ಗುರು ತಿಪ್ಪೇರುದ್ರಸ್ವಾಮಿರಥಕ್ಕೆ ಕಲಶ ಸ್ಥಾಪನೆ
Team Udayavani, Mar 19, 2019, 10:52 AM IST
ನಾಯಕನಹಟ್ಟಿ: ತಿಪ್ಪೇರುದ್ರಸ್ವಾಮಿ ಜಾತ್ರೆ ಅಂಗವಾಗಿ ಸೋಮವಾರ ರಥಕ್ಕೆ ಕಲಶ ಸ್ಥಾಪನೆ ಮಾಡಲಾಯಿತು. ಮಾ. 22 ರಂದು ಜರುಗಲಿರುವ ಜಾತ್ರೆಗೆ ರಥವನ್ನು ಸಿದ್ಧಗೊಳಿಸುವ ಕಾರ್ಯದಲ್ಲಿ ಕಲಶ ಸ್ಥಾಪನೆ ಮೊದಲ ಸಾಂಪ್ರದಾಯಿಕ ಕಾರ್ಯವಾಗಿದೆ. ಈ
ಬಾರಿ ರಥದ ಹಿಂಬದಿಯ ಒಂದು ಗಾಲಿಯನ್ನು ದುರಸ್ತಿಗೊಳಿಸಲಾಗಿದೆ. ಕಳೆದ ವರ್ಷ ರಥದ ಎಲ್ಲ ಒಂಭತ್ತು ಅಂತಸ್ತುಗಳನ್ನು ಪುನರ್ ಜೋಡಿಸಲಾಗಿತ್ತು.
ಸಂಜೆ ಒಳಮಠದಿಂದ ಐದು ಅಡಿ ಎತ್ತರದ ಕಲಶವನ್ನು ಮೆರವಣಿಗೆಯ ಮೂಲಕ ತರಲಾಯಿತು. ದೇವಾಲಯದ ಸಾಂಪ್ರದಾಯಿಕ ವಾದ್ಯಗಳು, ನಂದಿಧ್ವಜ ಮೆರವಣಿಗೆಯಲ್ಲಿದ್ದವು. ಆಯಗಾರರು, ರಥವನ್ನು ಮುನ್ನಡೆಸುವವರು ಹಾಗೂ ಸಾರ್ವಜನಿಕರು ಕಲಶಕ್ಕೆ ಪೂಜೆ ಸಲ್ಲಿಸಿದರು. ಕಲಶದ ಮೇಲ್ಭಾಗ ಹಾಗೂ ಕೆಳಭಾಗವನ್ನು ಹಗ್ಗದಿಂದ ಬಿಗಿಯಲಾಗಿತ್ತು. ನಿಧಾನವಾಗಿ ಕಲಶವನ್ನು ರಥದ
ಮೇಲ್ಭಾಗಕ್ಕೆ ಒಯ್ದು ಪ್ರತಿಷ್ಠಾಪಿಸಲಾಯಿತು. ಕಲಶ ರಥದ ಮೇಲೇರುತ್ತಿದ್ದಂತೆ ಭಕ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು.
ಕಲಶ ಸ್ಥಾಪನೆಯ ಮೊದಲ ದಿನ ನಾಲ್ಕು ಸಾಲು ಬಾವುಟಗಳನ್ನು ಕಟ್ಟಲಾಯಿತು. ಕಲಶಕ್ಕೆ ಬೃಹತ್ ಹೂವಿನ ಹಾರ ಹಾಕಿ ಪೂಜೆ ಸಲ್ಲಿಸಲಾಯಿತು. ದೇವಾಲಯ ಸಮಿತಿ ಅಧ್ಯಕ್ಷ ಜೆ.ಪಿ. ರವಿಶಂಕರ್, ಸದಸ್ಯರಾದ ರುದ್ರಮುನಿ, ಗೋವಿಂದರಾಜ್, ನಾಗಪ್ಪ, ಮುನಿಯಪ್ಪ, ಸಿಬ್ಬಂದಿ ಸತೀಶ್ ಮತ್ತಿತರರು ಇದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…