ಫಿನ್‌ಟೆಕ್‌ ಹಬ್‌ ಆಗಿ ಮಂಗಳೂರು ಅಭಿವೃದ್ಧಿಗೆ ಬದ್ಧ ; ಸಚಿವ ಡಾ| ಅಶ್ವತ್ಥನಾರಾಯಣ


Team Udayavani, Dec 17, 2022, 6:53 AM IST

ಫಿನ್‌ಟೆಕ್‌ ಹಬ್‌ ಆಗಿ ಮಂಗಳೂರು ಅಭಿವೃದ್ಧಿಗೆ ಬದ್ಧ ; ಸಚಿವ ಡಾ| ಅಶ್ವತ್ಥನಾರಾಯಣ

ಮಂಗಳೂರು: ಹಲವು ಬ್ಯಾಂಕ್‌ಗಳ ತವರೆನಿಸಿರುವ ಮಂಗಳೂ ರನ್ನು ಫಿನ್‌ಟೆಕ್‌ ಹಬ್‌ ಆಗಿ ರೂಪಿಸಲು ಸಾಕಷ್ಟು ಅವಕಾಶಗಳಿವೆ ಹಾಗೂ ಈ ಕುರಿತು ಕಾರ್ಯಪಡೆ ನೀಡಿರುವ ಶಿಫಾರಸುಗಳನ್ನು ಅನುಷ್ಠಾನ ಮಾಡುವುದಕ್ಕೆ ಸರಕಾರ ಬದ್ಧವಾಗಿದೆ ಎಂದು ಉನ್ನತ ಶಿಕ್ಷಣ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ಡಾ|ಸಿ.ಎನ್‌. ಅಶ್ವತ್ಥನಾರಾಯಣ ತಿಳಿಸಿದ್ದಾರೆ.

ಟಿ.ಎಂ.ಎ. ಪೈ ಕನ್ವೆನ್ಶನ್‌ ಸೆಂಟರ್‌ ನಲ್ಲಿ ಕೆಡಿಇಎಂ ವತಿಯಿಂದ ಹಮ್ಮಿ ಕೊಂಡಿರುವ “ಮಂಗಳೂರು ಟೆಕ್ನೋ ವಾಂಜಾ’ ಸಮಾವೇಶದಲ್ಲಿ ಶುಕ್ರವಾರ ಅವರು ಐಟಿ ಹಾಗೂ ಇತರ ಕಂಪೆನಿ ಸಿಇಒಗಳ ಜತೆ ಸಂವಾದ ನಡೆಸಿದರು.

ಫಿನ್‌ಟೆಕ್‌, ಮೆಡ್‌ಟೆಕ್‌ ಆದ್ಯತೆ
ರಾಜ್ಯದಲ್ಲಿ ಐಟಿ ಹಾಗೂ ಐಟಿ ಪೂರಕ ಸೇವೆಗಳೊಂದಿಗೆ, ಎವಿಜಿಸಿ (ಎನಿಮೇಶನ್‌, ವಿಷುವಲ್‌ಎಫೆಕ್ಟ್ Õ, ಗೇಮಿಂಗ್‌, ಕಾಮಿಕ್ಸ್‌), ಫಿನ್‌ಟೆಕ್‌ ಹಾಗೂ ಮೆಡ್‌ಟೆಕ್‌ ಕ್ಷೇತ್ರಗಳನ್ನು ನಾವು ಆದ್ಯತೆಯ ಕ್ಷೇತ್ರಗಳಾಗಿ ಪರಿಗಣಿಸಿದ್ದೇವೆ, ಭವಿಷ್ಯದಲ್ಲಿ ಅವುಗಳ ಮೂಲಕ ಸಾಕಷ್ಟು ಉದ್ಯೋಗ ಸೃಷ್ಟಿ ಸಾಧ್ಯವಿದೆ ಎಂದು ತಿಳಿಸಿದರು.

ರಾಜ್ಯದ 2025ರ ಸ್ಟಾರ್ಟ್‌ ಅಪ್‌ ಗುರಿಯಾದ 22 ಸಾವಿರ ನವೋ ದ್ಯಮ ಸ್ಥಾಪನೆ ಸಾಧಿಸಲಾಗಿದೆ, ಇದನ್ನು ಇನ್ನಷ್ಟು ವಿಸ್ತರಿಸಿಕೊಂಡು ಹೋಗುವ ಕೆಲಸ ಮಾಡಲಾಗುವುದು. ಮಂಗಳೂರು, ಮೈಸೂರು, ಬೆಳಗಾವಿ ಕ್ಲಸ್ಟರ್‌ ಈ ಮೂರರಲ್ಲಿ ಬಿಯಾಂಡ್‌ ಬೆಂಗಳೂರು ಯೋಜನೆಯಂತೆ ಹೆಚ್ಚಿನ ನಿರೀಕ್ಷೆ ಇರಿಸಿಕೊಳ್ಳಲಾಗಿದೆ ಎಂದರು.

