Fraud Case ಸಿಬಿಐ ಹೆಸರಿನಲ್ಲಿ ಬೆದರಿಸಿ ವೈದ್ಯೆಗೆ 10 ಲ.ರೂ. ವಂಚನೆ
Team Udayavani, Mar 2, 2024, 9:50 PM IST
ಮಂಗಳೂರು: ಸಿಬಿಐ ಹೆಸರಿನಲ್ಲಿ ಬೆದರಿಕೆ ಹಾಕಿ ಡಾ| ಲಕ್ಷ್ಮೀ ಅವರಿಂದ 10 ಲ.ರೂ.ಗಳನ್ನು ಪಡೆದು ವಂಚಿಸಿರುವ ಬಗ್ಗೆ ದೂರು ದಾಖಲಾಗಿದೆ.
ಡಾ| ಲಕ್ಷ್ಮೀಗೆ ಫೆ.29ರಂದು ಸಿಬಿಐ ಅಧಿಕಾರಿ ಎಂದು ಪರಿಚಯಿಸಿಕೊಂಡ ಅಪರಿಚಿತ ವ್ಯಕ್ತಿಯೋರ್ವ ಕರೆ ಮಾಡಿ, “ನಿಮ್ಮ ಆಧಾರ್ ಸಂಖ್ಯೆಯಿಂದ ಖರೀದಿಸಿದ ಮೊಬೈಲ್ನಿಂದ ಕಾನೂನು ಬಾಹಿರ ಸಂದೇಶ ಮತ್ತು ಜಾಹೀರಾತುಗಳನ್ನು ಕಳುಹಿಸಲಾಗಿದೆ.
ಹಾಗಾಗಿ ನಿಮ್ಮ ವಿರುದ್ಧ ಬಂಧನ ವಾರಂಟ್ ಜಾರಿಯಾಗಿದೆ. 10 ಲ.ರೂ.ಗಳನ್ನು ಸೆಕ್ಯುರಿಟಿ ಡಿಪಾಸಿಟ್ ಆಗಿ ನೀಡಬೇಕು. ಇಲ್ಲದಿದ್ದರೆ ಬಂಧಿಸಲಾಗುವುದು’ ಎಂದು ಹೇಳಿದ್ದ. ಇದನ್ನು ನಂಬಿದ ಡಾ| ಲಕ್ಷ್ಮೀ ಅಪರಿಚಿತ ವ್ಯಕ್ತಿ ನೀಡಿದ ಬ್ಯಾಂಕ್ ಖಾತೆಗಳಿಗೆ ಅದೇ ದಿನ 10 ಲ.ರೂ.ಗಳನ್ನು ವರ್ಗಾಯಿಸಿದ್ದಾರೆ.
ಬಳಿಕ ತಾನು ವಂಚನೆಗೆ ಒಳಗಾಗಿರುವುದು ತಿಳಿದು ಬಂದ ಹಿನ್ನೆಲೆಯಲ್ಲಿ ಮಂಗಳೂರಿನ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.