ಲಾರಿ ಅಡ್ಡಗಟ್ಟಿ ಗುಟ್ಕಾ ಕಳುವಿಗೆ ಯತ್ನ, ಪೊಲೀಸರನ್ನು ಕಂಡು ಪರಾರಿಯಾದ ಕಳ್ಳರು
Team Udayavani, Dec 1, 2019, 5:29 PM IST
ಚಿತ್ರದುರ್ಗ: ಗುಟ್ಕಾ ಸಾಗಿಸುತ್ತಿದ್ದ ಲಾರಿ ಚಾಲಕನನ್ನು ಡಾಬಾದಲ್ಲಿ ಕೂಡಿಟ್ಟು ಸುಮಾರು 30 ಲಕ್ಷ ರೂ ಮೌಲ್ಯದ ಗುಟ್ಕಾ ಕಳ್ಳತನ ಮಾಡುಲು ಯತ್ನಿಸಿರುವ ಘಟನೆ ನಡೆದಿದೆ.
ಹಿರಿಯೂರು ತಾಲೂಕಿನ ಗೊಲ್ಲಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಿಮಲ್ ಪಾನ್ ಮಸಾಲ ತುಂಬಿದ್ದ ಲಾರಿಯನ್ನು ಕಾರಿನಲ್ಲಿ ಬಂದು ಅಡ್ಡಗಟ್ಟಿರುವ ದುಷ್ಕರ್ಮಿಗಳು ಚಾಲಕನನ್ನು ಇಳಿಸಿ ಪಕ್ಕದ ಡಾಬಾಗೆ ಕರೆದೊಯ್ದು ಸುಮಾರು ಒಂದು ಗಂಟೆ ಬಂಧಿಸಿಟ್ಟುಕೊಂಡಿದ್ದಾರೆ.
ತುಮಕೂರಿನಿಂದ ಬಳ್ಳಾರಿ ತಲುಪಬೇಕಿದ್ದ ಗುಟ್ಕಾ ಲಾರಿ ಬರುವುದು ವಿಳಂಭವಾದ ಹಿನ್ನೆಲೆಯಲ್ಲಿ ಕಂಪನಿಯವರು ಜಿಪಿಎಸ್ ಮೂಲಕ ಲಾರಿಯ ಲೊಕೇಶನ್ ಪರಿಶೀಲಿಸಿದ್ದಾರೆ.
ಈ ವೇಳೆ ಸಾಣಿಕೆರೆ ಬಳಿ ಲಾರಿ ನಿಂತಿರುವುದು ಗೊತ್ತಾಗಿದೆ. ಅನುಮಾನಗೊಂಡು ಚಳ್ಳಕೆರೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಡಿವೈಎಸ್.ಪಿ ರೊಷನ್ ಜಮೀರ್, ವೃತ್ತ ನಿರೀಕ್ಷಕ ಆನಂದ್ ಹಾಗೂ ಪಿಎಸ್ಐ ನೂರ್ ಅಹಮ್ಮದ್ ನೇತೃತ್ವದಲ್ಲಿ ತಂಡ ರಚಿಸಿ ಹೊರಟಾಗ ಪಾನ್ ಮಸಾಲ ಡಬ್ಬಿಗಳಿದ್ದ ಲಾರಿ ಹೆಗ್ಗೆರೆ ಸಮೀಪ ಕಾಪರಹಳ್ಳಿಗೆ ಹೊಗುವ ರಸ್ತೆಯಲ್ಲಿ ಸಿಕ್ಕಿದೆ.
ಕಂಪನಿಯ ಲಾರಿಯಲ್ಲಿದ್ದ ಗುಟ್ಖಾವನ್ನು ಮತ್ತೊಂದು ಲಾರಿಗೆ ತುಂಬುತ್ತಿದ್ದ ದರೋಡೆಕೋರರು ಪೊಲೀಸರನ್ನು ಕಂಡು ಪರಾರಿಯಾಗಿದ್ದಾರೆ.
ಇತ್ತ ಲಾರಿ ಚಾಲಕನನ್ನು ಗೊಲ್ಲಹಳ್ಳಿ ಬಳಿ ಬಿಟ್ಟು ಹೋಗಿದ್ದು ಲಾರಿ ಹುಡುಕಾಡುತ್ತಿದ್ದ ಎನ್ನಲಾಗಿದೆ. ಈ ಕುರಿತು ಲಾರಿ ಚಾಲಕನಿಂದ ದೂರು ದಾಖಲಿಸಿಕೊಂಡು ಕಳ್ಳರ ಗ್ಯಾಂಗ್ ಪತ್ತೆಗೆ ಬಲೆ ಬೀಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ
Paper leak case: ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ; 15 ಮಂದಿ ಆರೋಪಿಗಳು ಖುಲಾಸೆ
ಉಡುಪಿಯಲ್ಲಿ ಕೋಮು ಪ್ರಚೋದನೆಯ ಭಾಷಣ; ಕಾಜಲ್ ಹಿಂದುಸ್ತಾನಿ ವಿರುದ್ಧದ FIRಗೆ ಮಧ್ಯಂತರ ತಡೆ
MUST WATCH
ಹೊಸ ಸೇರ್ಪಡೆ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