ಚಾರ್ಮಾಡಿ ಅಥವಾ ಕಕ್ಕಿಂಜೆಯಲ್ಲಿ ಹೊರಠಾಣೆ ತೆರೆಯಲು ಸಲಹೆ


Team Udayavani, Jun 29, 2017, 3:35 AM IST

28-KRK-17.jpg

ಬೆಳ್ತಂಗಡಿ: ಧರ್ಮಸ್ಥಳ ಪೊಲೀಸ್‌ ಠಾಣಾ ವ್ಯಾಪ್ತಿಯ ಚಾರ್ಮಾಡಿಯಲ್ಲಿ ಪೊಲೀಸ್‌ ಹೊರಠಾಣೆಯನ್ನು ತೆರೆಯುವ ಬಗ್ಗೆ  ಪ್ರಸ್ತಾವಿತ ಚಾರ್ಮಾಡಿ ಪೊಲೀಸ್‌ ಹೊರಠಾಣಾ ವ್ಯಾಪ್ತಿಗೆ ಒಳಪಡುವ ಗ್ರಾಮಗಳಾದ ಚಿಬಿದ್ರೆ, ಚಾರ್ಮಾಡಿ, ತೋಟತ್ತಾಡಿ, ಮುಂಡಾಜೆ, ನೆರಿಯಾ ಗ್ರಾಮಗಳ ಸಾರ್ವಜನಿಕರ ಜನಾಭಿಪ್ರಾಯವನ್ನು ಚಾರ್ಮಾಡಿ ಗ್ರಾಮ ಪಂಚಾಯತ್‌ ಸಭಾಭವನದಲ್ಲಿ ಪ‌ಡೆಯಲಾಯಿತು.

ಈ ಸಭೆಯಲ್ಲಿ ಹಾಜರಿದ್ದ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರಲ್ಲಿ ಕೆಲವರು ಚಾರ್ಮಾಡಿಯಲ್ಲಿಯೇ ರಠಾಣೆಯನ್ನು ಆರಂಭಿಸುವಂತೆಯೂ ಇನ್ನು ಕೆಲವರು ಕಕ್ಕಿಂಜೆಯಲ್ಲಿ ಹೊರಠಾಣೆ ತೆರೆಯುವಂತೆಯೂ ಅಭಿಪ್ರಾಯ ವ್ಯಕ್ತಪಡಿಸಿದರು.

ಕಕ್ಕಿಂಜೆಯೇ ಸೂಕ್ತ 
ಚಾರ್ಮಾಡಿ ಪಂಚಾಯತ್‌ ಮಾಜಿ ಅಧ್ಯಕ್ಷ  ಎ.ಮಮ್ಮಿಕುಂಞಿ ಮಾತನಾಡಿ “ಧರ್ಮಸ್ಥಳ ಪೊಲೀಸ್‌ ಠಾಣೆಗೆ ಒಳಪಟ್ಟ ಪ್ರಸ್ತಾವಿತ ಹೊರಠಾಣೆಯನ್ನು ಚಿಬಿದ್ರೆ ಗ್ರಾಮದ ಕಕ್ಕಿಂಜೆ ಪೇಟೆಯಲ್ಲಿಯೇ ಮಾಡಿದರೆ ನೆರಿಯ, ತೋಟತ್ತಾಡಿ, ಮುಂಡಾಜೆ ಗ್ರಾಮದ ಸಾರ್ವಜನಿಕರಿಗೆ ಹತ್ತಿರವಾಗುತ್ತದೆ. ಅಲ್ಲದೆ ಕಕ್ಕಿಂಜೆ ಪೇಟೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದ್ದು ಪೊಲೀಸ್‌ ಹೊರಠಾಣೆಯ ಅತೀ ಆವಶ್ಯಕತೆಯಾಗಿದೆ’ ಎಂದವರು ತಿಳಿಸಿದರು.

ತಾ.ಪಂ. ಸದಸ್ಯ ಕೊರಗಪ್ಪ ಗೌಡ ಚಾರ್ಮಾಡಿ ಅವರು ಮಾತನಾಡಿ “ಧರ್ಮಸ್ಥಳ ಪೊಲೀಸ್‌ ಠಾಣೆಗೆ ಒಳಪಟ್ಟ ಪ್ರಸ್ತಾವಿತ ಹೊರ ಠಾಣೆಗೆ 50 ಸೆಂಟ್ಸ್‌ ಜಾಗವನ್ನು ಗ್ರಾಮ ಪಂಚಾಯತ್‌ ಸಾಮಾನ್ಯ ಸಭೆಯಲ್ಲಿ ಮೀಸಲಿಡಲು ನಿರ್ಣಯಿಸಲಾಗಿದೆ’ ಎಂದರು. “ಚಾರ್ಮಾಡಿಯಲ್ಲಿ ಈಗ ಇರುವ ಚೆಕ್‌ಪೋಸ್ಟ್‌ ಅಲ್ಲೇ ಇರುವುದು ಸೂಕ್ತ. ಪ್ರಸ್ತಾವಿತ ಹೊರಠಾಣೆಯನ್ನು ಚಿಬಿದ್ರೆ ಗ್ರಾಮದ ಕಕ್ಕಿಂಜೆಯಲ್ಲಿ ಪ್ರಾರಂಭಿಸುವುದು ಉತ್ತಮವಾಗಿದ್ದು ನೆರಿಯ, ತೋಟತ್ತಾಡಿ, ಮುಂಡಾಜೆ ಹಾಗೂ ಚಾರ್ಮಾಡಿ ಗ್ರಾಮದವರಿಗೆ ಕೇಂದ್ರವಾಗಿರುತ್ತದೆ’ ಎಂದು ನೆರಿಯ ಪಂಚಾಯತ್‌ ಅಧ್ಯಕ್ಷ ಪಿ. ಮಹಮ್ಮದ್‌ ಅಭಿಪ್ರಾಯ ವ್ಯಕ್ತಪಡಿಸಿದರು.

