ಪಶ್ಚಿಮ ಘಟ್ಟದಲ್ಲಿ ಅರಣ್ಯ ಇಲಾಖೆಯಿಂದ ಚಾರಣಕ್ಕೆ ಬ್ರೇಕ್‌


Team Udayavani, Mar 16, 2018, 5:14 PM IST

1403mlr46.jpg

ಮಂಗಳೂರು : ತಮಿಳುನಾಡು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚಿನ ದುರಂತದ ಕಾರಣವನ್ನು ಮುಂದಿಟ್ಟುಕೊಂಡು ಕರ್ನಾಟಕ ಸರಕಾರದ ಅರಣ್ಯ ಇಲಾಖೆ ಇಲ್ಲಿನ ರಕ್ಷಿತಾರಣ್ಯಗಳಲ್ಲಿ ಚಾರಣವನ್ನು ನಿಷೇಧಿಸಿ ಆದೇಶ ಹೊರಡಿಸಿದ್ದು, ಇದೀಗ ಇಲಾಖೆಯ ನಿರ್ಧಾರಕ್ಕೆ ಚಾರಣಿಗರಿಂದ ಆಕ್ರೋಶ ವ್ಯಕ್ತವಾಗಿದೆ. ಜತೆಗೆ ಇದರಿಂದ ಅರಣ್ಯದೊಳಗಿನ ಮಾಫಿಯಾ ಹೆಚ್ಚಳಗೊಳ್ಳುವ ಆತಂಕ ಎದುರಾಗಿದೆ. 

ರಾಜ್ಯದ ಪ್ರಮುಖ ಚಾರಣದ ಪ್ರದೇಶ ವೆಂದು ಖ್ಯಾತಿ ಗಳಿಸಿರುವ ಪಶ್ಚಿಮ ಘಟ್ಟ ಪ್ರದೇಶಗಳಿಗೆ ರಾಜ್ಯದ ವಿವಿಧ ಭಾಗಗಳಿಂದ ಚಾರಣಿಗರು ಆಗಮಿಸುತ್ತಿದ್ದು, ಇಲಾಖೆಯ ಆದೇಶ ಅವರಿಗೆ ನಿರಾಶೆ ತಂದಿದೆ. ಅರಣ್ಯದೊಳಗೆ ಸಾಕಷ್ಟು ಕಾನೂನುಬಾಹಿರ ಕೃತ್ಯಗಳು ನಡೆಯುತ್ತಿದ್ದರೂ ಕ್ರಮ ಕೈಗೊಳ್ಳದ ಇಲಾಖೆ ಚಾರಣಿಗರ ಮೇಲೆ ಕ್ರಮಕ್ಕೆ ಮುಂದಾಗಿರುವುದು ವಿಪರ್ಯಾಸ ಎಂದು ಹೇಳಲಾಗುತ್ತಿದೆ. 

ದ.ಕ, ಉಡುಪಿ ಜಿಲ್ಲೆಗಳಿಂದಲೂ ಸಾಕಷ್ಟು ಸಂಖ್ಯೆಯ ಪರಿಸರಪ್ರೇಮಿ ಚಾರಣಿಗರ ತಂಡಗಳು ರಜಾದಿನಗಳಲ್ಲಿ ಚಾರಣಕ್ಕೆ ತೆರಳಿ ಅರಣ್ಯ ಜಾಗೃತಿ ಕಾರ್ಯ ನಡೆಸುತ್ತಿದ್ದು, ಇದೀಗ ಅವರ ಕಾರ್ಯಚಟುವಟಿಕೆಗಳಿಗೂ ಬ್ರೇಕ್‌ ಬೀಳಲಿದೆ. ಅರಣ್ಯದೊಳಗೆ ನಡೆಯು ತ್ತಿರುವ ಕಾನೂನುಬಾಹಿರ ಕೃತ್ಯಗಳನ್ನು ಬೆಂಬಲಿಸುವು ದಕ್ಕೋಸ್ಕರ ಸರಕಾರ ಈ ನಿರ್ಧಾರವನ್ನು ಕೈಗೊಂಡಿದೆ ಎಂಬ ಆರೋಪಗಳು ಕೇಳಿಬಂದಿವೆ. 

