ಐಕಳ: ಪೂರ್ವಭಾವಿ ಕಂಬಳ
Team Udayavani, Jan 27, 2018, 4:44 PM IST
ಐಕಳ: ಕಂಬಳ ಕ್ರೀಡೆ ನಮ್ಮ ತುಳುನಾಡಿನ ಧಾಮಿಕ ಆಚರಣೆ- ಸಂಸ್ಕೃತಿಯ ಮೂಲ ಸತ್ವವಾಗಿದೆ. ಈ ಆಚರಣೆಗಳು ಪ್ರಕೃತಿಯ ಆರಾಧನೆ ಹಾಗೂ ಪೂರ್ವಿಕರ ಧಾರ್ಮಿಕತೆಯ ನೆಲಗಟ್ಟಿನಲ್ಲಿ ನಿಂತಿದೆ. ಇದರಲ್ಲಿ ಹಿಂಸೆ ನಡೆಯುತ್ತಿಲ್ಲ ಎಂದು ಕಂಬಳ ಸಮಿತಿಯ ಗೌರವಾಧ್ಯಕ್ಷ ಐಕಳಬಾವ ಡಾ| ದೇವಿಪ್ರಸಾದ್ ಶೆಟ್ಟಿ ಹೇಳಿದರು. ಅವರು ಐಕಳ ಕಂಬಳದ ವಠಾರದಲ್ಲಿ ತುಳುನಾಡಿನ ಐಕಳಬಾವ ಕಾಂತಾಬಾರೆ- ಬೂದಾಬಾರೆ ಜೋಡುಕರೆ ಕಂಬಳದ ಪೂರ್ವಭಾವಿಯಾಗಿ ಕಂಬಳದ ಗದ್ದೆಗೆ ಕೋಣ ಇಳಿಸಿ ಕಂಬಳಕ್ಕೆ ಚಾಲನೆ ನೀಡಿದರು.
ಏಳಿಂಜೆ ಲಕ್ಷ್ಮೀಜನಾರ್ದನ ದೇವಸ್ಥಾನದ ಅರ್ಚಕ ಗಣೇಶ್ ಭಟ್ ಸಾಂಪ್ರದಾಯದಂತೆ ಗದ್ದೆಗೆ ಪೂಜೆ ಸಲ್ಲಿಸಿದ ಬಳಿಕ ಕಂಬಳದ ಕೋಣಗಳನ್ನು ಗದ್ದೆಗೆ ಇಳಿಸಲಾಯಿತು. ಕಂಬಳ ಸಮಿತಿಯ ಕಾರ್ಯಾಧ್ಯಕ್ಷ ಚಿತ್ತರಂಜನ ಭಂಡಾರಿ ಐಕಳಬಾವ, ಐಕಳ ಬಾವ ಯಜಮಾನ ದೋಗಣ್ಣ ಶೆಟ್ಟಿ, ಸಂಚಾಲಕ ಐಕಳ ಮುರಳೀಧರ ಶೆಟ್ಟಿ, ಕೋಶಾಧಿಕಾರಿ ಪ್ರಕಾಶ್ ಶೆಟ್ಟಿ ಪಡುಹಿತ್ಲು, ಪ್ರ.ಕಾ. ಕೃಷ್ಣ ಮಾರ್ಲ ಹಿರಿಮನೆ, ಉಪಾಧ್ಯಕ್ಷ ವೈ. ಯೋಗೀಶ್ ರಾವ್, ವರುಣ್ ಭಟ್ ಏಳಿಂಜೆ, ಲೀಲಾಧರ ಶೆಟ್ಟಿ, ಸ್ವರಾಜ್ ಶೆಟ್ಟಿ , ಕಂಬಳ ಸಮಿತಿಯ ಜಯಪಾಲ ಶೆಟ್ಟಿ ಐಕಳ, ಸದಾನಂದ ಕುಂದರ್, ಆನಂದ ಗೌಡ, ಶ್ರೀಶ ಸರಾಫ್ ಐಕಳ, ಸುರೇಶ್ ಎಂ. ಶೆಟ್ಟಿ, ರಾಘವೇಂದ್ರ ಪೂಜಾರಿ, ಹರೀಶ್ ಶೆಟ್ಟಿ ತಾಮಣಿಗುತ್ತು, ಸುರೇಶ್ ಎಂ. ಕೋಟ್ಯಾನ್ ಪಟ್ಟೆ, ಚೇತನ್ ಪೂಜಾರಿ, ಕೇಶವ ಶೆಟ್ಟಿ, ಯತಿರಾಜ ರೈ, ಸುರೇಂದ್ರ ಶೆಟ್ಟಿ ಹೊಸಗದ್ದೆ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap ಮಂಗಳೂರು: ಕಾರು ಢಿಕ್ಕಿ; ಬೈಕ್ ಸವಾರ ಸಾವು
“ಪ್ರೇತ’ ಮದುವೆಗೆ ಕೊನೆಗೂ ಸಿಕ್ಕಿದ “ವರ’! ಆಟಿಯಲ್ಲಿ ನಡೆಯಲಿದೆ “ಪ್ರೇತ ಮದುವೆ’
Mangaluru University; ಪದವಿ 3 ವರ್ಷಕ್ಕೆ; ಪಠ್ಯಕ್ರಮ ಬದಲಾವಣೆಗೆ ವಿ.ವಿ. ನಿರ್ಧಾರ
Kerala “ವೆಸ್ಟ್ನೈಲ್’ ಜ್ವರದ ಆತಂಕ; ದ.ಕ. ಜಿಲ್ಲೆಯಲ್ಲೂ ವಿಶೇಷ ನಿಗಾ
ನೈಋತ್ಯ ಕ್ಷೇತ್ರ; ಬಿಜೆಪಿ- ಜೆಡಿಎಸ್ ಒಮ್ಮತದ ಅಭ್ಯರ್ಥಿಗೆ ಗೆಲುವು: ಡಾ| ಧನಂಜಯ ಸರ್ಜಿ