ನಾಟಕಕ್ಕಿದೆ ಬದುಕಿನ ದಿಕ್ಕು ಬದಲಿಸುವ ಶಕ್ತಿ

ಮುರುಘಾ ಮಠದ ಸಾಮೂಹಿಕ ವಿವಾಹ ಕಾರ್ಯಕ್ರಮ ನಿಜಕ್ಕೂ ಅದ್ಭುತ: ಎಸ್‌.ಆರ್‌. ಪಾಟೀಲ್‌

Team Udayavani, Nov 6, 2019, 5:10 PM IST

6–November-22

ಚಿತ್ರದುರ್ಗ: ನಾಟಕದ ನೀತಿಗಳು ನಮ್ಮ ಬದುಕಿನ ದಿಕ್ಕನ್ನು ಬದಲಿಸುವ ಶಕ್ತಿ ಹೊಂದಿವೆ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಎಸ್‌.ಆರ್‌. ಪಾಟೀಲ್‌ ಹೇಳಿದರು.

ಜಮುರಾ ಕಲಾಲೋಕ ಹಾಗೂ ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಆಯೋಜಿಸಿರುವ ಜಮುರಾ ರಾಷ್ಟ್ರೀಯ ನಾಟಕೋತ್ಸವದ ಐದನೇ ದಿನವಾದ ಮಂಗಳವಾರದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವ್ಯಕ್ತಿಯ ವ್ಯಕ್ತಿತ್ವದ ಮೇಲೆ ಧನಾತ್ಮಕ ಪ್ರಭಾವ ಬೀರುವ ಶಕ್ತಿ ನಾಟಕಗಳಿಗಿದೆ. ಈ ನಿಟ್ಟಿನಲ್ಲಿ ಮುರುಘಾ ಮಠ ನಾಟಕಗಳನ್ನು ಸಂಘಟಿಸುತ್ತಾ ಸಮಾಜಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿದೆ. ಸರಳ ಸಾಮೂಹಿಕ ಕಲ್ಯಾಣ ಮಹೋತ್ಸವ ಕೂಡ ಅದ್ಭುತ ಕೆಲಸ ಎಂದು ಶ್ಲಾಘಿಸಿದರು.

ಕಳೆದ 29 ವರ್ಷಗಳಲ್ಲಿ 16 ಸಾವಿರ ಜೋಡಿ ವಿವಾಹಗಳು ನಡೆದಿರುವುದು ನಿಜಕ್ಕೂ ವಿಶ್ವ ದಾಖಲೆ. ಮದುವೆ ಹೆಸರಿನಲ್ಲಿ ಸಾಲ ಮಾಡಿ ಜೀವನ ಪೂರ್ತಿ ಸಾಲ ತೀರಿಸಲು ದುಡಿಯುವವರಿಗೆ ಶ್ರೀಮಠದ ಈ ಕೆಲಸದಿಂದ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಡಾ| ಶಿವಮೂರ್ತಿ ಮುರುಘಾ ಶರಣರು ಆಶೀರ್ವಚನ ನೀಡಿ, ಆಧುನಿಕ ಸಮಾಜ ಅನಾಹುತಗಳಿಗೆ, ದುರ್ಘ‌ಟನೆಗಳಿಗೆ, ವಿಪತ್ತುಗಳಿಗೆ ಒಳಗಾಗುತ್ತಿದೆ. ಜಗತ್ತು ಶಾಂತಿಯಿಂದ ಅಶಾಂತಿಯ ಕಡೆಗೆ, ಸಂತೃಪ್ತಿಯಿಂದ ಅಸಂತೃಪ್ತಿಯ ಕಡೆಗೆ ವಾಲುತ್ತಿದೆ. ಇದಕ್ಕೆ ಕಾರಣ ತಳಮಳ. ಪ್ರತಿಯೊಬ್ಬ ವ್ಯಕ್ತಿಯಲ್ಲೂ ತಳಮಳ, ಅತೃಪ್ತಿ, ಅಶಾಂತಿ ತುಂಬಿ ತುಳುಕುತ್ತಿದೆ ಎಂದು ವಿಷಾದಿಸಿದರು.

