ಮಂಗಳೂರು ಧರ್ಮ ಪ್ರಾಂತದ ವಿಚಾರಣೆ ಮುಕ್ತಾಯ

ರೇಮಂಡ್‌ ಫ್ರಾನ್ಸಿಸ್‌ ಕಮಿಲ್ಲಸ್‌ಗೆ ಸಂತ ಪದವಿ

Team Udayavani, Jul 18, 2019, 5:20 AM IST

1707MLR63

ವರದಿಯ ಪ್ರತಿಯನ್ನು ಅಧಿಕೃತ ದಾಖಲೆಗಳ ಪೆಟ್ಟಿಗೆಗಳಲ್ಲಿ ಇರಿಸಿ ಧರ್ಮಾಧ್ಯಕ್ಷರು ಮೊಹರು ಮಾಡಿದರು.

ಮಂಗಳೂರು: ದೇವರ ಸೇವಕ ರೇಮಂಡ್‌ ಫ್ರಾನ್ಸಿಸ್‌ ಕಮಿಲ್ಲಸ್‌ ಮಸ್ಕರೇನ್ಹಸ್‌ ಅವರನ್ನು ಪುನೀತ ಮತ್ತು ಸಂತ ಎಂದು ಪ್ರಕಟಿಸಲು ಧರ್ಮಕ್ಷೇತ್ರದ ಮಟ್ಟದಲ್ಲಿ ರಚಿಸಲ್ಪಟ್ಟ ಅಧಿಕೃತ ವಿಚಾರಣ ಸಮಿತಿಯ ಸಮಾರೋಪ ಅಧಿವೇಶನ ಬೆಂದೂರಿನ ಸಂತ ಸೆಬಾಸ್ಟಿಯನ್‌ ಚರ್ಚ್‌ನಲ್ಲಿ ಬುಧವಾರ ಜರಗಿತು.

ಅಧ್ಯಕ್ಷತೆ ವಹಿಸಿದ್ದ ಬಿಷಪ್‌ ವಂ| ಪೀಟರ್‌ ಪೌಲ್ ಸಲ್ಡಾನ್ಹಾ ಮಾತನಾಡಿ, ದೇವರ ಸೇವಕ ರೇಮಂಡ್‌ ಒಬ್ಬ ದೈವಭಕ್ತ. ತಮ್ಮ ಜೀವನವನ್ನು ಸಮಾಜದ ಒಳಿತಿಗಾಗಿ ಸಮರ್ಪಿಸಿದ ಮಹಾಪುರುಷರು. ಮಂಗಳೂರು ಧರ್ಮಪ್ರಾಂತದ ಚರಿತ್ರೆಯಲ್ಲಿ ಈ ದಿನ ವಿಶಿಷ್ಟ ಮೈಲುಗಲ್ಲು ಎಂದರು.

ವಂ| ಜೋನ್‌ ಬಾಪ್ಟಿಸ್ಟ್‌ ಸಲ್ಡಾನ್ಹಾ ಪ್ರಾರ್ಥನಾ ವಿಧಿ ನೆರವೇರಿಸಿದರು. ಬೆಥನಿ ಸಂಸ್ಥೆಯ ಮಹಾಮಾತೆ ಭ| ರೋಜ್‌ ಸೆಲಿನ್‌, ಬೆಂದೂರ್‌ ಧರ್ಮಕೇಂದ್ರದ ಪ್ರಧಾನ ಗುರು ವಂ| ವಿನ್ಸೆಂಟ್ ಮೊಂತೆರೊ ಮತ್ತಿತರರು ದೇವರ ಸೇವಕ ರೇಮಂಡರ ಸಮಾಧಿಯ ಮೇಲೆ ಹೂಗುಚ್ಛ ಇಟ್ಟು ಗೌರವ ಅರ್ಪಿಸಿದರು.

ನೋಟರಿ ವಂ| ನವೀನ್‌ ಪಿಂಟೊ ಅವರು,ಧರ್ಮಾಧ್ಯಕ್ಷರ ಪ್ರತಿನಿಧಿ ವಂ| ಹೆನ್ರಿ ಸಿಕ್ವೇರಾ ಅವರಿಗೆ ಅಧಿಕೃತ ದಾಖಲೆಗಳನ್ನು ಹಸ್ತಾಂತರಿಸಿದರು. ಪ್ರೊಮೋಟರ್‌ ಆಫ್‌ ಜಸ್ಟಿಸ್‌ ವಂ| ಜೋನ್‌ ಮೆಂಡೊನ್ಸಾದಾಖಲೆ ಪತ್ರಗಳನ್ನು ವ್ಯಾಟಿಕನ್‌ಗೆ ಕಳುಹಿಸಲು ಅಭ್ಯಂತರವಿಲ್ಲ ಎಂದು ಘೋಷಿಸಿದರು.

