ನಳಿನ್‌ ಟೋಲ್‌ ಒಡೆಯುವ ಎಚ್ಚರಿಕೆ


Team Udayavani, Feb 26, 2019, 1:00 AM IST

nalin-toll.jpg

ಮಂಗಳೂರು: ಪಂಪ್‌ವೆಲ್‌ ಮೇಲ್ಸೇತುವೆ ಕಾಮಗಾರಿ ಮುಗಿಯುವವರೆಗೆ ಸುಗಮ ಸಂಚಾರಕ್ಕೆ ಒತ್ತು ನೀಡಬೇಕು. ಅದಕ್ಕಾಗಿ ಜಂಕ್ಷನ್‌ ಆಸುಪಾಸಿನ ಕೆಲವು ರಸ್ತೆಗಳನ್ನು ವಾರದೊಳಗೆ ಸರಿಪಡಿಸಿ. ಇಲ್ಲವಾದರೆ ಟೋಲ್‌ಗೇಟನ್ನೇ ಒಡೆದು ಹಾಕಲಾಗುವುದು ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಎಚ್ಚರಿಸಿದ್ದಾರೆ.

ಸೋಮವಾರ ನಡೆದ ಜಿಲ್ಲಾ ಅಭಿವೃದ್ಧಿ ಮತ್ತು ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹೆದ್ದಾರಿ ಸಮಸ್ಯೆ ಕುರಿತು ಕೇಂದ್ರ ಭೂ ಸಾರಿಗೆ ಸಚಿವಾಲಯದ ಜಂಟಿ ಕಾರ್ಯದರ್ಶಿ ಶೀಘ್ರ ಸಭೆ ನಡೆಸಲಿದ್ದಾರೆ. ಅದಕ್ಕೆ ಮೊದಲು ಮೇಲ್ಸೇತುವೆ ಸನಿಹದ ರಸ್ತೆಗಳಿಗೆ ಡಾಮರೀಕರಣವಾಗಬೇಕು. ಎರಡೂ ಬದಿಯಲ್ಲಿಯೂ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಇಲ್ಲವಾದರೆ ಟೋಲ್‌ಗೇಟ್‌ನ್ನು ಒಡೆದು ಹಾಕ ಲಾಗುವುದು ಎಂದು ಎಚ್ಚರಿಸಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಸ್ಯಾಮ್ಸನ್‌ ವಿಜಯಕುಮಾರ್‌ ಮಾತನಾಡಿ, ಪಂಪ್‌ವೆಲ್‌ನಲ್ಲಿ ಫ್ಲೈಓವರ್‌ ತಡೆಗೋಡೆಯ ಪ್ಯಾನೆಲ್‌ ಅಳವಡಿಕೆ ಪ್ರಗತಿಯಲ್ಲಿದೆ. ತೊಕ್ಕೊಟ್ಟಿನಲ್ಲೂ ಅಂತಿಮ ಹಂತದಲ್ಲಿದೆ. ಕಾಮಗಾರಿ ನಡೆಸಲು ಹಣವಿಲ್ಲದೆ, ಗುತ್ತಿಗೆದಾರರು ಪರದಾಡುತ್ತಿದ್ದಾರೆ ಎಂದರು.

ಸೇತುವೆ ನಿರ್ಮಾಣ ಪ್ರಸ್ತಾವ
ಕೂಳೂರಿನಲ್ಲಿ ಫಲ್ಗುಣಿ ನದಿಗೆ 6 ಲೇನ್‌ನ ಹೊಸ ಸೇತುವೆ ನಿರ್ಮಾಣ ಕಾಮಗಾರಿಗೆ ಎಪ್ರಿಲ್‌ನಲ್ಲಿ ಟೆಂಡರ್‌ ಕರೆಯಲಾಗುವುದು. ಹಳೆ ಸೇತುವೆ ಇದ್ದ ಜಾಗದಲ್ಲಿ ಹೊಸ ಸೇತುವೆ ನಿರ್ಮಾಣ ಮಾಡುವ ಪ್ರಸ್ತಾವ ವಿದೆ. ಇದಕ್ಕೆ ಡಿಪಿಆರ್‌ ಸಿದ್ಧಗೊಳ್ಳುತ್ತಿದೆ ಎಂದು ಅಧಿಕಾರಿಗಳು ವಿವರಿಸಿದರು. ಜಿಲ್ಲಾಡಳಿತದ ಆದೇಶ ಬಂದ ತತ್‌ಕ್ಷಣವೇ ಘನವಾಹನ ಸಂಚಾರ ಅಸಾಧ್ಯವಾಗಿರುವ ಕೂಳೂರು ಸೇತುವೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗುವುದು ಎಂದರು.

