತೆ

ಕಳಪೆ ಕಟ್ಟಡ ಕಾಮಗಾರಿ; ಸೋರುತ್ತಿರುವ ವಸತಿ ಗೃಹ ಕಟ್ಟಡದ ಮೇಲ್ಭಾಗ

Team Udayavani, Aug 14, 2021, 5:43 PM IST

ಪೊಲೀಸ್‌ ವಸತಿ ಗೃಹದಲ್ಲಿ ಸೌಲಭ್ಯ ಕೊರತೆ

ಶೃಂಗೇರಿ: ಪೊಲೀಸ್‌ ಅಫೀಸರ್‌ ವಸತಿಗೃಹದ ಹೊರನೋಟ.

ಶೃಂಗೇರಿ: ಪಟ್ಟಣದ ಹೊರವಲಯದ ವಿದ್ಯಾ ನಗರದಲ್ಲಿ ಪೊಲೀಸ್‌ ವಸತಿ ಗೃಹಕ್ಕೆ ಮೀಸಲಾದ ಸ್ಥಳದಲ್ಲಿ ಅಫೀಸರ್‌ ವಸತಿ ಗೃಹ ಹಾಗೂ 38
ಸಿಬ್ಬಂದಿಗೆ ವಸತಿ ಗೃಹವಿದ್ದು, ಸಿಬ್ಬಂದಿಯ ಅಗತ್ಯ ಪೂರೈಸಿದೆ. ಆದರೆ ಕಳೆದ ಎರಡು ವರ್ಷದಲ್ಲಿ ಪೊಲೀಸ್‌ ವಸತಿ ಗೃಹ ಸಮೀಪ ಸಾಕಷ್ಟು ಅಭಿವೃದ್ಧಿ ಕಾಣುತ್ತಿದ್ದರೂ ಒಂದಷ್ಟು ಕೊರತೆಗಳು ಇವೆ.

2019-20 ರಲ್ಲಿ ನಿರ್ಮಾಣವಾದ 12 ವಸತಿ ಗೃಹದ ಕಟ್ಟಡ ಹೊರ ನೋಟಕ್ಕೆ ಸುಂದರವಾಗಿದ್ದರೂ ಕಟ್ಟಡ ಕಾಮಗಾರಿ, ಕಟ್ಟಡದ ಒಳಗಿನ ಕಾಮಗಾರಿಗಳು ಗುಣಮಟ್ಟದಲ್ಲಿಲ್ಲ. ಮಲೆನಾಡಿಗೆ ಹೊಂದಿಕೆಯಾಗದ ಕಟ್ಟಡ ನಿರ್ಮಾಣದ ತಂತ್ರಜ್ಞಾನದಿಂದ ಕಟ್ಟಡದ ಮೇಲ್ಭಾಗದಲ್ಲಿ ನಿರ್ಮಿಸಿರುವ ಶೀಟಿನ ಹೊದಿಕೆ ಅಪೂರ್ಣವಾಗಿದೆ. ಇದರಿಂದ ಕಟ್ಟಡದ ಮೇಲ್ಭಾಗದಲ್ಲಿ ಸೋರಿಕೆಯಾಗುತ್ತಿದೆ.

ಅಫೀಸರ್‌ ವಸತಿ ಗೃಹಕ್ಕೆ ಟಾರ್ಪಲಿನ್‌ ಹೊದಿಕೆ: ವೃತ್ತ ನಿರೀಕ್ಷಕ ಹಾಗೂ ನಿರೀಕ್ಷಕರಿಗೆ ಮೀಸಲಾಗಿರುವ ಎರಡು ವಸತಿ ಗೃಹಗಳು ಸೋರಿಕೆಯಾಗುತ್ತಿವೆ. ಇದೀಗ ಮಳೆಯಿಂದ ರಕ್ಷಣೆ ಪಡೆಯಲು ಟಾರ್ಪಲಿನ್‌ ಹೊದಿಕೆ ಮಾಡಲಾಗಿದೆ. 2005 ರಲ್ಲಿ ನಿರ್ಮಾಣವಾಗಿದ್ದ ವಸತಿ ಗೃಹಕ್ಕೆ ಶೀಟಿನ ಮೇಲ್ಚಾವಣಿಗೆ ಮಂಜೂರಾತಿ ಹಂತದಲ್ಲಿದ್ದರೂ, ಕೋವಿಡ್‌ನಿಂದ ಕಾಮಗಾರಿ ಆಗದೆ ಇದೀಗ ಟಾರ್ಪಲ್‌ ಹೊದೆಸಲಾಗಿದೆ.

2005ರಲ್ಲಿ ನಿರ್ಮಾಣವಾದ 22 ವಸತಿ ಗೃಹದ ಕಾಂಪ್ಲೆಕ್ಸ್‌ಗೆ ಮೇಲ್ಚಾವಣಿ ಸುಸಜ್ಜಿತವಾಗಿದೆ. ಹಳೆಯ ನಾಲ್ಕು ವಸತಿಗೃಹವಿದ್ದರೂ ಹೊಸ ಕಟ್ಟಡ ನಿರ್ಮಾಣದಿಂದ ಹಳೇ ಮನೆಗಳು ಈಗ ಉಪಯೋಗಕ್ಕೆ ಇಲ್ಲವಾಗಿದೆ.