ಮಾಫಿಯಾ ಹೆಚ್ಚಳ ಸಾಧ್ಯತೆ
ಪಶ್ಚಿಮ ಘಟ್ಟ ಪ್ರದೇಶದಲ್ಲಿ ನಿರಂತರವಾಗಿ ಗಾಂಜಾ ಮಾಫಿಯಾ, ಎಸ್ಟೇಟ್‌ ಮಾಫಿಯಾ, ಕಳ್ಳಬೇಟೆ ಮಾಫಿಯಾಗಳು ನಡೆಯುತ್ತಿದ್ದರೂ ಅರಣ್ಯ ಇಲಾಖೆಯಿಂದ ಅದನ್ನು ನಿಲ್ಲಿಸಲು ಸಾಧ್ಯವಾಗಿಲ್ಲ. ಆದರೆ ಇಂತಹ ದಂಧೆ ನಡೆಸುವವರು ಚಾರಣಿಗರಿಗೆ ಹೆದರಿಯಾದರೂ ತಮ್ಮ ಕೃತ್ಯಗಳಿಗೆ ಕೊಂಚ ಬ್ರೇಕ್‌ ಹಾಕಿದ್ದರು. ಆದರೆ ಇಲಾಖೆಯ ನಿರ್ಧಾರದಿಂದ ಚಾರಣಿಗರು ಅರಣ್ಯ ಪ್ರವೇಶಿಸದೇ ಇದ್ದರೆ ಅರಣ್ಯ ದಂಧೆ ಹೆಚ್ಚಳವಾಗುವ ಆತಂಕ ಎದುರಾಗಿದೆ. ಈ ಹಿಂದೆಯೂ ಎಷ್ಟೋ ಸಂದರ್ಭದಲ್ಲಿ ಬೇಟೆಗಾರರು ಚಾರಣಿಗರಿಗೆ ಎದುರಾದ ಘಟನೆಗಳು ನಡೆದಿದೆ ಎಂದು ಚಾರಣಿಗರು ತಿಳಿಸುತ್ತಾರೆ. 

ಅರಣ್ಯ ಸಂರಕ್ಷಣೆ ಜಾಗೃತಿ ಕಾರ್ಯ
ದ.ಕ.ಜಿಲ್ಲೆಯಿಂದ ಪ್ರತಿ ವಾರ ಸಹ್ಯಾದ್ರಿ ಸಂಚಯ ತಂಡ ಪಶ್ಚಿಮ ಘಟ ಪ್ರದೇಶಗಳಿಗೆ ಚಾರಣ ತೆರಳುತ್ತಿದೆ. ತಮ್ಮ ಜತೆ ವಿವಿಧ ವಿದ್ಯಾ ಸಂಸ್ಥೆಗಳ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿ ಅವರಲ್ಲಿ ಅರಣ್ಯ ಸಂರಕ್ಷಣೆ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದೆ. ಘಟ್ಟ ಪ್ರದೇಶದಲ್ಲಿ ಯಾವ ರೀತಿ ನದಿಗಳು ಹುಟ್ಟುತ್ತವೆ, ಅಲ್ಲಿರುವ ಹುಲ್ಲುಗಾವಲಿನಿಂದ ಪ್ರಯೋಜನ ಏನು, ಕಾಡ್ಗಿಚ್ಚು ಹೇಗೆ ಹುಟ್ಟಿಕೊಳ್ಳುತ್ತವೆ ಎಂಬುದರ ಕುರಿತು ಮಾಹಿತಿ ನೀಡುವ ಕಾರ್ಯವನ್ನು ಮಾಡುತ್ತಿದ್ದಾರೆ. 

ಸಹ್ಯಾದ್ರಿ ಸಂಚಯ ಕಳೆದ 4 ವರ್ಷಗಳಿಂದ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದೆ. ವರ್ಷಕ್ಕೆ ಸುಮಾರು 15 ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿ ಮಾಹಿತಿ ಕಾರ್ಯವನ್ನು ಮಾಡುತ್ತಿದೆ. ಪ್ರಸ್ತುತ ಅರಣ್ಯ ಇಲಾಖೆಯ ಆದೇಶದ ಪ್ರಕಾರ ಚಾರಣ ನಿಷೇಧಗೊಂಡರೆ ವಿದ್ಯಾರ್ಥಿಗಳು ಇಂತಹ ಅಮೂಲ್ಯ ಮಾಹಿತಿ ಗಳಿಂದ ವಂಚಿತರಾಗಲಿದ್ದಾರೆ. 

ಕಾಡ್ಗಿಚ್ಚು ಕೃತಕ ಸೃಷ್ಟಿ?
ಚಾರಣಿಗರ ಹಿತದೃಷ್ಟಿಯಿಂದ ಇಲಾಖೆಯು ಈ ನಿರ್ಧಾರ ಕೈಗೊಂಡಿದೆ ಎನ್ನಲಾಗುತ್ತಿದ್ದರೂ  ಪರೋಕ್ಷವಾಗಿ ಅರಣ್ಯದೊಳಗೆ ನಡೆಯುತ್ತಿ ರುವ ಕಾನೂನುಬಾಹಿರ ಕೃತ್ಯಗಳನ್ನು ಬೆಂಬಲಿ ಸುವುದಕ್ಕೋಸ್ಕರ ಇಂತಹ ನಿರ್ಧಾರ ಕೈಗೊಳ್ಳ ಲಾಗಿದೆ. ಜತೆಗೆ ಇವರು ಹೇಳುವ ಪ್ರಕಾರ ಅರಣ್ಯ ದಲ್ಲಿ ತನ್ನಷ್ಟಕ್ಕೇ ಕಾಡ್ಗಿಚ್ಚು ಹತ್ತಿ ಕೊಳ್ಳುವುದಿಲ್ಲ. ಬದಲಾಗಿ ಅರಣ್ಯ ಮಾಫಿಯಾಗಳು ಕಾಡ್ಗಿಚ್ಚನ್ನು ಸೃಷ್ಟಿಸಿ ಜನರನ್ನು ಹೆದರಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಇದೆ.

