ಬಜಪೆ: ಅಕ್ಕಿಮುಡಿಗೆ ಹೆಚ್ಚಿದ ಬೇಡಿಕೆ; ಕೃಷಿಕರಲ್ಲಿ ಆಶಾವಾದ


Team Udayavani, Jan 16, 2021, 2:40 AM IST

ಬಜಪೆ: ಅಕ್ಕಿಮುಡಿಗೆ ಹೆಚ್ಚಿದ ಬೇಡಿಕೆ; ಕೃಷಿಕರಲ್ಲಿ ಆಶಾವಾದ

ಬಜಪೆ: ಬೆಳೆಯುತ್ತಿರುವ ಆಧುನಿಕತೆಯಿಂದಾಗಿ ಹಳ್ಳಿಗಳಲ್ಲಿ ಜೀವನ- ಕೃಷಿ-ಸಂಸ್ಕೃತಿ ನಶಿಸುತ್ತಿದೆ ಎಂಬ ಅಪವಾದದ ನಡುವೆಬಜಪೆ ವ್ಯಾಪ್ತಿಯ ದಿನಸಿ ಅಂಗಡಿಗಳಲ್ಲಿ ಕೃಷಿ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಅಕ್ಕಿ ಮುಡಿಗೆ ಬೇಡಿಕೆ ಹೆಚ್ಚಿದೆ. ನಿಜಕ್ಕೂ ಇದು ಆಶಾದಾಯಕ ಸಂಗತಿಯಾಗಿದ್ದು, ನಗರದ ಜನತೆ ಅಕ್ಕಿಮುಡಿ ಖರೀದಿಸಲು ಹಳ್ಳಿಗಳಿಗೆ ಬರುತ್ತಿರುವುದು ಗಮನಾರ್ಹ.

ಹಿಂದೆ ಹಳ್ಳಿಗಳಲ್ಲಿ ಮದುವೆ, ಶುಭ-ಸಮಾರಂಭಗಳಿಗೆ ಸಂಪ್ರದಾಯದಂತೆ ಅಕ್ಕಿ ಮುಡಿಯ ಬಳಕೆ ಹೇರಳವಾಗಿತ್ತು. ಕಾಲ ಕಳೆದಂತೆ ಇದು ಕಡಿಮೆಯಾಯಿತು. ಇದೀಗ ಬಜಪೆ ದಿನಸಿ ಅಂಗಡಿಗಳಲ್ಲಿ ಶುಭ-ಸಮಾರಂಭಗಳಿಗೆಂದೇ ಸಿದ್ಧಪಡಿಸುವ ಅಕ್ಕಿ ಮುಡಿಗಳಿಗೆ ಬೇಡಿಕೆ ಕುದುರಿದ್ದು, ಗ್ರಾಹಕರು ಖರೀದಿಗೆ ಮುಂದಾಗುತ್ತಿದ್ದಾರೆ.

ಅಕ್ಕಿ ಮುಡಿ ಕಟ್ಟುವವರ ಸಂಖ್ಯೆ ವಿರಳ :

ಅಕ್ಕಿ ಮುಡಿಗೆ ಬೇಡಿಕೆ ಹೆಚ್ಚಳವಾಗಿದೆ. ಆದರೆ ಅದನ್ನು ಕಟ್ಟುವ ಕೈಗಳು ಮಾತ್ರ ವಿರಳ. ಕೃಷಿ ಕಾರ್ಮಿಕರು ಅದರಲ್ಲೂ ವಯಸ್ಕರು ಮಾತ್ರ ಅಕ್ಕಿಮುಡಿ ಕಟ್ಟುತ್ತಿದ್ದಾರೆ. ಜನರ ಬೇಡಿಕೆ ತಕ್ಕಂತೆ ಒಳ್ಳೆಯ ಅಕ್ಕಿ ಮುಡಿ ಕಟ್ಟುವವರನ್ನು ಪೆರಾರ, ಅದ್ಯಪಾಡಿ, ಪೊರ್ಕೋಡಿ, ಬಾಳ, ಕಳವಾರು, ಕರಂಬಾರು ಪ್ರದೇಶದಲ್ಲಿ ಕಾಣಬಹುದು.

10 ಕೆ.ಜಿ. ತೂಕದ ಅಕ್ಕಿಮುಡಿ 750 ರೂ.ಗೆ ಮಾರಾಟವಾಗುತ್ತಿದ್ದು, ಇದರಲ್ಲಿ 275 ರೂ. ಅಕ್ಕಿಮುಡಿ ಕಟ್ಟುವವನಿಗೆ ಸಿಗುತ್ತಿದೆ. ಬೈ ಹುಲ್ಲು, ಹಗ್ಗ ಅವರದ್ದಾಗಿರುತ್ತದೆ. ಅಕ್ಕಿಮುಡಿ ಕಟ್ಟಲು ಇಬ್ಬರು ಬೇಕಾಗುತ್ತದೆ. ದಿನವೊಂದಕ್ಕೆ 10ರಿಂದ 12 ಕಟ್ಟಬಹುದು. ಬೆಳ್ತಿಗೆ, ಕುಚ್ಚಲಕ್ಕಿ ಹೀಗೇ ಪ್ರತ್ಯೇಕ ಅಕ್ಕಿಮುಡಿ ತಯಾರಿಸಲಾಗುತ್ತಿದ್ದು, ಅವುಗಳಿಗೆಲ್ಲ ಉತ್ತಮ ಬೇಡಿಕೆ ಇದೆ.

ಗುತ್ತಿನ ಮನೆಯಲ್ಲಿ ದಾಸ್ತಾನು ಇಡುವ ಅಕ್ಕಿಮುಡಿ ಈಗ ಕಡಿಮೆಯಾಗುತ್ತಿದೆ. ಅಂಗಡಿಯವರು ಜನರ ಬೇಡಿಕೆಗೆ ತಕ್ಕಂತೆ ಅಕ್ಕಿಮುಡಿಗಳನ್ನು ಅಂಗಡಿಯಲ್ಲಿ ದಾಸ್ತಾನು ಇರಿಸಿ ಮಾರಾಟ ಮಾಡುತ್ತಿದ್ದಾರೆ.

ಶುಭ ಸಮಾರಂಭಗಳಿಗೆ  ಮೊದಲ ಆದ್ಯತೆ! :

ಗೃಹ ಪ್ರವೇಶ, ಉಪನಯನ, ಗೌಡ ಸಾರಸ್ವತರಲ್ಲಿ ಮನೆ ತುಂಬಿಸುವಲ್ಲಿ, ಕ್ರೈಸ್ತರ ರೋಸ್‌, ಬ್ರಹ್ಮಕಲಶೋತ್ಸವ, ದೈವ -ದೇವಸ್ಥಾನಗಳ ಹೊರೆಕಾಣಿಕೆ ಮೆರವಣಿಗೆ, ಶುಭ ಸಮಾರಂಭಗಳಿಗೆ, ಪೂಜೆ ಕಾರ್ಯಗಳಿಗೆ ಹಾಗೂ ಇತರ ಕಾರ್ಯಕ್ರಮಗಳಿಗೆ ಅಕ್ಕಿಮುಡಿಯನ್ನು ಮುಖ್ಯವಾಗಿ ಬಳಸಲಾಗುತ್ತದೆ.

ಟಾಪ್ ನ್ಯೂಸ್

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Supreme Court

Supreme Court; ಖಾಸಗಿ ಆಸ್ತಿಯನ್ನು ಸ್ವಾಧೀನ ಮಾಡಬಹುದೇ? 

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.