ನಾರಾವಿ: ಬೈಕ್ ಗೆ ಬಸ್ ಡಿಕ್ಕಿಯಾಗಿ ಬೈಕ್ ಸವಾರ ಸಾವು
Team Udayavani, Jan 26, 2020, 9:07 PM IST
ವೇಣೂರು : ಬೈಕ್ ಗೆ ಬಸ್ ಡಿಕ್ಕಿಯೊಡೆದು ಸವಾರ ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ ನಾರಾವಿಯಲ್ಲಿ ರವಿವಾರ ಸ೦ಜೆ ಸ೦ಭವಿಸಿದೆ. ಅಳದ೦ಗಡಿ ನಿವಾಸಿ ಸದಾಶಿವ ಹೆಗ್ಡೆ ಅವರ ಪುತ್ರ ಅರವಿಂದ ಹೆಗ್ಡೆ (27) ಮ್ರತಪಟ್ಟವರು.
ಕಾರ್ಕಳದಿ೦ದ ನಾರಾವಿ ಮಾರ್ಗವಾಗಿ ಬೆಳ್ತಂಗಡಿ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ ರಾಜ್ಯ ಹೆದ್ದಾರಿ ನಾರಾವಿ ಪ್ರಾಥಮಿಕ ಆರೋಗ್ಯ ಕೇ೦ದ್ರದ ಮು೦ಭಾಗ ಬೈಕ್ ಗೆ ಡಿಕ್ಕಿಯೊಡೆಯಿತು ಎನ್ನಲಾಗಿದೆ. ತಕ್ಷಣ ಗಾಯಾಳನ್ನು ಸ್ಥಳೀಯರ ಸಹಾಯದಿ೦ದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿ ಮಧ್ಯೆ ಮ್ರತಪಟ್ಟಿದ್ದಾರೆ.
ವೇಣೂರು ಪೊಲೀಸರು ವಾಹನಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊ೦ಡಿದ್ದಾರೆ.