ರೈತರಿಗೆ ಬಿತ್ತನೆ ಬೀಜ-ಗೊಬ್ಬರ ವಿತರಣೆ
Team Udayavani, Jun 7, 2020, 4:38 PM IST
ಸಾಂದರ್ಭಿಕ ಚಿತ್ರ
ಹೊಳಲ್ಕೆರೆ: ರಾಜ್ಯ ಸರಕಾರ ಮೆಕ್ಕೆಜೋಳ ಬೆಳೆದ ರೈತರಿಗೆ ನೆರವು ನೀಡಲು 660 ಕೋಟಿ ರೂ. ಅನುದಾನ ಮೀಸಲು ಮಾಡಿದ್ದು, ಬೆಂಬಲ ಬೆಲೆ ಜತೆ ಮೆಕ್ಕೆಜೋಳ ಬೆಳೆದ ರೈತರಿಗೆ ತಲಾ 5000 ರೂ. ನೀಡಲಿದೆ ಎಂದು ಶಾಸಕ ಎಂ.ಚಂದ್ರಪ್ಪ ತಿಳಿಸಿದರು.
ಪಟ್ಟಣ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ರೈತರಿಗೆ ಬೀಜಗೊಬ್ಬರ ವಿತರಿಸಿ ಮಾಡಿ ಮಾತನಾಡಿದರು. ಕೋವಿಡ್-19 ಸಂಕಷ್ಟ ಇದ್ದರೂ ಭಾರತ ಸರಕಾರ ದೇಶದ 110ಕೋಟಿ ಜನರಿಗೆ ಒಂದಿಲೋಂದು ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ 20ಲಕ್ಷ ಕೋಟಿ ರೂ ಅನುದಾನ ನೀಡಿದೆ. ಕೇಂದ್ರ ಜತೆಗೆ ರಾಜ್ಯ ಸರಕಾರವು ಸಂಕಷ್ಟದಲ್ಲಿರುವ ಜನರಿಗೆ ನೆರವು ನೀಡಲು ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು.
ರೈತರ ಕಲ್ಯಾಣಕ್ಕೆ ಸರಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದ್ದು, ಬೀಜ ಗೊಬ್ಬರ ಮೇಲೆ ರಿಯಾಯಿತಿ, ಕೃಷಿ ಪರಿಕರ, ಬದು ನಿರ್ಮಾಣ, ಕೃಷಿ ಹೊಂಡ, ತೋಟಗಾರಿಕೆ ಉತ್ತೇಜನಕ್ಕೆ ಹನಿ ನೀರಾವರಿ ಸೌಲಭ್ಯ ಸೇರಿದಂತೆ ಸಾಕಷ್ಟು ಸೌಲಭ್ಯಗಳಿದ್ದು ರೈತರು ಕೃಷಿ ಇಲಾಖೆಗೆ ಭೇಟಿ ನೀಡಿ ಸೌಲಭ್ಯಗಳನ್ನು ಪಡೆದುಕೊಳ್ಳಬೇಕೆಂದರು. ಸಹಾಯಕ ಕೃಷಿ ನಿರ್ದೇಶಕ ಶ್ರೀನಿವಾಸಲು, ಪಪಂ ಸದಸ್ಯ ಕೆ.ಸಿ.ರಮೇಶ್, ಪಿ. ಆರ್. ಮಲ್ಲಿಕಾರ್ಜುನಸ್ವಾಮಿ, ಬಸವರಾಜ್ ಯಾದವ್, ಮುರುಗೇಶ್ ಮತ್ತೀತರರು ಇದ್ದರು.