“ಮಹಿಳೆ ಪುರುಷನ ಜತೆ ಸೇರಿ ಸಮಾಜ ಕಟ್ಟಲಿ’
Team Udayavani, Mar 19, 2017, 2:00 PM IST
ಬೆಳ್ತಂಗಡಿ : ಹೆಣ್ಣು ಸಮಾಜವನ್ನು ಸರಿದಾರಿಯಲ್ಲಿ ಕೊಂಡೊಯ್ಯಬಲ್ಲ ಜಾಣ್ಮೆ ಉಳ್ಳವಳು. ಆಕೆ ಪುರುಷನ ಕೈಕೆಳಗೆ ಬದುಕುವುದನ್ನು ಬಿಟ್ಟು ಪುರುಷನ ಜತೆ ಜತೆಯಾಗಿ ಸಮಾಜವನ್ನು ಕಟ್ಟುವ ಕಾರ್ಯವನ್ನು ಮಾಡಬೇಕು. ಮಹಿಳೆ ತನ್ನ ನಿಜವಾದ ಸಾಮರ್ಥ್ಯವನ್ನು ತೋರಿಸಬೇಕಾಗಿದೆ ಎಂದು ಸಾಹಿತಿ ಅತ್ರಾಡಿ ಅಮೃತಾ ಶೆಟ್ಟಿ ಹೇಳಿದರು.
ಅವರು ಜೇಸಿಐ ಬೆಳ್ತಂಗಡಿ ಮಂಜುಶ್ರೀನ ಜೇಸಿರೇಟ್ ವಿಭಾಗದಿಂದ ನಡೆದ ಮಹಿಳಾ ದಿನಾಚರಣೆ ಮತ್ತು ಸಾಧಕ ಮಹಿಳೆಯರಿಗೆ ಸಮ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ವಲಯಾಧಿಕಾರಿಗಳಾದ ಚಿದಾನಂದ ಇಡ್ಯಾ ಮತ್ತು ವಸಂತ ಶೆಟ್ಟಿ ಶ್ರದ್ಧಾ, ಜೇಸಿರೇಟ್ ಅಧ್ಯಕ್ಷೆ ಅಮೃತಾ, ಜೇಜೆಸಿ ಅಧ್ಯಕ್ಷ ಮನೋಜ್ ಎಸ್. ಆರ್., ಜೇಸಿರೇಟ್ ಪೂರ್ವಾಧ್ಯಕ್ಷೆ ಉಮಾ ಆರ್. ರಾವ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಮಾಜ ಸೇವಾ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿ ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದ ಅಂಗನವಾಡಿ ಕಾರ್ಯಕರ್ತೆ ಜಾನಕಿ ವೇಣೂರು ಅವರಿಗೆ “ಜೇಸಿ ಸಮಾಜ ಸೇವಾ ರತ್ನ’ ಪ್ರಶಸ್ತಿ, ವಿದ್ಯಾಭ್ಯಾಸದಲ್ಲಿನ ಶ್ರೇಷ್ಠ ಸಾಧನೆಗೆ ಬಳಂಜದ ಲಲಿತಾ ಟೀಚರ್ ಅವರಿಗೆ “ಜೇಸಿ ವಿದ್ಯಾ ರತ್ನ’ ಪ್ರಶಸ್ತಿ, ವ್ಯವಹಾರ ಕ್ಷೇತ್ರದಲ್ಲಿನ ಸಾಧನೆಗೆ ಉಜಿರೆ ಪ್ರಕಾಶ್ ಇಲೆಕ್ಟ್ರಾನಿಕ್ಸ್ನ ಆಡಳಿತ ನಿರ್ದೇಶಕಿ ಸುಮನಾ ಪಿ. ಶೆಟ್ಟಿ ಅವರಿಗೆ “ಜೇಸಿ ಉದ್ಯಮ ರತ್ನ’ ಪ್ರಶಸ್ತಿ, ಕೃಷಿ ಕ್ಷೇತ್ರದಲ್ಲಿನ ಸಾಧನೆಗೆ ನಾಲ್ಕೂರಿನ ಬೇಬಿ ಶೆಟ್ಟಿ ಅವರಿಗೆ “ಜೇಸಿ ಕೃಷಿ ರತ್ನ’ ಪ್ರಶಸ್ತಿ, ಕ್ರೀಡಾ ಕ್ಷೇತ್ರದಲ್ಲಿನ ವಿಶೇಷ ಸಾಧನೆಗೆ ಉಜಿರೆ ಎಸ್ಡಿಎಂ ಕಾಲೇಜಿನ ಕ್ರೀಡಾ ತರಬೇತಿದಾರೆ ಶಾರದಾ ಅವರಿಗೆ “ಜೇಸಿ ಖೇಲ್ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ರಾಜ್ಯಮಟ್ಟದ ಯುವಜನ ಮೇಳದಲ್ಲಿ ಯುವತಿಯರ ವಿಭಾಗದ ಜನಪದ ಮತ್ತು ಕೋಲಾಟದಲ್ಲಿ ಪ್ರಥಮ ಸ್ಥಾನ ಗಳಿಸಿದ ಶ್ರೀ ಗುರುಮಿತ್ರ ಸಮೂಹ ಬೆಳ್ತಂಗಡಿಯ ಹರ್ಷಿತಾ ಟಿ. ಪಿ., ಅಮƒತಾ ಎನ್.ಎಸ್., ರಾಜಶ್ರೀ, ರೂಪಶ್ರೀ, ಪೂಜಾಶ್ರೀ, ಕಾವ್ಯ, ಶಾಲಿನಿ ಬೆಳಾಲ್, ಅಶ್ವಿತಾ ಧರ್ಮಸ್ಥಳ, ಸೌಜನ್ಯ ಉಜಿರೆ, ಲಿಖೀತಾ, ಪೂರ್ಣಿಮಾ ಬೆಳ್ತಂಗಡಿ, ಶ್ವೇತಾ ಉಜಿರೆ, ತೀರ್ಥ ಧರ್ಮಸ್ಥಳ ಅವರನ್ನು ಗೌರವಿಸಲಾಯಿತು.
ಘಟಕಾಧ್ಯಕ್ಷ ಸಂತೋಷ್ ಪಿ. ಕೋಟ್ಯಾನ್ ಪ್ರಸ್ತಾವಿಸಿ, ಸ್ವಾಗತಿಸಿದರು. ಅನುರಾಧ ಸುಭಾಶ್ಚಂದ್ರ, ಮಮತಾ ಶೆಟ್ಟಿ, ಪ್ರೀತಿ ಆರ್. ರಾವ್, ಹೇಮಾವತಿ, ಚಂದ್ರಹಾಸ ಬಳಂಜ ಮತ್ತು ಸತೀಶ್ ಸುವರ್ಣ ಅತಿಥಿಗಳನ್ನು ಮತ್ತು ಸಮ್ಮಾನಿತರನ್ನು ಪರಿಚಯಿಸಿದರು. ಸ್ವಾತಿ ಜೇಸಿವಾಣಿ ಉದ್ಘೋಷಿಸಿದರು. ಜೇಸಿ ಕಾರ್ಯದರ್ಶಿ ರಂಜಿತ್ ಎಚ್.ಡಿ. ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
MUST WATCH
ಹೊಸ ಸೇರ್ಪಡೆ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