ಘಟ್ಟ ಪ್ರದೇಶಗಳಲ್ಲಿ ಕಾಡ್ಗಿಚ್ಚು ಹತ್ತಿದಾಗ ಅಲ್ಲಿನ ಹುಲ್ಲು ಸೇರಿದಂತೆ ಅದರ ಬೇರು ಕೂಡ ಹೊತ್ತಿ ಉರಿಯುತ್ತದೆ. ಇದರಿಂದ ಮಳೆ ಬರುವ ವೇಳೆಯೂ ಅದು ಚಿಗುರುವುದಿಲ್ಲ. ಮಳೆಯ ನೀರಿಗೆ ಬೆಟ್ಟ ಪ್ರದೇಶದ ಮಣ್ಣು ಸವೆತದಿಂದ ತಳ ಭಾಗದ ನದಿ ಉಗಮ ಸ್ಥಳಗಳನ್ನು ಸೇರಿಕೊಂಡು ಅಲ್ಲಿನ ಕಣಿವೆಗಳು ಮುಚ್ಚಿ ಹೋಗುತ್ತವೆ. 

ಪ್ರಸ್ತುತ ಚಾರ್ಮಾಡಿ ಭಾಗದಲ್ಲಿ ಕಾಡ್ಗಿಚ್ಚಿನ ಪರಿಣಾಮ ನೇತ್ರಾವತಿಯ ಪ್ರಮುಖ ಉಪನದಿ ಗಳಾದ ಮೃತ್ಯುಂಜಯ ಹೊಳೆ, ಸುನಾಲ ಹೊಳೆ, ಅನಿಯೂರು ಹೊಳೆ, ನೆರಿಯಾ ಹೊಳೆಗಳಿಗೆ ಅಪಾಯದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ನೇತ್ರಾವತಿಯಲ್ಲಿ ನೀರಿನ ಪ್ರಮಾಣ ಇಳಿಕೆಯಾಗುತ್ತಿದೆ ಎಂದು ಪರಿಸರವಾದಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಚಾರಣ ನಿರ್ಬಂಧ ವಿಪರ್ಯಾಸ
“ಕಾಡ್ಗಿಚ್ಚು ಎನ್ನುವುದು ಕೃತಕವಲ್ಲ. ಅದು ಮಾಫಿಯಾಗಳ ಸೃಷ್ಟಿ. ಪ್ರಸ್ತುತ ಅರಣ್ಯ ಇಲಾಖೆಯ ವ್ಯವಸ್ಥೆಯಲ್ಲಿ ಕಾಡಿಗೆ ಬಿದ್ದ ಬೆಂಕಿ ನಂದಿಸಲು ಸಾಧ್ಯವಿಲ್ಲ. ಹೀಗಾಗಿ ನಾವು ಕಾಡಿನ ಮಧ್ಯಕ್ಕೆ ತೆರಳಲು ಹೆಲಿಕಾಪ್ಟರ್‌ಗಾಗಿ ಮನವಿ ನೀಡಿದ್ದು, ಯಾವುದೇ ಸ್ಪಂದನೆ ಇಲ್ಲ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ಬಹುತೇಕ ಕಡೆ ಅತಿಕ್ರಮಣ ನಡೆಯುತ್ತಿದೆ. ಸರಕಾರ ಇಂತಹ ಮಾಫಿಯಾಗಳನ್ನು ನಿಲ್ಲಿಸುವುದು ಬಿಟ್ಟು ಚಾರಣ ನಿರ್ಬಂಧಕ್ಕೆ ಹೊರಟಿರುವುದು ವಿಪರ್ಯಾಸವೇ ಸರಿ.’
 ದಿನೇಶ್‌ ಹೊಳ್ಳ,  ಸಹ್ಯಾದ್ರಿ ಸಂಚಯ, ಮಂಗಳೂರು

ಟಾಪ್ ನ್ಯೂಸ್

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Supreme Court

Supreme Court; ಖಾಸಗಿ ಆಸ್ತಿಯನ್ನು ಸ್ವಾಧೀನ ಮಾಡಬಹುದೇ? 

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.