ಭಾರತ್‌ಮಾಲಾ ಯೋಜನೆಯಡಿ ಸುರತ್ಕಲ್‌-ಬಿ.ಸಿ. ರೋಡ್‌ ರಸ್ತೆಯನ್ನು 6 ಪಥದ ರಸ್ತೆಯನ್ನಾಗಿ ಅಭಿವೃದ್ಧಿಪಡಿಸುವ ಸಂಬಂಧ ಡಿಪಿಆರ್‌ ತಯಾರಿಸಲಾಗುತ್ತಿದೆ. ಮೂಲ್ಕಿ-ಬಿ.ಸಿ. ರೋಡ್‌ ವರ್ತುಲ ರಸ್ತೆ ಕಾಮಗಾರಿಯ ಡಿಪಿಆರ್‌ ತಯಾರಾಗುತ್ತಿದ್ದು, ಭೂಸ್ವಾಧೀನಕ್ಕೆ ಶೀಘ್ರ ನೋಟಿಸ್‌ ನೀಡಲಾಗುವುದು. ಕುದುರೆಮುಖ ಜಂಕ್ಷನ್‌ ನಿಂದ ಬೈಕಂಪಾಡಿ ವರೆಗೆ ರಸ್ತೆ ಅಭಿವೃದ್ಧಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದರು.

ಶಿರಾಡಿ ಘಾಟಿಯಲ್ಲಿ ಅಧ್ಯಯನ ನಡೆಸಿದ ಐಐಎಸ್‌ಸಿ ತಜ್ಞರು ಸಲ್ಲಿಸಿದ ವರದಿ ಆಧಾರದಲ್ಲಿ ಶಾಶ್ವತ ಪರಿಹಾರಕ್ಕೆ ಕೇಂದ್ರ ಭೂಸಾರಿಗೆ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ರಾ. ಹೆ. ಕಾರ್ಯಪಾಲಕ ಎಂಜಿನಿಯರ್‌ ಸುಬ್ಬರಾಮ ಹೊಳ್ಳ ತಿಳಿಸಿದರು.

ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿ ಗೋಡು, ಡಿಸಿ ಶಶಿಕಾಂತ ಸೆಂಥಿಲ್‌, ಜಿಪಂ ಸಿಇಒ ಡಾ| ಆರ್‌. ಸೆಲ್ವಮಣಿ ಉಪಸ್ಥಿತರಿದ್ದರು.

ಮಳೆಗಾಲ ಬಳಿಕ ಬಿ.ಸಿ. ರೋಡ್‌-ಅಡ್ಡಹೊಳೆ ಕಾಮಗಾರಿ
ಭೂಸ್ವಾಧೀನ ಪ್ರಕ್ರಿಯೆ ಸರಿಯಾಗಿ ನಡೆಯದ ಕಾರಣ ಬಿ.ಸಿ. ರೋಡ್‌-ಅಡ್ಡಹೊಳೆ ಕಾಂಕ್ರೀಟ್‌ ಚತುಷ್ಪಥ ಕಾಮಗಾರಿ ನಡೆಸುವುದು ಕಷ್ಟವಾಗುತ್ತಿದೆ. ಮಳೆಗಾಲದ ಬಳಿಕವಷ್ಟೇ ಈ ಕಾಮಗಾರಿ ಮುಂದುವರಿಯಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಎಲ್‌ ಆ್ಯಂಡ್‌ ಟಿ ಕಂಪೆನಿಯ ಪ್ರತಿನಿಧಿ ಈ ಕುರಿತು ಮಾಹಿತಿ ನೀಡಿ, 41 ಹೆಕ್ಟೇರ್‌ನಷ್ಟು ಭೂ ಸ್ವಾಧೀನವಾಗದ ವಿನಾ ಕೆಲಸ ಪೂರ್ಣಗೊಳಿಸುವುದು ಸಾಧ್ಯವಾಗದು. ಸದ್ಯ 24 ಕಿರು ಸೇತುವೆ, ಎರಡು ಮಧ್ಯಮ ಸೇತುವೆ ಕೆಲಸ ಪೂರ್ತಿಗೊಳಿಸಲಾಗುವುದು ಎಂದರು.