ರಂಗ ನಿರ್ದೇಶಕ ನಟರಾಜ ಹೊನ್ನವಳ್ಳಿ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ರಂಗಭೂಮಿಯನ್ನು ಕೈಗೆತ್ತಿಕೊಂಡು ಜ್ಞಾನದ ಪರಿಯನ್ನು ಎತ್ತರಿಸುವ ಮಹತ್ತರ ಕಾರ್ಯವನ್ನು ಶ್ರೀಮಠದ ಜಮುರಾ ಸುತ್ತಾಟ ತಂಡ ಮಾಡುತ್ತಿದೆ. ಸಾಮಾಜಿಕ, ರಾಜಕೀಯ ಪ್ರಜ್ಞೆ ಬೆಳೆಸುತ್ತ ಕೀಳರಿಮೆಯನ್ನು ತೊಲಗಿಸಲು, ತಿಳುವಳಿಕೆ ತುಂಬಲು, ಅಂತರಂಗ ಮತ್ತು ಬಹಿರಂಗವಾಗಿ ನಮ್ಮನ್ನು ಶುದ್ಧರನ್ನಾಗಿ ರಂಗಭೂಮಿ ಮಾಡುತ್ತದೆ. ಸಮಾಜವನ್ನು ಶುದ್ಧಗೊಳಿಸುವ, ಎಲ್ಲರನ್ನೂ ತಿದ್ದುವ, ಸಮುದಾಯ ಪ್ರಜ್ಞೆಯನ್ನು ಮೂಡಿಸುವ ಕಾರ್ಯವನ್ನು ಅದು ಮಾಡುತ್ತದೆ. ಉನ್ನತ ಆಲೋಚನೆಗಳಿಗೆ ಅವಕಾಶ ನೀಡುವುದು ನಾಟಕ ಸಾಹಿತ್ಯ. ಒಳ್ಳೆಯ ರಾಜಕಾರಣ, ಪ್ರವಚನದಂತೆ ನಾಟಕ ಕೂಡ ನಮ್ಮನ್ನು ಸದಾ ಚುರುಕಾಗಿಸುತ್ತವೆ ಎಂದರು.

ಹೊಳಲ್ಕೆರೆಯ ಹಿರಿಯ ರಂಗ ಕಲಾವಿದ ಸುಭಾಶ್ಚಂದ್ರ ದೇವರಗುಡ್ಡ ಅವರನ್ನು ಸನ್ಮಾನಿಸಲಾಯಿತು. ಪ್ರೊ| ಸಿ.ವಿ. ಸಾಲಿಮಠ ಸೋಮವಾರ ಸಂಜೆ ಪ್ರದರ್ಶನ ಕಂಡ ಸಾಯೋ ಆಟ ನಾಟಕದ ವಿಮರ್ಶೆ ಮಾಡಿದರು. ಸಾಯಿಲಕ್ಷ್ಮೀ ಚಗಂತಿ ರಚನೆ ಮತ್ತು ನಿರ್ದೇಶನದ ಬೈ ಒನ್‌ ಗೆಟ್‌ ಟು (ಲೈಫ್‌ ಈಸ್‌ ನಾಟ್‌ ಬ್ಯುಸಿನೆಸ್‌) ತೆಲುಗು ನಾಟಕವನ್ನು ಹೈದರಾಬಾದ್‌ನ ಜಿ.ಪಿ.ಎಲ್‌ ಮೀಡಿಯಾ ತಂಡ ಅಭಿನಯಿಸಿತು. ಜಮುರಾ ಕಲಾವಿದರು ಪ್ರಾರ್ಥಿಸಿದರು. ಪಿ. ವೀರೇಂದ್ರಕುಮಾರ್‌ ನಿರೂಪಿಸಿದರು.

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.