ವರ್ಣರಂಜಿತ ಪುತ್ತೂರು ಮಹಾಲಿಂಗೇಶ್ವರ ಬ್ರಹ್ಮರಥೋತ್ಸವ 


Team Udayavani, Apr 19, 2018, 11:10 AM IST

19-April-4.jpg

ಪುತ್ತೂರು: ಮಂಗಳವಾರ ರಾತ್ರಿ ಪುತ್ತೂರು ದೇವರಮಾರು ಗದ್ದೆಯಲ್ಲಿ ನಡೆದ ಶ್ರೀ ಮಹಾಲಿಂಗೇಶ್ವರ ದೇವರ ಬ್ರಹ್ಮರಥೋತ್ಸವಕ್ಕೆ ಲಕ್ಷೋಪಲಕ್ಷ ಭಕ್ತರು ಸಾಕ್ಷಿಯಾದರು.

ಪಡುವಣ ದಿಕ್ಕಿನಿಂದ ಕತ್ತಲು ಆವರಿಸುತ್ತಿದ್ದಂತೆ ದೇವರಮಾರು ಗದ್ದೆಗೆ ಜನಸಂದಣಿ ಹರಿದು ಬರತೊಡ ಗಿತು. ದೇಗುಲದೊಳಗೆ ಧಾರ್ಮಿಕ ಕಾರ್ಯಕ್ರಮವೂ ಶುರುವಾಯಿತು. ದೇವರ ಉತ್ಸವ ಬಲಿ ಹೊರಟು, ವಸಂತ ಕಟ್ಟೆ ಪೂಜೆ, ವಾದ್ಯ ಮೇಳದೊಂದಿಗೆ ಬಲಿ ನಡೆಯಿತು. ಉಳ್ಳಾಲ್ತಿ- ದಂಡನಾಯಕ ದೈವಗಳ ಭಂಡಾರವೂ ದೇವರ ಬಲಿಯೊಂದಿಗೆ ಸೇರಿಕೊಂಡು, ರಾಜಗೋಪುರದ ಮೂಲಕ
ಬ್ರಹ್ಮರಥದೆಡೆಗೆ ಆಗಮಿಸಿತು.

ಎಂಟು ಎಕರೆ ವಿಸ್ತಾರದ ಗದ್ದೆಯಲ್ಲಿ ಒಂದಿಂಚು ಜಾಗವಿಲ್ಲದಂತೆ ಜನ ತುಂಬಿದ್ದರು. ಜೋಡುಕರೆ ಕಂಬಳ ನಡೆಯುವ ಗದ್ದೆಯಲ್ಲಿ ಪುತ್ತೂರು ಬೆಡಿಗೆ ವ್ಯವಸ್ಥೆ ಮಾಡಲಾಗಿತ್ತು. ಬೆಡಿ ಆಸಕ್ತರು ಇಲ್ಲೇ ಸುತ್ತಮುತ್ತ ನೆರೆದಿದ್ದರು. ದೂರದೂರಿನಿಂದ ಆಗಮಿಸಿದವರು ಜಾತ್ರಾ ಗದ್ದೆಯಲ್ಲೇ ಟವೆಲ್‌, ಕಾಗದ ಹರಡಿ ಕುಳಿತಿದ್ದರು. ಒಂದಷ್ಟು ಜನ ಸುತ್ತಮುತ್ತಲಿನ ಕಟ್ಟಡವೇರಿ ಬ್ರಹ್ಮರಥದ, ಬೆಡಿಯ ವೈಭವವನ್ನು ಸವಿ ಯುತ್ತಿದ್ದರು. ಇನ್ನೊಂದಷ್ಟು ಮಂದಿ ಗದ್ದೆಯ ತುಂಬಾ ಓಡಾಟ ನಡೆಸಿ, ಖರೀದಿಯಲ್ಲಿ ಬ್ಯುಸಿಯಾಗಿದ್ದರು. ಅಷ್ಟು ಹೊತ್ತಿಗೂ ಜನರು ಆಗಮಿಸುತ್ತಲೇ ಇದ್ದರು. ಈ ಹಿನ್ನೆಲೆಯಲ್ಲಿ ಪೇಟೆ ತುಂಬಾ ಪೊಲೀಸರು ಸಂಚಾರ ದಟ್ಟಣೆ ನಿರ್ವಹಣೆಗಾಗಿ ಬಂದೋಬಸ್ತ್ ಕೈಗೊಂಡಿದ್ದರು.

ರಾತ್ರಿ 9.45ರ ಸುಮಾರಿಗೆ ಶ್ರೀ ಮಹಾಲಿಂಗೇಶ್ವರ ದೇವರು ಬ್ರಹ್ಮರಥಾ ರೂಢರಾದರು. ಬ್ರಹ್ಮರಥ ದೆದುರು ಕಾಜು ಕುಜುಂಬ ದೈವದ ಕಟ್ಟುಕಟ್ಟಳೆ ನೇಮ ನಡೆದು, ಶ್ರೀ  ಮಹಾಲಿಂಗೇಶ್ವರ ದೇವರ ಆಕರ್ಷಕ ಉತ್ಸವ ಬಲಿ ನಡೆಯಿತು.

