ದೀನ್ದಯಾಳ್ ಪುರಸ್ಕಾರಕ್ಕೆ : ದ.ಕ. ಜಿ.ಪಂ., ಸುಳ್ಯ ತಾ.ಪಂ., ಮುನ್ನೂರು ಗ್ರಾ.ಪಂ. ಆಯ್ಕೆ
Team Udayavani, Apr 18, 2022, 5:45 AM IST
ಮಂಗಳೂರು : ಕೇಂದ್ರ ಸರಕಾರದ ಪಂಚಾಯತ್ರಾಜ್ ಸಚಿವಾಲಯ ನೀಡುವ “ದೀನ್ದಯಾಳ್ ಉಪಾಧ್ಯಾಯ ಪಂಚಾಯತ್ ಸಶಕ್ತೀಕರಣ ಪುರಸ್ಕಾರ – 2022’ಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಆಯ್ಕೆಯಾಗಿದೆ.
ದ.ಕ. ಜಿಲ್ಲೆಯಲ್ಲಿ 2021-22ನೇ ಸಾಲಿನಲ್ಲಿ ಅನುಷ್ಠಾನಗೊಂಡಿರುವ ಹಲವಾರು ಯೋಜನೆಗಳು, ಆಗಿರುವ ಸಾಧನೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಧಾನಿ ಮೋದಿ ಅವರು ಎ. 24ರಂದು ಪಂಚಾಯತ್ ರಾಜ್ ದಿನದಂದು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
2021 ಮಾರ್ಚ್ನಿಂದ 2022ರ ಮಾರ್ಚ್ವರೆಗೆ ಸ್ವತ್ಛ ಭಾರತ್, ನರೇಗಾ ಯೋಜನೆ, ಕುಡಿಯುವ ನೀರು ಯೋಜನೆ, ತೆರಿಗೆ ಸಂಗ್ರಹ, ಅಭಿವೃದ್ಧಿ ಅನುದಾನ, 15ನೇ ಹಣಕಾಸು ಬಳಕೆ, ಡಿಜಿಟಲ್ ಲೈಬ್ರೆರಿ ಮೊದಲಾದವುಗಳಲ್ಲಿ ನಡೆದಿರುವ ಸಮಗ್ರ ಪ್ರಗತಿಯನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗುತ್ತಿದೆ. ದ.ಕ. ಜಿ.ಪಂ. ವಿನೂತನ ಯೋಜನೆಗಳಾದ ಪುಸ್ತಕ ಗೂಡು, ಪೌಷ್ಟಿಕ ಕೈತೋಟ ಮೊದಲಾದವುಗಳನ್ನು ಕೂಡ ಅನುಷ್ಠಾನಗೊಳಿಸಿದೆ.
ಮುನ್ನೂರು ಗ್ರಾ.ಪಂ. ಆಯ್ಕೆ
ಉಳ್ಳಾಲ: ದೀನ್ದಯಾಳ್ ಉಪಾಧ್ಯಾಯ ಪಂಚಾಯತ್ ಸಶಕ್ತಿಕರಣ ಪುರಸ್ಕಾರಕ್ಕೆ ಉಳ್ಳಾಲ ತಾಲೂಕಿನ ಮುನ್ನೂರು ಗ್ರಾ.ಪಂ. ಆಯ್ಕೆಯಾಗಿದೆ.
2020-21ನೇ ಸಾಲಿನಲ್ಲಿ ಮುನ್ನೂರು ಗ್ರಾ.ಪಂ. ಮಾಡಿರುವ ಉತ್ತಮ ಕಾರ್ಯಗಳನ್ನು ಗುರುತಿಸಿ ಮತ್ತು ನವೀನ ಯೋಜನೆಗಳ ಅನುಷ್ಠಾನ ಸಹಿತ ಎಲ್ಲ ನಿಯತಾಂಕಗಳಲ್ಲಿ ಅತ್ಯುತ್ತಮ ಕಾರ್ಯ ನಿರ್ವಹಿಸುವ ಗ್ರಾಮ ಎಂದು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪಂಚಾಯತ್ ಸದಸ್ಯರು, ಸಿಬಂದಿಯ ಕಾರ್ಯನಿರ್ವಹಣೆ, ಅಂಗನವಾಡಿ, ಆಶಾ ಕಾರ್ಯಕರ್ತೆಯರ ಸಹಿತ ಗ್ರಾಮದ ಜನರ ಸಹಕಾರದಿಂದ ಈ ಪ್ರಶಸ್ತಿಯನ್ನು ಪಡೆಯಲು ಸಾದ್ಯವಾಗಿದೆ ಎಂದು ಪಂಚಾಯತ್ ಅಧ್ಯಕ್ಷ ವಿಲ್ಫ್ರೆಡ್ ಡಿ’ಸೋಜಾ ಮತ್ತು ಪಿಡಿಒ ರವೀಂದ್ರ ರಾಜೀವ ನಾಯ್ಕ ತಿಳಿಸಿದ್ದಾರೆ. ಮುನ್ನೂರು ಗ್ರಾ.ಪಂ. ಸಹಿತ ರಾಜ್ಯದಿಂದ ಮೂರು ಗ್ರಾ.ಪಂ.ಗಳು ಈ ಪ್ರಶಸ್ತಿಗೆ ಆಯ್ಕೆಯಾಗಿವೆ.
ಸುಳ್ಯ ತಾ.ಪಂ.ಗೆ ಪ್ರಶಸ್ತಿ
ಸುಳ್ಯ: 2020-21ನೇ ಸಾಲಿನ ದೀನ್ ದಯಾಳ್ ಉಪಾಧ್ಯಾಯ ಪಂಚಾಯತ್ ಸಶಕ್ತೀಕರಣ ಪುರಸ್ಕಾರಕ್ಕೆ ಸುಳ್ಯ ತಾಲೂಕು ಪಂಚಾಯತ್ ಆಯ್ಕೆಯಾಗಿದೆ.
ರಾಜ್ಯದ ಎರಡು ತಾ.ಪಂ.ಗಳು ಈ ಪುರಸ್ಕಾರಕ್ಕೆ ಆಯ್ಕೆಯಾಗಿವೆ. ಸುಳ್ಯ ತಾ.ಪಂ.ನ ಎಲ್ಲ ರೀತಿಯ ಕಾರ್ಯಚಟುವಟಿಕೆ, ಕೆಲಸ, ನಿರ್ವಹಣೆ ಸಹಿತ ಸರ್ವ ವಿಧದ ಕಾರ್ಯಕ್ರಮಗಳನ್ನು ಒಟ್ಟು ಸೇರಿಸಿ ಪಡೆದ ಅಂಕದ ಮೇಲೆ ಈ ಪುರಸ್ಕಾರಕ್ಕೆ ಆಯ್ಕೆ ನಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ
Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ
Lok Sabha Polls: ಸ್ಟ್ರಾಂಗ್ ರೂಂಗಳಲ್ಲಿ ಮತಯಂತ್ರಗಳು ಸುಭದ್ರ
Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ
MUST WATCH
ಹೊಸ ಸೇರ್ಪಡೆ
ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್
Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ
Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ
BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ
Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!