ಶೇಂಗಾಕ್ಕೆ ಕಂಟಕವಾಯ್ತು ಮಳೆಎಸ್. ರಾಜಶೇಖರ
Team Udayavani, Nov 14, 2021, 2:38 PM IST
ಮೊಳಕಾಲ್ಮೂರು: ಪಟ್ಟಣ ಹಾಗೂ ತಾಲೂಕಿನಾದ್ಯಂತಕೆಲ ದಿನಗಳಿಂದ ಸುರಿಯುತ್ತಿರುವ ಜಿಟಿ ಜಿಟಿ ಮಳೆಶೇಂಗಾ ಬೆಳೆಗೆ ಕುತ್ತು ತಂದಿಟ್ಟಿದೆ.ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವಮಳೆಯಿಂದಾಗಿ ರೈತರು, ವ್ಯಾಪಾರಸ್ಥರು ಹಾಗೂಸಾರ್ವಜನಕಿರು ಆತಂಕಗೊಂಡಿದ್ದಾರೆ.
ತಾಲೂಕಿನಪ್ರಮುಖ ಬೆಳೆಯಾದ ಶೇಂಗಾ ಕಟಾವಿಗೆ ಬಂದಸಮಯದಲ್ಲೇ ಮಳೆ ಕಾಟ ಶುರುವಾಗಿದೆ.ಅಲ್ಪ ಪ್ರಮಾಣದಲ್ಲಿ ಬೆಳೆದ ಶೇಂಗಾವನ್ನುಮಳೆಯಾಗುವುದಕ್ಕಿಂತ ಮುನ್ನವೇ ಬಹುತೇಕರೈತರು ಕಟಾವು ಮಾಡಿದ್ದಾರೆ. ಕೆಲವು ರೈತರುಶೇಂಗಾ ಕಟಾವು ಮಾಡುತ್ತಿದ್ದಂತೆಯೇ ಮಳೆಸುರಿಯಲಾರಂಭಿಸಿದೆ. ಹಾಗಾಗಿ ಕಟಾವು ಕಾರ್ಯವನ್ನುಅರ್ಧಕ್ಕೆ ನಿಲ್ಲಿಸಿದ್ದು, ಶೇಂಗಾ ಬಳ್ಳಿಯನ್ನು ಬಣವೆಗೆಹಾಕಲು ಆಗುತ್ತಿಲ್ಲ.
ಕಟಾವು ಆಗುವ ಶೇಂಗಾ ಬೆಳೆಮಸಿ ರೋಗ ಇಲ್ಲವೆ ಬೂದಿ ರೋಗಕ್ಕೆ ತುತ್ತಾಗುವಭೀತಿ ಎದುರಾಗಿರುವುದರಿಂದ ಮೇವಿನ ಕೊರತೆಎದುರಾಗುವ ಸಾಧ್ಯತೆಯೂ ಇಲ್ಲದಿಲ್ಲ.ಶೇಂಗಾ ಬೆಳೆ ಕಟಾವಿನ ಸಮಯ ಮುಗಿದಿದೆ.ಇದೇ ರೀತಿ ಮಳೆ ಮುಂದುವರೆದಲ್ಲಿ ಕಟಾವುಮಾಡದ ಶೇಂಗಾ ಮೊಳಕೆಯೊಡೆದು ಹಾನಿಯಾಗುವಆತಂಕ ಎದುರಾಗಿದೆ.
ಕಟಾವು ಮಾಡಿದ ಶೇಂಗಾವನ್ನುಮಳೆಗೆ ಹಾನಿಗೀಡಾಗದಂತೆ ತಾಡಪಾಲುಗಳಿಂದರಕ್ಷಿಸಿಕೊಳ್ಳುವುದು ಹರಸಾಹಸ ವಾಗಿದೆ. ಬಣವೆಗೆಹಾಕಿದ ಶೇಂಗಾ ಬಳ್ಳಿ ಬಿಸಿಲಿಲ್ಲದೆ ಕೊಳೆತುಹಾನಿಯಾಗುವ ಸ್ಥಿತಿ ನಿರ್ಮಾಣವಾಗಿದೆ. ನಿತ್ಯವೂಸುರಿವ ಮಳೆ ಶೇಂಗಾಕ್ಕೆ ಕಂಟಕವಾಗಿ ಪರಿಣಮಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾಶ್ರೀ: ಮೇ 27ರವರೆಗೆ ನ್ಯಾಯಾಂಗ ಬಂಧನ
Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ
MUST WATCH
ಹೊಸ ಸೇರ್ಪಡೆ
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್