ಇದೇ ಹೊತ್ತಿಗೆ ರಥಬೀದಿಯಲ್ಲಿ ಕರ್ಪೂರದ ಬೆಳಕು ಪಸರಿಸತೊಡಗಿತು. ರಥಬೀದಿಯಲ್ಲಿ ಬಲ್ನಾಡು ದೈವಗಳ ಭಂಡಾರ, ಕಾಜುಕುಜುಂಬ ದೈವ, ಆಡಳಿತ ಮಂಡಳಿ ಉಪಸ್ಥಿತಿಯಲ್ಲಿ ದೇವರು ರಥಾ ರೂಢರಾದರು. ಲಕ್ಷಾಂತರ ಭಕ್ತರು ಈ ಸೊಬಗನ್ನು ಕಣ್ತುಂಬಿಕೊಂಡು, ಘೋಷಣೆ ಕೂಗಿದರು.

ರಥದಿಂದ ಬೆಂಕಿಯ ಕಿಡಿಯನ್ನು ಕೊಂಡೊ ಯ್ದು ಪ್ರಸಿದ್ಧ ಪುತ್ತೂರು ಬೆಡಿಗೆ ಅಗ್ನಿಸ್ಪರ್ಶ ಮಾಡಲಾಯಿತು. ಬಾನಂಗಳದಲ್ಲಿ ವರ್ಣಚಿತ್ತಾರ ಶುರುವಿಟ್ಟು ಕೊಂಡಿತು. ಒಂದು ಗಂಟೆಗೂ ಅಧಿಕ ಕಾಲ ಮೂಡಿಬಂದ ಬೆಡಿ ಪ್ರದರ್ಶನವನ್ನು ಹಲವರು ಮೊಬೈಲ್‌ನಲ್ಲಿ, ಕೆಮರಾದಲ್ಲಿ ಸೆರೆ ಹಿಡಿದರು. ಕೊನೆಗೆ ನೆಲ ಬಿರಿಯುವಂತೆ ಸದ್ದು ಮೊಳಗಿಸಿದ ಫಿನಿಶಿಂಗ್‌ ಟಚ್‌ ಬೆಚ್ಚಿ ಬೀಳಿಸಿತು. ಕಿವಿ ಗಡಚಿಕ್ಕುವ ಧ್ವನಿಗೆ,
ಸುಡುಮದ್ದಿನ ಕರಾಮತ್ತಿಗೆ ಗದ್ದೆಯ ತುಂಬಾ ನೆರೆದಿದ್ದ ಮಂದಿ ಹರ್ಷೋದ್ಘಾರ ಮೊಳಗಿಸಿದರು.

ಬೆಡಿ ಪೂರ್ಣಗೊಳ್ಳುತ್ತಿದ್ದಂತೆ ಬ್ರಹ್ಮರಥ ದಲ್ಲಿ ದೇವರಿಗೆ ಪೂಜೆ ನಡೆದು, ರಥೋತ್ಸವ ಆರಂಭಗೊಂಡಿತು. ಮೊದಲೇ ನೇಮಿಸಿದ್ದ ಸಮವಸ್ತ್ರ ಧರಿಸಿದ್ದ ಸ್ವಯಂಸೇವಕರು ಹಗ್ಗ ಹಿಡಿದು ರಥವನ್ನೆಳೆದರು. ಸುಮಾರು 750 ಮೀಟರ್‌ ದೂರ ರಥಬೀದಿಯಲ್ಲಿ ರಥೋತ್ಸವ ನಡೆಯಿತು. ಅರ್ಧದ ವರೆಗೆ ತೆರಳಿ ತಂತ್ರಿಗಳು ರಥದಿಂದಿಳಿದು ಮೂಲನಾಗನ ಕಟ್ಟೆಯಲ್ಲಿ ಪೂಜೆ ಸಲ್ಲಿಸಿದರು. ಅವರು ಮರಳಿ ಬಂದು, ಮತ್ತೆ ರಥ ಮುಂದುವರಿಯಿತು. ರಾಜಗೋಪುರದ ಬಳಿಗೆ ಹಿಂದಿರುಗಿ ಬಂದ ಬ್ರಹ್ಮರಥದಿಂದ ದೇವರು ಇಳಿದು, ಬಲಾ°ಡು ಉಳ್ಳಾಲ್ತಿ ದೈವಗಳನ್ನು ಬಂಗೇರ್‌ ಕಾಯರ್‌ಕಟ್ಟೆಯವರೆಗೆ ತೆರಳಿ ಬೀಳ್ಕೊಟ್ಟರು.

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.