ಪ್ರವಾಸಿಗರ ಮುಂದೆ ತುಳುನಾಡ ಸಾಂಸ್ಕೃತಿಕ ಅನಾವರಣ
ಎನ್ಎಂಪಿಟಿಗೆ ಹಡಗಿನಲ್ಲಿ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಳ
Team Udayavani, Nov 26, 2019, 5:28 AM IST
ವಿಶೇಷ ವರದಿ-ಸುರತ್ಕಲ್: ನವಮಂಗಳೂರು ಮೂಲಕ ಐಷಾರಾಮಿ ಪ್ರವಾಸಿ ಹಡಗು ಇದೀಗ ದಾಖಲೆ ಸಂಖ್ಯೆಯಲ್ಲಿ ಬರುವ ನಿರೀಕ್ಷೆಯಿದ್ದು, ಈಗಾಗಲೇ 21 ಹಡಗು ಗಳು ನೋಂದಣಿ ಮಾಡಿವೆ. ಇದೀಗ ಈ ಎಲ್ಲ ಪ್ರವಾಸಿಗರಿಗೆ ಯಕ್ಷಗಾನ, ತುಳುನಾಡ ಸಾಂಸ್ಕೃತಿಕ ಲೋಕದ ಮೂಲಕ ಸ್ವಾಗತ ಕೋರಲಾಗುತ್ತಿದೆ.
ಪ್ರಥಮ ಬಾರಿಗೆ ಕೇಂದ್ರ ಸರಕಾರ ಈ ಯಕ್ಷಗಾನ ಕಲಾವಿದರಿಗೆ ಮನ್ನಣೆ ನೀಡಿ ಎನ್ಎಂಪಿಟಿಯ ಮೂಲಕ ಇವರಿಗೆ ಸಾಂಸ್ಕೃತಿಕ ಪ್ರದರ್ಶನ ನೀಡಲು ಅನುಮತಿ ಸಿಕ್ಕಿದೆ. ಇದರ ಜತೆಗೆ ಒಂದಿಷ್ಟು ಗೌರವಧನವೂ ಇವರಿಗೆ ಲಭಿಸುತ್ತದೆ. ಈ ಮೂಲಕ ಯಕ್ಷಗಾನಕ್ಕೂ ವಿದೇಶಿ ಅಭಿಮಾನಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗತೊಡಗಿದೆ.
ಈ ಪ್ರವಾಸಿ ಋತುವಿನಲ್ಲಿ ಈಗಾಗಲೇ ನಾಲ್ಕು ಪ್ರವಾಸಿ ಹಡಗು ಬಂದಿವೆ. ಆ ವೇಳೆ ಯಕ್ಷಗಾನಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ.
ನವಮಂಗಳೂರು ಬಂದರಿನ ಒಳಗಿನ ಲಾಂಜ್ನಲ್ಲಿ ಯಕ್ಷಗಾನ ವೇಷಭೂಷಣ ಧರಿಸಿದ ಕಲಾವಿದರು ನಮ್ಮ ಯಕ್ಷಗಾನದ ನೃತ್ಯ ಪ್ರದರ್ಶಿಸುತ್ತಾರೆ. ಬಳಿಕ ಸಾಂಪ್ರದಾಯಿಕ ರೀತಿಯಲ್ಲಿ ನಮಸ್ಕರಿಸಿ ಅವರಿಗೆ ಸ್ವಾಗತ ಕೋರುತ್ತಾರೆ. ನವಿಲು ಕುಣಿತದ ಪ್ರದರ್ಶನವಿದೆ.
