ವಿಕಲಚೇತನರೇ ಮಾಡಿದ್ರು ಮತಗಟ್ಟೆ ನಿರ್ವಹಣೆ
ಚಿತ್ರದುರ್ಗದ 197ನೇ ಮತಗಟ್ಟೆ ಜವಾಬ್ದಾರಿ ನಿಭಾಯಿಸಿ ಸೈ ಎನ್ನಿಸಿಕೊಂಡ ವಿಕಲಚೇತನ ಶಿಕ್ಷಕರು
Team Udayavani, Apr 19, 2019, 12:04 PM IST
ಚಿತ್ರದುರ್ಗ: ಜೆ.ಸಿ.ಆರ್ ಬಡಾವಣೆಯ ಮಾಡೆಲ್ ಸೈನಿಕ ಶಾಲೆಯಲ್ಲಿ ತೆರೆಯಲಾಗಿದ್ದ 197ನೇ ಮತಗಟ್ಟೆಯಲ್ಲಿ ವಿಕಲಚೇತನ ಶಿಕ್ಷಕರು ಕರ್ತವ್ಯ ನಿರ್ವಹಿಸಿದರು.
ಚಿತ್ರದುರ್ಗ: ಮಾವು-ಹೂವಿನ ತೋರಣ, ಪೆಂಡಾಲ್, ಬಾಳೆ ಕಂದು, ಬಣ್ಣದ ಪೇಪರ್ ಕಟ್ಟಿರುವುದನ್ನು ನೋಡಿ ಯಾವುದೋ ಮದುವೆ ಮನೆಯ ಸಂಭ್ರಮ ಎಂದುಕೊಳ್ಳದಿರಿ. ವಿಕಲಚೇತನ ಸಿಬ್ಬಂದಿಯೇ ನಿರ್ವಹಿಸಿದ ಮತಗಟ್ಟೆಯೊಂದರಲ್ಲಿ ಕಂಡುಬಂದ ದೃಶ್ಯವಿದು.
ಚಿತ್ರದುರ್ಗ ನಗರದ ಜೆ.ಸಿ.ಆರ್ ಬಡಾವಣೆಯ ಮಾಡೆಲ್ ಸೈನಿಕ ಶಾಲೆಯಲ್ಲಿ ತೆರೆಯಲಾಗಿದ್ದ 197ನೇ ಮತಗಟ್ಟೆ ಕೇಂದ್ರದಲ್ಲಿ ಚುನಾವಣಾ ಕಾರ್ಯಕ್ಕೆ ವಿಕಲಚೇತನರನ್ನೇ ನೇಮಕ ಮಾಡಲಾಗಿತ್ತು. ಕಳೆದ 14-15 ವರ್ಷಗಳಿಂದ ಮತದಾನದ ಕೆಲಸ ನಿರ್ವಹಿಸಲು ವಿಕಲಚೇತನರಿಗೆ ಆಗುವುದಿಲ್ಲ ಎಂಬ ಕಾರಣಕ್ಕೆ ಚುನಾವಣಾ ಕಾರ್ಯಕ್ಕೆ ನೇಮಿಸುತ್ತಿರಲಿಲ್ಲ. ಆದರೆ ಈ ಬಾರಿ ವಿಕಲ ಚೇತನರಲ್ಲೂ ಚುನಾವಣಾ ಕೆಲಸ ಮಾಡುವ ಸಾಮರ್ಥಯ ಇದೆ ಎಂಬುದನ್ನು ಸಾಬೀತುಪಡಿಸಲು ಭಾರತ ಚುನಾವಣಾ ಆಯೋಗ, ಮತಗಟ್ಟೆಗೆ ವಿಕಲಚೇತನರನ್ನೇ ನೇಮಕ ಮಾಡಿತ್ತು.
ಚುನಾವಣಾ ಕಾರ್ಯದಲ್ಲಿ ಜೆ.ಎನ್. ಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಕೆ.ಆರ್. ಗೋವಿಂದಯ್ಯ, ಪಳಿಕೆಹಳ್ಳಿ
ಶಾಲೆ ಶಿಕ್ಷಕ, ಮಲ್ಲಿಕಾರ್ಜುನಪ್ಪ, ಅಳಗವಾಡಿ ಶಾಲೆ ಶಿಕ್ಷಕ ಎಸ್. ರಘುಪತಿ, ಪಿಳ್ಳೇಕರನಹಳ್ಳಿ ಶಾಲೆ ಶಿಕ್ಷಕ ಆರ್. ಹೊಸಗೌಡ ಭಾಗವಹಿಸಿದ್ದರು. ತಮಗೆ ವಹಿಸಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಸೈ ಎನ್ನಿಸಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್