ತರಳಬಾಳು ಶ್ರೀ ನೇತೃತ್ವದಲ್ಲಿ ಪಾದಯಾತ್ರೆ
ದ್ವಾರಸಮುದ್ರ ಕೆರೆಗೆ ಸಾವಿರಾರು ಜನರೊಂದಿಗೆ ತೆರಳಿ ಬಾಗಿನ ಅರ್ಪಿಸಿದ ಶ್ರೀಗಳು
Team Udayavani, Feb 9, 2020, 3:22 PM IST
ಹಳೇಬೀಡು: ತರಳಬಾಳು ಹುಣ್ಣಿಮೆಯ ಮಹೋತ್ಸವದ ಏಂಟನೇ ದಿನವಾದ ಶನಿವಾರದಂದು ರಣಘಟ್ಟ ನೀರಾವರಿ ಯೋಜನೆ ಶೀಘ್ರ ಅನುಷ್ಠಾನಕ್ಕಾಗಿ ತರಳಬಾಳು ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹಾಗೂ ಪುಷ್ಪಗಿರಿ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಪಾದಯಾತ್ರೆ ನಡೆಸಿದರು.
ಪಟ್ಟಣದ ರಾಜನಶಿರಿಯೂರು ವೃತ್ತದಿಂದ “ನಮ್ಮ ನಡಿಗೆ ದ್ವಾರಸಮುದ್ರದ ಕಡೆಗೆ’ಎಂಬ ಘೋಷ ವಾಕ್ಯದೊಂದಿದೆ ನೂರಾರು ಮುಖಂಡರು ಮತ್ತು ಸಾವಿರಾರು ಮಂದಿ ಸಾರ್ವಜನಿಕರು ಸೇರಿ ಪಾದಯಾತ್ರೆ ನಡೆಸಿ ದ್ವಾರಸಮುದ್ರಕೆರೆಗೆ ಬಾಗಿನ ಅರ್ಪಿಸಿದರು.
ಇಂಜಿನಿಯರ್ ಜೊತೆ ಚರ್ಚೆ: ದಶಕಗಳಿಂದ ಈ ಭಾಗದ ಜನತೆಗೆ ರಣಘಟ್ಟ ನೀರಾವರಿ ಯೋಜನೆಗೆ ಹೋರಾಟ ನಡೆಸಿದ್ದನ್ನು ಮನಗಂಡ ತರಳಬಾಳು ಶ್ರೀಗಳು ಅದಕ್ಕೆ ಸಂಬಂಧಿಸಿದ ನೀಲನಕ್ಷೆ ತರಿಸಿಕೊಂಡು ಸಂಬಂಧಪಟ್ಟ ಇಂಜಿನಿಯರ್ ಅವರನ್ನು ಕರೆಸಿಕೊಂಡು ಮಾಹಿತಿ ಪಡೆದರು. ರಣಘಟ್ಟ ಒಡ್ಡಿನ ಮೂಲಕವೇ ಹಳೇಬೀಡು, ಮಾದೀಹಳ್ಳಿ, ಜಾವಗಲ್ ಕೆರೆಗಳಿಗೆ ನೀರು ಹರಿಸಲು ಏನೆಲ್ಲ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಎಂಜಿನಿಯರ್ ಜೊತೆ ಚರ್ಚೆ ನಡೆಸಿದ್ದು, ಈ ಭಾಗದ ಜನರಿಗೆ ಮತ್ತೂಷ್ಟು ಆಶಾಭಾವನೆ ಮೂಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