ಆಸ್ಪತ್ರೆಗಳ ವಿರುದ್ಧ ಕ್ರಮ
ಆಯುಷ್ಮಾನ್‌ ಭಾರತ್‌-ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸೆ ನೀಡುವುದಕ್ಕೆ ಕೆಲವು ಆಸ್ಪತ್ರೆಗಳು ನಿರಾಕರಿಸುತ್ತಿವೆ ಎಂದು ಶಾಸಕರಾದ ಉಮಾನಾಥ ಕೋಟ್ಯಾನ್‌, ಡಿ. ವೇದವ್ಯಾಸ ಕಾಮತ್‌, ಡಾ| ವೈ. ಭರತ್‌ ಶೆಟ್ಟಿ ಹೇಳಿದರು. ಸಂಸದ ನಳಿನ್‌ ಪ್ರತಿಕ್ರಿಯಿಸಿ, ಯೋಜನೆಯಡಿ ಬರುವ 32 ಆಸ್ಪತ್ರೆಗಳ ಪ್ರಮುಖರನ್ನು ಕರೆದು ಸಭೆ ನಡೆಸಿ. ರೋಗಿಗಳಿಗೆ ಈ ಯೋಜನೆಯಡಿ ಚಿಕಿತ್ಸೆ ನೀಡದಿದ್ದರೆ, ಅಂಥ ಆಸ್ಪತ್ರೆಗಳ ವಿರುದ್ಧ ಸೂಕ್ತ ಕ್ರಮಕ್ಕೆ ಮುಂದಾಗಿ ಎಂದು ಡಿಎಚ್‌ಒ ಡಾ| ರಾಮಕೃಷ್ಣ ರಾವ್‌ ಅವರಿಗೆ ಸೂಚಿಸಿದರು.

ಟಾಪ್ ನ್ಯೂಸ್

21

Horoscope: ಈ ರಾಶಿಯವರ ಕುಟುಂಬದ ವಲಯದಲ್ಲಿ ಸ್ವಲ್ಪ ಏರುಪೇರಾದ ವಾತಾವರಣ ಇರಲಿದೆ

RCB (2)

RCB ಭವಿಷ್ಯ ಮಳೆಯ ಕೈಯಲ್ಲಿ

ಇನ್ನು ಆನ್‌ಲೈನ್‌ ಪಾಸ್‌ ಇದ್ದರೆ ಮಾತ್ರ ವಿಧಾನಸೌಧ ಪ್ರವೇಶ

Vidhana Soudha ಇನ್ನು ಆನ್‌ಲೈನ್‌ ಪಾಸ್‌ ಇದ್ದರೆ ಮಾತ್ರ ವಿಧಾನಸೌಧ ಪ್ರವೇಶ

Heavy Rain 8 ಜಿಲ್ಲೆಗಳಲ್ಲಿ ಇಂದು ಭಾರಿ ಮಳೆ ಸಾಧ್ಯತೆ: ಆರೆಂಜ್‌ ಅಲರ್ಟ್‌ ಘೋಷಣೆ

Heavy Rain 8 ಜಿಲ್ಲೆಗಳಲ್ಲಿ ಇಂದು ಭಾರಿ ಮಳೆ ಸಾಧ್ಯತೆ: ಆರೆಂಜ್‌ ಅಲರ್ಟ್‌ ಘೋಷಣೆ

MOdi (3)

