ಮಾಂಸದಂಗಡಿ ಮುಚ್ಚಿಸಿದ ಪೊಲೀಸರು
Team Udayavani, Apr 19, 2019, 5:07 PM IST
ಚಿಕ್ಕಜಾಜೂರು: ಮತಗಟ್ಟೆಯೊಂದರಲ್ಲಿ ಮತ ಚಲಾಯಿಸಿ ಹೊರ ಬಂದ ವಿಕಲಚೇತನ ಮಹಿಳೆ ಮಂಜುಳಾ.
ಚಿಕ್ಕಜಾಜೂರು: ಇಲ್ಲಿನ ಮತಗಟ್ಟೆಗಳಲ್ಲಿ ಮತದಾನ ಶಾಂತಿಯುತವಾಗಿ ಪೂರ್ಣಗೊಂಡಿತು. ಆದರೆ ಚುನಾವಣಾ ದಿನದಂದು ತೆರೆದಿದ್ದ ಮಾಂಸದಂಗಡಿಯನ್ನು ಪೊಲೀಸರು ಮುಚ್ಚಿಸಿದರು.
ವ್ಯಾಪಾರಿಗಳು, ವೃದ್ಧರು, ವಿಕಲಚೇತನರು ಹಾಗೂ ದೂರದ ಊರಿಗೆ ಹೋಗುವವರು ಆರಂಭದಲ್ಲೇ ಮತ ಚಲಾಯಿಸಿ
ಹೋಗುತ್ತಿದ್ದುದು ಕಂಡು ಬಂದಿತು. ವಿಕಲಚೇತನರಿಗೆ ವಾಹನ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನ ಬಿಸಿಲಿನ ತಾಪಮಾನ ಹೆಚ್ಚಾಗಿದ್ದರಿಂದ ಸಂಜೆ 4 ಗಂಟೆವರೆಗೆ ಮತದಾನ ಮಂದಗತಿಯಲ್ಲಿ ಸಾಗಿತ್ತು.
ಚುನಾವಣೆ ನಡೆಯುವ ದಿನದಂದು ಮತಗಟ್ಟೆ ಕೇಂದ್ರದಿಂದ 100 ಮೀಟರ್ ವ್ಯಾಪ್ತಿಯಲ್ಲಿನ ಅಂಗಡಿ ಮುಂಗಟ್ಟುಗಳು, ಹೊಟೆಲ್ ಮತ್ತಿತರ ವ್ಯಾಪಾರದ ಮಳಿಗೆಗಳನ್ನು ಮುಚ್ಚಬೇಕೆಂಬ
ನಿಯಮವಿದೆ. ಆದರೆ ಮತಗಟ್ಟೆ ಸಂಖ್ಯೆ 126ರ ಬಳಿ ಮಾಂಸ ಹಾಗೂ ಕೋಳಿ ವ್ಯಾಪಾರಿಗಳು ವ್ಯಾಪಾರ ನಡೆಸುತ್ತಿದ್ದುದು ಕಂಡು ಬಂದಿತು. ಚುನಾವಣಾ ನೀತಿಸಂಹಿತೆ ಮಾಂಸದ ಅಂಗಡಿಗಳಿಗೆ
ಒಂದು, ಇತರೆ ವ್ಯಾಪಾರಿಗಳಿಗೆ ಒಂದು ಎಂಬುದಿದೆಯೇ ಎಂದು ಸಾರ್ವಜನಿಕರು ಹಾಗೂ ಇತರೆ ವ್ಯಾಪಾರಿಗಳು ಪ್ರಶ್ನಿಸಿದರು. ಸ್ಥಳಕ್ಕೆ ಬಂದ ಪೊಲೀಸರು ಮಾಂಸದ ಅಂಗಡಿ ಮುಚ್ಚಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