ಇದನ್ನೂ ಓದಿ:ಇನ್ನೂ ಆರಂಭವಾಗಿಲ್ಲ ಆಧಾರ ಸೇವಾ ಕೇಂದ್ರ

ಕುಡಿಯುವ ನೀರಿನ ಸಮಸ್ಯೆ: ವಿದ್ಯಾರಣ್ಯಪುರ ಗ್ರಾಪಂ ವ್ಯಾಪ್ತಿಯಲ್ಲಿರುವ ಈ ಪ್ರದೇಶವಾದರೂ ತುಂಗಾ ನದಿಯಿಂದ ಪ್ರತ್ಯೇಕ ನೀರಿನ ಸರಬರಾಜು ವ್ಯವಸ್ಥೆಯನ್ನು ಪೊಲೀಸ್‌ ಇಲಾಖೆ ಮಾಡಿಕೊಂಡಿದೆ. ಹಿಂದಿನ ಪೈಪ್‌ಲೈನ್‌ ಆಗಾಗ್ಗೆ ಒಡೆದು ಸಮರ್ಪಕ ನೀರು ಸರಬರಾಜಿಗೆ ಅಡ್ಡಿಯಾಗುತ್ತಿದೆ. ಗ್ರಾಪಂನಿಂದ ಹೊಸ ಪೈಪ್‌ಲೈನ್‌ ಭರವಸೆ ದೊರಕಿದ್ದರೂ ಇನ್ನೂ ಕಾರ್ಯಗತಗೊಂಡಿಲ್ಲ. ನದಿಯಿಂದ ನೇರವಾಗಿ
ನೀರೆತ್ತುವುದರಿಂದ ಮಳೆಗಾಲದಲ್ಲಿ ಕೆಂಬಣ್ಣದ ಕಲುಷಿತ ನೀರು ಪೂರೈಕೆಯಾಗುತ್ತದೆ. ವಸತಿಗೃಹದ ಬಳಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸುವಂತೆ ಶಾಸಕರಿಗೆ ಬೇಡಿಕೆ ಸಲ್ಲಿಸಿದ್ದು ಅದು ಇನ್ನೂ ಈಡೇರಿಲ್ಲ.

ಕೌಂಪಾಂಡ್‌, ಕಾಂಕ್ರೀಟ್‌ ರಸ್ತೆ: ವಸತಿ ಗೃಹಕ್ಕೆ ಕೌಂಪಾಂಡ್‌ ನಿರ್ಮಾಣ ಹಾಗೂ ಕಾಂಕ್ರೀಟ್‌ ರಸ್ತೆ, ಒಳ ಚರಂಡಿ ವ್ಯವಸ್ಥೆಯಾಗುತ್ತಿದ್ದು, ಕಾಮಗಾರಿ ನಡೆಯುತ್ತಿದೆ. ಇದರಲ್ಲೂ ಕಳಪೆ ಕಾಮಗಾರಿ ಮೇಲ್ನೋಟಕ್ಕೆ ಗೋಚರಿಸುವಂತಿದೆ. ವಸತಿ ಗೃಹದ ಬಳಿ ಅಳವಡಿಸಲಾಗಿದ್ದ
ಸೋಲಾರ್‌ ದೀಪಗಳು ಹಾಳಾಗಿದ್ದು ಬದಲಿ ವ್ಯವಸ್ಥೆ ಇನ್ನೂ ಆಗಿಲ್ಲ. ವಿದ್ಯುತ್‌ ಆಗಾಗ್ಗೆ ಕೈಕೊಡುತ್ತಿದ್ದು ಸೋಲಾರ್‌ ದೀಪ ಅಗತ್ಯವಿದೆ. ತಾಲೂಕಿಗೆ ಪೊಲೀಸ್‌ ಸಿಬ್ಬಂದಿ ವರ್ಗಾವಣೆಗೊಂಡರೂ ಬರಲು ಹಿಂದೆ ಸರಿಯುವುದರಿಂದ ಪ್ರತಿ ವರ್ಷವೂ ಒಂದಷ್ಟು ಹುದ್ದೆ ಖಾಲಿ ಇರುತ್ತದೆ. ಹಾಲಿ ಇರುವ ಸಿಬ್ಬಂದಿಗೆ ಅಗತ್ಯವಿರುವಷ್ಟು ವಸತಿಗೃಹ ಲಭ್ಯವಿದ್ದು ಎರಡು ವಸತಿ ಗೃಹ ಖಾಲಿ ಇದೆ.

ತಾಲೂಕಿನಲ್ಲಿ ವಸತಿಗೃಹದ ಸಮಸ್ಯೆ ಇಲ್ಲ. ಹಾಲಿ ಇರುವ ಸಿಬ್ಬಂದಿಗೆ ಸಾಕಾಗುವಷ್ಟು ವಸತಿಗೃಹವಿದೆ. ಕುಡಿಯುವ ನೀರಿನ ಸಮಸ್ಯೆಗೆ ವಿದ್ಯಾರಣ್ಯಪುರ ಗ್ರಾಪಂ ಹೊಸ ಪೈಪ್‌ ಅಳವಡಿಕೊಡುವುದಾಗಿ ತಿಳಿಸಿದೆ.ನಿರ್ಮಾಣವಾಗುತ್ತಿರುವ ಕಾಮಗಾರಿಯ ಬಗ್ಗೆ ಉನ್ನತ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಲಿದೆ. ಕಳಪೆಯಾದಲ್ಲಿ ಗುತ್ತಿಗೆದಾರರಿಗೆ ಬಿಲ್‌ ಪಾವತಿ ತಡೆ ಹಿಡಿಯಲಾಗುತ್ತದೆ. ಸೋಲಾರ್‌ ದೀಪ, ಶುದ್ಧ ನೀರಿನ ಘಟಕದ ಅಗತ್ಯವಿದೆ.
-ಬಿ.ಎಸ್‌. ರವಿ, ವೃತ್ತ ನಿರೀಕ್ಷಕ,
ಶೃಂಗೇರಿ ಪೊಲೀಸ್‌ ಠಾಣೆ

ಟಾಪ್ ನ್ಯೂಸ್

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.