ಕರ್ಣಾಟಕ ಬ್ಯಾಂಕ್‌ನಿಂದ
ಫಿನ್‌ಟೆಕ್‌ ಸೆಲ್‌
ಕರ್ಣಾಟಕ ಬ್ಯಾಂಕ್‌ನ ಎಂ.ಡಿ. ಹಾಗೂ ಸಿಇಒ ಮಹಾಬಲೇಶ್ವರ ಎಂ.ಎಸ್‌. ಅವರು ಮಾತನಾಡಿ, ಸರಕಾರ ಫಿನ್‌ಟೆಕ್‌ ಪಾರ್ಕ್‌ ಸ್ಥಾಪನೆಗೆ ಆದ್ಯತೆ ನೀಡಬೇಕು, ಖಾಸಗಿ ಪಾರ್ಕ್‌ಗಳಿದ್ದರೂ ಅವುಗಳಲ್ಲಿ ಮೂಲ ಸೌಕರ್ಯ ಇರುವುದಿಲ್ಲ ಎಂದರಲ್ಲದೆ ಕರ್ಣಾಟಕ ಬ್ಯಾಂಕ್‌ನಲ್ಲಿ ಎಲ್ಲ ರೀತಿಯ ಪ್ರೋತ್ಸಾಹದೊಂದಿಗೆ ಫಿನ್‌ಟೆಕ್‌ ಸೆಲ್‌ ತೆರೆಯಲಾಗುವುದು ಎಂದು ಪ್ರಕಟಿಸಿದರು. ಸೈಬರ್‌ ಉತ್ಕೃಷ್ಟತಾ ಕೇಂದ್ರಕ್ಕೆ ಬ್ಯಾಂಕ್‌ ಮೂಲಕ ಪ್ರೋತ್ಸಾಹ ನೀಡುವ ಬಗ್ಗೆಯೂ ಯೋಜನೆ ರೂಪಿಸಲಾಗುತ್ತಿದೆ ಎಂದರು.

99 ಗೇಮ್ಸ್‌ನ ಸಿಇಒ ರೋಹಿತ್‌ ಭಟ್‌ ಮಾತನಾಡಿ, ಮಂಗಳೂರು ಕ್ಲಸ್ಟರ್‌ ಸದ್ಯ 1 ದೊಡ್ಡ ಕಂಪೆನಿ, 120 ಐಟಿ ಸಣ್ಣ ಸಂಸ್ಥೆ ಹಾಗೂ 200 ಸ್ಟಾರ್ಟ್‌ಅಪ್‌ ಹೊಂದಿದ್ದು 2030ರ ವೇಳೆಗೆ 15 ದೊಡ್ಡ ಕಂಪೆನಿ, 125 ಕಂಪೆನಿ ಉಪಕೇಂದ್ರ, 3000 ಸ್ಟಾರ್ಟ್‌ಅಪ್‌ ಹಾಗೂ 1 ಲಕ್ಷ ಉದ್ಯೋಗದ ಗುರಿ ಹಾಕಿಕೊಳ್ಳಲಾಗಿದೆ ಎಂದರು.

ರೇಝರ್‌ ಪೇ ಕಂಪೆನಿಯ ಸಿಎಫ್‌ಒ ಅರ್ಪಿತ್‌ ಅವರು ಫಿನ್‌ಟೆಕ್‌ ಕಾರ್ಯಪಡೆಯ ವರದಿಯನ್ನು ಮಂಡಿಸಿ, ಇದಕ್ಕೆ ಪೂರಕವಾಗಿ ಸರಕಾರವು ಕರ್ನಾಟಕ ಫಿನ್‌ಟೆಕ್‌ ನೀತಿ, ಫಿನ್‌ಟೆಕ್‌ ಉತ್ಕೃಷ್ಟತಾ ಕೇಂದ್ರ ಸ್ಥಾಪಿಸಬೇಕು, ಫಿನ್‌ಟೆಕ್‌ ಕುರಿತು ತರಬೇತಿ ಹಾಗೂ ಪ್ರೋತ್ಸಾಹದತ್ತ ಗಮನ ಕೊಡಬೇಕಿದೆ ಎಂದರು.

