ಧರ್ಮಸ್ಥಳಕ್ಕೆ ತಲುಪಿದ ಬಿಬಿಎಂಪಿ ನೀರು
Team Udayavani, May 23, 2019, 6:10 AM IST
ಬೆಳ್ತಂಗಡಿ: ಧರ್ಮಸ್ಥಳದಲ್ಲಿ ನೀರಿನ ಕೊರತೆಯನ್ನು ಪರಿಗಣಿಸಿ ಬೆಂಗಳೂರು ಬಿಬಿಎಂಪಿ ನೌಕರರು ಮತ್ತು ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ಕಳುಹಿಸಿದ ನೀರಿನ ಕ್ಯಾನ್ಗಳು ಧರ್ಮಸ್ಥಳ ಕ್ಷೇತ್ರಕ್ಕೆ ತಲುಪಿವೆ.
ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್ ಹಾಗೂ ಅನ್ನಪೂರ್ಣ ಅನ್ನಛತ್ರದ ಪ್ರಬಂಧಕ ಸುಬ್ರಹ್ಮಣ್ಯ ಪ್ರಸಾದ್ ಬಿಬಿಎಂಪಿ ಹಸ್ತಾಂತರಿಸಿದ ನೀರನ್ನು ಸ್ವೀಕರಿಸಿದರು.
20 ಲೀಟರ್ನ 300 ಕ್ಯಾನ್ ಹಾಗೂ 10 ಲೀಟರ್ನ 350 ಕ್ಯಾನ್ ಸೇರಿದಂತೆ ಒಟ್ಟು 10 ಸಾವಿರ ಲೀಟರ್ ಕ್ಷೇತ್ರಕ್ಕೆ ತಲುಪಿದೆ. ಬೆಂಗಳೂರಿನ ಉದ್ಯಮಿ ಮಹೇಶ್ 7.50 ಸಾವಿರ ಲೀಟರ್ ನೀರು ನೀಡಿದ್ದು, ಉಳಿದಂತೆ ಇನ್ನಷ್ಟು ಮಂದಿ ಭಕ್ತರು ನೀರು ಕಳುಹಿಸಲು ಮುಂದಾಗಿ ಕಚೇರಿಗೆ ಕರೆ ಮಾಡಿ ಮಾಹಿತಿ ನೀಡುತ್ತಿದ್ದಾರೆ. ಬುಧವಾರಸಂಜೆ ಬೆಂಗಳೂರಿನ ಚಾಲಕ ಸಂಘದಿಂದ 2 ಸಾವಿರ ಮಂದಿ ಸೇರಿ 7 ಸಾ. ಲೀಟರ್ ನೀರು ಕ್ಷೇತ್ರಕ್ಕೆ ಕಳುಹಿಸಿದ್ದಾರೆ. ಈಗಾಗಲೇ ಬಸವನಗುಡಿ ಸುಂಕೇನ ಹಳ್ಳಿಯ ಭಕ್ತರು 6,780 ಲೀ. ನೀರು ಹಸ್ತಾಂತರಿದ್ದರು. ಒಟ್ಟಾರೆಯಾಗಿ ಈವರೆಗೆ 30 ಸಾ. ಲೀಟರ್ಗೂ ಹೆಚ್ಚು ನೀರಿನ ಕ್ಯಾನ್ಗಳು ಬಂದು ಸೇರಿವೆ ಎಂದು ಕ್ಷೇತ್ರದಿಂದ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
MUST WATCH
ಹೊಸ ಸೇರ್ಪಡೆ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?