ಪ್ರಧಾನಿ ಮೋದಿಯವರ ಟೀಕೆ ಸಲ್ಲ
Team Udayavani, Oct 7, 2021, 9:00 PM IST
ಚಿತ್ರದುರ್ಗ: ನರೇಂದ್ರ ಮೋದಿ ಮೊದಲ ಸಲಪ್ರಧಾನಿಯಾದಾಗ ಮಾಡಿದ ಭಾಷಣದಲ್ಲಿ ಶೌಚಾಲಯದಬಗ್ಗೆ ಮಾತನಾಡಿದ್ದರು. ಶೌಚಾಲಯ ಎನ್ನುವುದು ಗೌರವದಪ್ರಶ್ನೆ ಎನ್ನುವುದು ಜನತೆಗೆ ಅರ್ಥವಾಗಿದೆ ಎಂದು ಶಾಸಕಜಿ.ಎಚ್. ತಿಪ್ಪಾರೆಡ್ಡಿ ಹೇಳಿದರು.
ಬಿಜೆಪಿ ಮಹಿಳಾ ಮೋರ್ಚಾದಿಂದ ಸೇವಾ ಮತ್ತುಸಮರ್ಪಣೆ ಅಭಿಯಾನದಡಿ ಬುಧವಾರ ಹಮ್ಮಿಕೊಂಡಿದ್ದನೇತ್ರ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಅವರುಮಾತನಾಡಿದರು. ನರೇಂದ್ರ ಮೋದಿಯವರು ಶೌಚಾಲಯದಬಗ್ಗೆ ಮಾತನಾಡಿದಾಗ ವಿಪಕ್ಷಗಳು ಗೇಲಿ ಮಾಡಿದ್ದವು.
ಆದರೆ ಈಗ ಆರೋಗ್ಯ, ಗೌರವ ಎಲ್ಲವೂ ಅರ್ಥವಾಗುತ್ತಿದೆ.ಚಿತ್ರದುರ್ಗದ ಮಹಿಳಾ ಮೋರ್ಚಾ ಹಮ್ಮಿಕೊಂಡಿರುವನೇತ್ರ ತಪಾಸಣೆ ಅತ್ಯುತ್ತಮ ಕಾರ್ಯಕ್ರಮ. ಬಡವರು ಇದರಪ್ರಯೋಜನ ಪಡೆದುಕೊಳ್ಳಿ. ಆಪರೇಷನ್ಗೆ ಹೆದರಬೇಡಿಎಂದು ಧೈರ್ಯ ತುಂಬಿದರು.
ಜಿಲ್ಲಾಧ್ಯಕ್ಷ ಎ. ಮುರಳಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆಶೈಲಜಾ ರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ಸಿದ್ದಾಪುರ ಮಾತನಾಡಿದರು. ಕಾರ್ಯಕ್ರಮದ ಸಂಚಾಲಕಿಜಯಶೀಲ ಮಹೇಶ್ವರಪ್ಪ, ಪ್ರಮುಖರಾದ ಭುವನೇಶ್ವರಿ,ಸರಸ್ವತಿ, ಎ.ರೇಖ, ಕೀರ್ತಾನಂದಮ್ಮ, ಕಾಂಚನ, ಕವಿತ,ಶಾಂತಮ್ಮ, ಚಂದ್ರಿಕಾ ಲೋಕನಾಥ್, ಮಂಜುಳಮ್ಮ, ಭಾರ್ಗವಿದ್ರಾವಿಡ್, ವಕ್ತಾರ ನಾಗರಾಜ್ಬೇದ್ರೆ ಮತ್ತಿತರರಿದ್ದರು. ಶಂಕರ್ನೇತ್ರಾಲಯದ ಡಾ.ಅಶ್ವಿನಿ, ಡಾ.ರವಿಕುಮಾರ್ ತಂಡದವರುನೇತ್ರ ತಪಾಸಣೆ ನಡೆಸಿದರು.