ಶಾಸಕ ವೇದವ್ಯಾಸ್‌ ಕಾಮತ್‌, ಡಾ| ಭರತ್‌ ಶೆಟ್ಟಿ, ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎ.ವಿ. ರಮಣ ರೆಡ್ಡಿ, ರೂಪಾ ಮೌದ್ಗಿಲ್‌, ಮಣಿಪಾಲ ಗ್ಲೋಬಲ್‌ ಎಜುಕೇಶನ್‌ ಅಧ್ಯಕ್ಷ ಮೋಹನದಾಸ್‌ ಪೈ, ಉದ್ಯಮಿಗಳಾದ ಲಿಂಗರಾಜು ಸಾವ್‌ಕಾರ್‌, ಪ್ರವೀಣ್‌ ಕಲಾºವಿ, ಆಶಿತ್‌ ಹೆಗ್ಡೆ, ಗೌರವ್‌ ಹೆಗ್ಡೆ, ದೀಕ್ಷಿತ್‌ ರೈ, ಶಶಿರ್‌ ಶೆಟ್ಟಿ, ಬ್ರಿಟಿಷ್‌ ಹೈಕಮಿಷನರ್‌ ಕೆ.ಟಿ. ರಾಜನ್‌, ಎಸ್‌ಬಿಐನ ಸಿಜಿಎಂ ನಂದಕಿಶೋರ್‌, ಕೆನರಾ ಚೇಂಬರ್‌ ಆಫ್‌ ಕಾಮರ್ಸ್‌ನ ಅಧ್ಯಕ್ಷ ಗಣೇಶ್‌ ಕಾಮತ್‌, ಎಸ್‌ಟಿಪಿಐ ನಿರ್ದೇಶಕ ರವೀಂದ್ರ ಆರೂರ್‌, ಕೆಡಿಇಎಂ ಅಧ್ಯಕ್ಷ ಬಿ.ವಿ. ನಾಯ್ಡು ಮತ್ತಿತರರಿದ್ದರು. ಕೆಡಿಇಎಂ ಸಿಇಒ ಸಂಜೀವ್‌ ಗುಪ್ತ ನಿರೂಪಿಸಿದರು.

ಉದ್ಯಮಿಗಳ ಪ್ರಮುಖ ಬೇಡಿಕೆಗಳು
ಬೆಂಗಳೂರು – ಮಂಗಳೂರು ಸಂಪರ್ಕ ಸಮಯ 5 ಗಂಟೆಗೆ ಇಳಿಸಬೇಕು, ಶಿರಾಡಿ ಘಾಟ್‌ ಸುರಂಗ ಯೋಜನೆ ರದ್ದುಪಡಿಸುವುದು ಸರಿಯಲ್ಲ, ಅದಕ್ಕೆ ಪರ್ಯಾಯವನ್ನಾದರೂ ಯೋಜಿಸಲೇಬೇಕು.

ಮಂಗಳೂರಿಗೆ ಫಿನ್‌ಟೆಕ್‌ನಲ್ಲಿ ಬೇಡಿಕೆ ಸಾಕಷ್ಟಿದೆ, ಕೊಲ್ಲಿ ರಾಷ್ಟ್ರಗಳಿಂದ ಇಲ್ಲಿಗೆ ಹೆಚ್ಚು ಸಂಬಂಧ ಇರುವುದರಿಂದ ಬಂಡವಾಳ ಆಕರ್ಷಿಸಲು ಆ ದೇಶಗಳಲ್ಲಿ ರೋಡ್‌ ಶೋ ನಡೆಸಬೇಕು.

ಕೋವಿಡ್‌ ಬಳಿಕ ಮಂಗಳೂರಿನಲ್ಲಿ ಐಟಿ ಮೂಲಸೌಕರ್ಯಕ್ಕೆ ಸಾಕಷ್ಟು ಬೇಡಿಕೆ ಇರುವುದರಿಂದ ಕಿಯೋನಿಕ್ಸ್‌ನವರ 3 ಎಕ್ರೆ ಜಾಗವನ್ನು ಕೆಡಿಇಎಂ ಲೀಸ್‌ಗೆ ಪಡೆದು ತ್ವರಿತವಾಗಿ 2 ಲಕ್ಷ ಚದರಡಿಯ ಜಾಗ ನಿರ್ಮಿಸಿ, ಐಟಿ ಕಂಪೆನಿಗಳಿಗೆ ಒದಗಿಸಬೇಕು.

ಟಾಪ್ ನ್ಯೂಸ್

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Sullia ಮನೆಯಿಂದ ನಗ, ನಗದು ಕಳವು

Sullia ಮನೆಯಿಂದ ನಗ, ನಗದು ಕಳವು

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Mangaluru ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿನ್ನು ಮೌನ! ಇಲ್ಲಿದೆ ಕಾರಣ

Mangaluru ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿನ್ನು ಮೌನ! ಇಲ್ಲಿದೆ ಕಾರಣ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

“ಕೃಷಿ ರಕ್ಷಣೆಗಾಗಿ ಆಯುಧ ಹಿಂಪಡೆಯಿರಿ’: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

“ಕೃಷಿ ರಕ್ಷಣೆಗಾಗಿ ಆಯುಧ ಹಿಂಪಡೆಯಿರಿ’: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.