Chitradurga: ಈಜಲು ಹೋಗಿದ್ದ ವ್ಯಕ್ತಿ ಸಾವು
Team Udayavani, Oct 13, 2023, 12:17 PM IST
ಭರಮಸಾಗರ (ಚಿತ್ರದುರ್ಗ): ಇಲ್ಲಿನ ದೊಡ್ಡಕೆರೆಯಲ್ಲಿ ಈಜಲು ಹೋಗಿದ್ದ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಭರಮಸಾಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಸಮೀಉಲ್ಲಾ (28) ಮೃತಪಟ್ಟ ವ್ಯಕ್ತಿ.
ಸುಮಾರು 11 ಗಂಟೆ ಸಮಯ ಕೆರೆಗೆ ಈಜಲು ತೆರಳಿದ್ದ ಸಮೀ ಉಲ್ಲಾ ಈಜು ಬಾರದೆ ಮುಳುಗುತ್ತಿದ್ದನ್ನು ಕಂಡು ಸ್ಥಳೀಯರು ರಕ್ಷಿಸಿ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದಾರೆ.
ಬಳಿಕ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಕುರಿತು ಆಸ್ಪತ್ರೆ ಸಿಬ್ಬಂದಿಗಳು ಮಾಹಿತಿ ನೀಡಿದರು. ಮೃತರು ಪತ್ನಿ ಇಬ್ಬರು ಮಕ್ಕಳನ್ನು ಹೊಂದಿದ್ದರು.