Congress, SP ಗೆದ್ದರೆ ರಾಮ ಮಂದಿರ ಮೇಲೆ ಬುಲ್ಡೋಜರ್‌: ಮೋದಿ

Jaishankar

Nehru ಕಾಲದಲ್ಲಿ ಕಬಳಿಸಿದ್ದ ಹಳ್ಳಿಯಲ್ಲಿ ಚೀನ ಗ್ರಾಮ: ಸಚಿವ ಜೈಶಂಕರ್‌ ತಿರುಗೇಟು

ಚುನಾವಣಾ ಅಕ್ರಮ ಜಪ್ತಿ: ದಕ್ಷಿಣದಲ್ಲಿ ಕರ್ನಾಟಕ ನಂ.2; ರಾಜ್ಯದಲ್ಲಿ 558 ಕೋಟಿ ರೂ. ಜಪ್ತಿ

ಚುನಾವಣಾ ಅಕ್ರಮ ಜಪ್ತಿ: ದಕ್ಷಿಣದಲ್ಲಿ ಕರ್ನಾಟಕ ನಂ.2; ರಾಜ್ಯದಲ್ಲಿ 558 ಕೋಟಿ ರೂ. ಜಪ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru”ಯುವ ಸಮಾಜದ ಸೇವೆ ದೇಶಕ್ಕೆ ಅದ್ವಿತೀಯ ಕೊಡುಗೆ’

Mangaluru”ಯುವ ಸಮಾಜದ ಸೇವೆ ದೇಶಕ್ಕೆ ಅದ್ವಿತೀಯ ಕೊಡುಗೆ’

Rain ಮುಂದುವರಿದ “ಎಲ್ಲೋ ಅಲರ್ಟ್‌’

Rain ಮುಂದುವರಿದ “ಎಲ್ಲೋ ಅಲರ್ಟ್‌’

Natural Ice Cream ಸಂಸ್ಥಾಪಕ ರಘುನಂದನ್‌ ಕಾಮತ್‌ ಇನ್ನಿಲ್ಲ

Natural Ice Cream ಸಂಸ್ಥಾಪಕ ರಘುನಂದನ್‌ ಕಾಮತ್‌ ಇನ್ನಿಲ್ಲ

ವೆಲೆನ್ಸಿಯಾ: ಬೈಕ್‌ನಿಂದ ರಸ್ತೆಗೆ ಬಿದ್ದು ಮಹಿಳೆ ಸಾವು

ವೆಲೆನ್ಸಿಯಾ: ಬೈಕ್‌ನಿಂದ ರಸ್ತೆಗೆ ಬಿದ್ದು ಮಹಿಳೆ ಸಾವು

Kinnigoli: ಮೀನು ಮಾರಾಟಗಾರರ ಗಲಾಟೆ; ದೂರು

Kinnigoli: ಮೀನು ಮಾರಾಟಗಾರರ ಗಲಾಟೆ; ದೂರು

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

21

Horoscope: ಈ ರಾಶಿಯವರ ಕುಟುಂಬದ ವಲಯದಲ್ಲಿ ಸ್ವಲ್ಪ ಏರುಪೇರಾದ ವಾತಾವರಣ ಇರಲಿದೆ

RCB (2)

RCB ಭವಿಷ್ಯ ಮಳೆಯ ಕೈಯಲ್ಲಿ

ಇನ್ನು ಆನ್‌ಲೈನ್‌ ಪಾಸ್‌ ಇದ್ದರೆ ಮಾತ್ರ ವಿಧಾನಸೌಧ ಪ್ರವೇಶ

Vidhana Soudha ಇನ್ನು ಆನ್‌ಲೈನ್‌ ಪಾಸ್‌ ಇದ್ದರೆ ಮಾತ್ರ ವಿಧಾನಸೌಧ ಪ್ರವೇಶ

Heavy Rain 8 ಜಿಲ್ಲೆಗಳಲ್ಲಿ ಇಂದು ಭಾರಿ ಮಳೆ ಸಾಧ್ಯತೆ: ಆರೆಂಜ್‌ ಅಲರ್ಟ್‌ ಘೋಷಣೆ

Heavy Rain 8 ಜಿಲ್ಲೆಗಳಲ್ಲಿ ಇಂದು ಭಾರಿ ಮಳೆ ಸಾಧ್ಯತೆ: ಆರೆಂಜ್‌ ಅಲರ್ಟ್‌ ಘೋಷಣೆ

MOdi (3)

Congress, SP ಗೆದ್ದರೆ ರಾಮ ಮಂದಿರ ಮೇಲೆ ಬುಲ್ಡೋಜರ್‌: ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.