ಬೆಳ್ತಂಗಡಿ: ಗಾಳಿ-ಮಳೆ; ಹಲವೆಡೆ ಹಾನಿ;ಸಿಡಿಲು ಬಡಿದು ಕಾರ್ಮಿಕ ಗಂಭೀರ
Team Udayavani, May 7, 2017, 3:38 PM IST
ಮಂಗಳೂರು/ಉಡುಪಿ: ಬೆಳ್ತಂಗಡಿ ತಾಲೂಕಿನಲ್ಲಿ ಶನಿವಾರ ಸಿಡಿಲು-ಮಿಂಚಿನಿಂದ ಕೂಡಿದ ಗಾಳಿ ಮಳೆಯಾಗಿದೆ. ಸಿಡಿಲು ಬಡಿದು ವ್ಯಕ್ತಿಯೋರ್ವರು ಗಾಯಗೊಂಡಿದ್ದಾರೆ.
ಕಡಿರುದ್ಯಾವರ ಪರಿಸರದಲ್ಲಿ ಗಾಳಿಗೆ ಗ್ರಾ.ಪಂ. ಸದಸ್ಯ ನೇಮಿರಾಜ್ ಅವರ ಕಟ್ಟಡ, ಚೋಮ ಅವರ ಮನೆ ಹಾಗೂ ನೀಲಯ್ಯ ಗೌಡ ಅವರ ಮನೆಯ ಮೇಲೆ ಮರ ಬಿದ್ದು ಹಾನಿಯಾಗಿದೆ.
ರಾಜೇಶ್ ಕಾನರ್ಪ ಅವರಿಗೆ ಸೇರಿದ ರಬ್ಬರ್, ಅಡಿಕೆ, ತೆಂಗಿನ ಮರಗಳು ನೆಲಕ್ಕೊರಗಿವೆ. ಸುಮಾರು 20 ಮನೆಗಳಿಗೆ ಸೇರಿದ ರಬ್ಬರ್ ಹಾಗೂ ಅಡಿಕೆ ಮರಗಳಿಗೆ ಹಾನಿಯಾಗಿದೆ.
ಕಡಿರುದ್ಯಾವರ ಗ್ರಾಮದ ಎರ್ಮಾಲಪಲ್ಕೆ ನಿವಾಸಿ ಜಯಗೌಡ ಅವರು ಕಾನರ್ಪ ಪಣಿಕಲ್ನಲ್ಲಿ ತನಿಯ ಅವರಿಗೆ ಸೇರಿದ ಮರದ ಗೆಲ್ಲು ಕಡಿಯಲು ಮರ ಹತ್ತಿದ್ದ ವೇಳೆ ಸಿಡಿಲು ಬಡಿದು ಗಂಭೀರ ಗಾಯಗೊಂಡಿದ್ದಾರೆ. ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಸುಳ್ಯ ಪರಿಸರದಲ್ಲಿ ಸಂಜೆ ವೇಳೆಗೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಬಜಪೆ ಪರಿಸರದಲ್ಲಿ ಬೆಳಗ್ಗೆ ಮೋಡ ಕಂಡಿತ್ತಾದರೂ ಮಳೆಯಾಗಿಲ್ಲ. ನಾರಾವಿ ಪರಿಸರದಲ್ಲಿ ಗುಡುಗು- ಸಿಡಿಲು ಕಾಣಿಸಿಕೊಂಡಿತ್ತು. ಮೂಲ್ಕಿ- ಸುರತ್ಕಲ್ ಪ್ರದೇಶದಲ್ಲಿ ಸಂಜೆ ವೇಳೆ ತಣ್ಣನೆ ವಾತಾವರಣ ನೆಲೆಸಿತ್ತು.
ತೆಕ್ಕಟ್ಟೆ, ಬೇಳೂರು, ಕೆದೂರು, ಕುಂಭಾಸಿ, ಹೆಸ್ಕಾತ್ತೂರು ಭಾಗಗಳಲ್ಲಿ ಮಿಂಚು ಸಹಿತ ಉತ್ತಮ ಮಳೆಯಾದರೆ, ಕೊಲ್ಲೂರು, ಜಡ್ಕಲ್, ಮುದೂರು, ವಂಡ್ಸೆ, ಕೋಟೇಶ್ವರ, ಗೋಪಾಡಿ ಮೊದಲಾದೆಡೆ ಮಿಂಚು ಸಹಿತ ಸಾಧಾರಣ ಮಳೆಯಾಗಿದೆ. ಉಡುಪಿ, ಕಾರ್ಕಳದಲ್ಲಿ ಹನಿಹನಿ ಮಳೆ ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
MUST WATCH
ಹೊಸ ಸೇರ್ಪಡೆ
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್