ಈ ಹಿಂದೆ ಡೊಳ್ಳುಕುಣಿತ, ಕಂಗೀಲು ನೃತ್ಯ ಮತ್ತಿತರ ತುಳುನಾಡ ವೈಭವ ಸಾರುವ ನೃತ್ಯ ಆಯೋಜಿಸಲಾಗಿತ್ತು. ಇದರಲ್ಲಿ ಯಕ್ಷಗಾನ ಇದರ ವೇಷ ಭೂಷಣ ಪ್ರವಾಸಿಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಕೆಲವು ಪ್ರವಾಸಿಗರು ವೇಷಧಾರಿಗಳೊಂದಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದ ಕ್ಷಣವೂ ಇದೆ. ಈ ಬಾರಿಯ ಬಾಲಕನೊಬ್ಬ ಯಕ್ಷಗಾನ ವೇಷದಲ್ಲಿದ್ದು ಪ್ರವಾಸಿಗರು ಈತನಿಗೆ ಅಭಿಮಾನದಿಂದ ಬಹುಮಾನ ರೂಪವಾಗಿ ಡಾಲರ್ ನೀಡಿ ಗೌರವಿಸಿದ್ದಾರೆ.
ಸೂಕ್ಷ್ಮ ವೇಷ ಭೂಷಣ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇಲ್ಲಿಗೆ ಬಂದವರು ಅದರ ಬಗ್ಗೆ ತಿಳಿದುಕೊಳ್ಳಲು ಉತ್ಸುಕರಾಗಿದ್ದೇವೆ ಎಂದು ಹೇಳುತ್ತಾರೆ. ನೃತ್ಯದ ಮೂಲಕ ಸ್ವಾಗತ ಕೋರುವ ತಂಡವನ್ನು ಮುನ್ನಡೆಸುತ್ತಿರುವ ಪಣಂಬೂರು ಯಕ್ಷಗಾನ ತಂಡದ ಶಂಕರನಾರಾಯಣ ಮೈರ್ಪಾಡಿ ಅವರು.
ಎರಡು ಹಡಗುಗಳು
ಬಹುತೇಕ ಹಡಗುಗಳು ಮುಂಬಯಿ ಮೂಲಕ ಆಗಮಿಸಿ ಮಂಗಳೂರು, ಕೊಚ್ಚಿನ್, ಇಲ್ಲವೇ ಕೊಚ್ಚಿನ್ ಮೂಲಕ ಆಗಮಿಸಿ ಗೋವಾ ಮೂಲಕ ಸಾಗುತ್ತವೆ. ನ. 26, 27ರಂದು ಎರಡು ದಿನ ಎರಡು ಪ್ರತ್ಯೇಕ ಪ್ರವಾಸಿ ಹಡಗು ಆಗಮಿಸಲಿದ್ದು, ಸ್ಥಳೀಯ ಐತಿಹಾಸಿಕ ಪ್ರವಾಸಿ ಸ್ಥಳಗಳನ್ನು ವೀಕ್ಷಿಸಲಿದ್ದಾರೆ.
ಸಂಸ್ಕೃತಿ ಪರಿಚಯಿಸುವ ಉದ್ದೇಶ
ಪ್ರವಾಸಿ ಹಡಗು ನವಮಂಗಳೂರಿಗೆ ಬಂದ ಸಂದರ್ಭ ನಮ್ಮ ಜಿಲ್ಲೆಯ ಉತ್ತಮ ಸಂಸ್ಕೃತಿಯನ್ನು ಪ್ರವಾಸಿಗರಿಗೆ ಪರಿಚಯಿಸುವ ಉದ್ದೇಶವಿದೆ. ಈ ಮೂಲಕ ಸಾಂಪ್ರದಾಯಿಕ ಯಕ್ಷಗಾನ ಮತ್ತು ಇತರ ನೃತ್ಯದ ಮೂಲಕ ಸ್ವಾಗತಿಸುವ ವಿಶೇಷ ವ್ಯವಸ್ಥೆಯನ್ನು ಎನ್ಎಂಪಿಟಿ ಮಾಡಿದೆ. ಪ್ರವಾಸಿಗರು ಆಕರ್ಷಿತರಾಗಿ ಮಾಹಿತಿ ಪಡೆಯು ವುದನ್ನು ಕಂಡಾಗ ಶ್ರೀಮಂತ ಸಂಸ್ಕೃತಿಯ ಬಗ್ಗೆ ಹೆಮ್ಮೆ ಎನಿಸುತ್ತದೆ.
– ಎ.ವಿ. ರಮಣ್,
ಚೆಯರ್ಮನ್ , ಎನ್ಎಂಪಿಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
MUST WATCH
ಹೊಸ ಸೇರ್ಪಡೆ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…