ಕೋಮು ಕೆರಳಿಸುವ ಸಂದೇಶ: ಬಂಟ್ವಾಳದಲ್ಲಿ ಇಬ್ಬರು ಸೆರೆ
Team Udayavani, Jan 12, 2018, 3:22 PM IST
ಬಂಟ್ವಾಳ: ಕೋಮು ಪ್ರಚೋದನಕಾರಿ ಸಂದೇಶಗಳನ್ನು ವಾಟ್ಸಪ್ನಲ್ಲಿ ಕಳುಹಿಸುತ್ತಿದ್ದ ಇಬ್ಬರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಕೋಮು ಸೂಕ್ಷ್ಮ ಜಿಲ್ಲೆಯಲ್ಲಿ ಹದ್ದಿನ ಕಣ್ಣು ಇಟ್ಟಿರುವ ಪೊಲೀಸರು ಕಾರ್ಯಾಚರಣೆ ನಡೆಸಿ ವಾಟ್ಸಾಪ್ ಗ್ರೂಪ್ ಎಡ್ಮಿನ್ ಆಗಿದ್ದ ಇರಾದ ಸತೀಶ್ ಮತ್ತು ಬಾಲಕೃಷ್ಣ ಪೂಜಾರಿ ಎನ್ನುವರನ್ನು ವಶಕ್ಕೆ ಪಡೆದಿದ್ದಾರೆ.
ಇದು ಧಾರ್ಮಿಕ ಭಾವನೆಗಳನ್ನು ಹಾನಿಯುಂಟುಮಾಡುವುದು ಮತ್ತು ಮಹಿಳೆಯೊಬ್ಬಳ ಚಾರಿತ್ರ್ಯ ಹರಣ ಮಾಡುವ ಸಂದೇಶಗಳನ್ನು 2 ವಾಟ್ಸಾಪ್ ಗ್ರೂಪ್ಗ್ಳಲ್ಲಿ ಬಂಧಿತರು ಪೋಸ್ಟ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಐಪಿಸಿ ಸೆಕ್ಷನ್ 153(ಎ) , 354 ಮತ್ತು 504 ರ ಅಡಿ ಪ್ರಕರಣ ದಾಖಲಾಗಿದೆ.