ಉಪ ನೋಟರಿ ವಂ| ವಿನ್ಸೆಂಟ್ ಸಲ್ಡಾನ್ಹಾ, ಪ್ರಕ್ರಿಯೆಯ ಪೋಸ್ಟುಲೇಟರ್‌ ಭ| ಲಿಲ್ಲಿಸ್‌ ಕಟಕಾಯಾಮ್‌, ದಸ್ತಾವೇಜುಗಳ ನಕಲುಕಾರಿಣಿ ಭ| ಮೊಲಿ ಶಾರೊನ್‌, ದಸ್ತಾವೇಜುಗಳನ್ನು ಅನುವಾದ ಮಾಡಿದ ಭ| ಹಿಲೆರಿಟಾ ಪ್ರಮಾಣವಚನ ಮಾಡಿದರು. ವರದಿಯ ಪ್ರತಿಯನ್ನು ಅಧಿಕೃತ ದಾಖಲೆಗಳ ಪೆಟ್ಟಿಗೆಗಳಲ್ಲಿ ಇರಿಸಿ ಧರ್ಮಾಧ್ಯಕ್ಷರು ಮೊಹರು ಮಾಡಿದರು. ಬಳಿಕ ಅವನ್ನು ಧರ್ಮಪ್ರಾಂತದ ದಸ್ತಾವೇಜು ಕೊಠಡಿಯಲ್ಲಿರಿಸಲು ಚಾನ್ಸಲರ್‌ ವಂ| ವಿಕ್ಟರ್‌ ಜಾರ್ಜ್‌ ಅವರಿಗೆ ಹಸ್ತಾಂತರಿಸಲಾಯಿತು.

ದಾಖಲೆಗಳ 15 ಕಟ್ಟುಗಳ 2 ಪ್ರತಿಗಳನ್ನು ಹೊಸದಿಲ್ಲಿಯ ವ್ಯಾಟಿಕನ್‌ ರಾಯಭಾರ ಕಚೇರಿಯ ನುನ್ಸಿಯೊ ಅವರ ಮೂಲಕ ಅಧ್ಯಯನಕ್ಕಾಗಿ ವ್ಯಾಟಿಕನ್‌ನಲ್ಲಿರುವ ‘ಕಾಂಗ್ರಿಗೇಶನ್‌ ಫಾರ್‌ ದ ಕಾಸಸ್‌ ಆಫ್‌ ದ ಸೈಂಟ್ಸ್‌’ ಸಮಿತಿಗೆ ಕಳುಹಿಸಲು ನೇಮಿಸಲ್ಪಟ್ಟ ಭ| ಲಿಲ್ಲಿಸ್‌ ಕಟಕಾಯಮ್‌ ಅವರಿಗೆ ನೀಡಲಾಯಿತು.

ನಿವೃತ್ತ ಧರ್ಮಾಧ್ಯಕ್ಷ ವಂ| ಅಲೋಶಿಯಸ್‌ ಡಿ’ಸೋಜಾ ಶುಭ ಹಾರೈಸಿದರು. ವಿಚಾರಣೆ, ಚಾರಿತ್ರಿಕ ಮತ್ತು ದೇವಶಾಸ್ತ್ರ ಸಮಿತಿಯ ಸದಸ್ಯರು, ಹಿಂದಿನ ಬೆಥನಿ ಮಹಾಮಾತೆಯರಾದ ಭ| ಜ್ಯೋತಿ, ಭ| ವಿಲ್ಬರ್ಟಾ, ಬೆಂದೂರು ಧರ್ಮಕೇಂದ್ರದ ಹಿಂದಿನ ಗುರುಗಳಾದ ವಂ| ಪೀಟರ್‌ ನೊರೊನ್ಹಾ, ವಂ| ಆಂತೊನಿ ಶೆರಾ, ಪ್ರಸ್ತುತ ಗುರು ವಂ| ವಿನ್ಸೆಂಟ್ ಮೊಂತೆರೊ ಅವರನ್ನು ಗೌರವಿಸಲಾಯಿತು. ಭ| ಲಿಲ್ಲಿಸ್‌ ಅವರನ್ನು ಸಮ್ಮಾನಿಸಲಾಯಿತು. ರೋಮನ್‌ ಪೋಸ್ಟುಲೇಟರ್‌ ಆಗಿ ನೇಮಕಗೊಂಡ ಭ| ಡೋನಾ ಸಾಂಕ್ತಿಸ್‌ ಅವರಿಗೆ ಶುಭ ಕೋರಲಾಯಿತು.

ರವಿವಾರದಂದು ಬೆಂದೂರಿನ ಸಂತ ಸೆಬಾಸ್ಟಿಯನ್‌ ಚರ್ಚ್‌ನಲ್ಲಿ ಕೃತಜ್ಞತಾ ಬಲಿಪೂಜೆ ಅರ್ಪಿಸುವ ಮೂಲಕ ಸಮಾರೋಪ ಅಧಿವೇಶನ ಆರಂಭವಾಗಿತ್ತು.

ಟಾಪ್ ನ್ಯೂಸ್

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.