ಅಕ್ರಮಕ್ಕೆ ಕಡಿವಾಣ ಹಾಕಿ
ಬಜರಂಗ ದಳ ಸಂಚಾಲಕ ಗಣೇಶ್‌ ಕೋಟ್ಯಾನ್‌ ಅವರು ಮಾತನಾಡಿ “ಕಾನೂನು ಬಾಹಿರ ಚಟುವಟಿಕೆ, ಅಕ್ರಮ ಗೋ ಸಾಗಾಟಗಳಿಂದಾಗಿ ಗ್ರಾಮದಲ್ಲಿ ಶಾಂತಿ, ಸುವ್ಯವಸ್ಥೆ ಹದಗೆಡುತ್ತಿದ್ದು, ಇವುಗಳನ್ನು ತಡೆಗಟ್ಟಲು ಪ್ರಸ್ತುತ ಇರುವ ವಾಹನ ತಪಾಸಣ ಸ್ಥಳದಲ್ಲಿಯೇ ಪೊಲೀಸ್‌ ಹೊರಠಾಣೆ ಅಗತ್ಯವಾಗಿದೆ’ ಎಂದರು. ಮುಂಡಾಜೆ ಗ್ರಾಮವನ್ನು ಬೆಳ್ತಂಗಡಿ ಠಾಣಾ ವ್ಯಾಪ್ತಿಗೆ ಸೇರಿಸಬೇಕು. ಇಲ್ಲವಾದ್ದಲ್ಲಿ ಚಾರ್ಮಾಡಿ ಅಥವಾ ಕಕ್ಕಿಂಜೆಯಲ್ಲಿ ಹೊರಠಾಣೆಯನ್ನು ನಿರ್ಮಿಸಬೇಕು. ಇಲ್ಲಿ ಅರ್ಜಿ ವಿಚಾರಣೆ, ಪಾಸ್‌ಪೋರ್ಟ್‌ ಪರಿಶೀಲನೆ, ಧ್ವನಿವರ್ಧಕ ಬಳಕೆಗೆ ಪರವಾನಿಗೆಗೆ, ಕ್ರೀಡಾ ಪರವಾನಿಗೆಗೆ ಧರ್ಮಸ್ಥಳ ಠಾಣೆಗೆ ಅಲೆಯುವುದು ನಿಲ್ಲಬೇಕು ಎಂದು ಯಂಗ್‌ ಚಾಲೆಂಜರ್ಸ್‌ ನ್ಪೋರ್ಟ್ಸ್ ಕ್ಲಬ್‌ ಸಂಚಾಲಕ ನಾಮದೇವ್‌ ಮುಂಡಾಜೆ ಹೇಳಿದರು.

ನೆರಿಯ ತಾ.ಪಂ. ಸದಸ್ಯ ವಿ. ಟಿ. ಸೆಬಾಸ್ಟಿಯನ್‌, ಪೊಲೀಸರು ಹೆಚ್ಚು ವಾಹನ ತಪಾಸಣೆ ಮಾಡಬೇಕು. ಚಾಲನಾ ಪರವಾನಿಗೆ ಇಲ್ಲದೆ ಮಕ್ಕಳು ವಾಹನ  ಚಲಾಯಿಸಿ ಅವಘಡಗಳು ನಡೆಯುತ್ತಿವೆ ಎಂದರು. ದೇಜಪ್ಪ ಪೂಜಾರಿ, ಕೆ.ಎ ಉಮ್ಮರ್‌ , ಜಿಲ್ಲಾ ಪಂಚಾಯತ್‌  ಸದಸ್ಯೆ  ನಮಿತಾ, ಸಮಾಜಸೇವಕ ಹಸನಬ್ಬ ಮಾತನಾಡಿ, ಚಾರ್ಮಾಡಿಯಲ್ಲಿ ಹೊರಠಾಣೆಯಾದಲ್ಲಿ  ಘಾಟಿ ರಸ್ತೆಯಲ್ಲಿ ಆಗುವ ಅಪಘಾತದ  ವೇಳೆ  ಪೊಲೀಸರು ಶೀಘ್ರವಾಗಿ ಸ್ಥಳಕ್ಕೆ 
ಆಗಮಿಸಿ ಸಂಚಾರ ನಿಯಂತ್ರಣ ಹಾಗೂ ಗಾಯಾಳುಗಳನ್ನು ಕ್ಲಪ್ತ ಸಮಯದಲ್ಲಿ ಆಸ್ಪತ್ರೆಗೆ ಸಾಗಿಸಿ ಅವರ ಜೀವ ಉಳಿಸಲು ಸಹಕಾರಿಯಾಗುತ್ತದೆ ಎಂದವರು ತಿಳಿಸಿದರು. ಸರ್ಕಲ್‌ ಇನ್ಸ್‌ಪೆಕ್ಟರ್‌ ನಾಗೇಶ್‌ ಕದ್ರಿ, ಧರ್ಮಸ್ಥಳ ಎಸ್‌ಐ ರಾಮ ನಾೖಕ್‌ ಮೊದಲಾದವರು ಉಪಸ್ಥಿತರಿದ್ದರು. 

ಟಾಪ್ ನ್ಯೂಸ್

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.