ಏಕಮುಖ ಸಂಚಾರ ನಿಯಮ ಪಾಲಿಸಿದ ಚಾಲಕರು
ಸಾಧಕ-ಬಾಧಕ ವರದಿ ಅನಂತರ ಕ್ರಮ: ಎಎಸ್ಪಿ ಪ್ರದೀಪ್
Team Udayavani, May 6, 2019, 6:05 AM IST
ಉಪ್ಪಿನಂಗಡಿ: ಪೇಟೆಯ ಬಸ್ ನಿಲ್ದಾಣ ಬ್ಯಾಂಕ್ ರಸ್ತೆಯಲ್ಲಿ ಪೊಲೀಸರಾಗಲಿ, ಗೃಹರಕ್ಷಕ ಸಿಬಂದಿ ಕರ್ತವ್ಯದಲ್ಲಿ ಇಲ್ಲದಿದ್ದರೂ, ವಾಹನ ಚಾಲಕರು ಏಕಮುಖ ಸಂಚಾರ ಪಾಲನೆ ಮಾಡುತ್ತಿದ್ದಾರೆ.
ಏಕಮುಖ ಸಂಚಾರದ ಕುರಿತು ಕಳೆದ ನಾಲ್ಕು ದಿನಗಳ ಹಿಂದೆ ಉಪ್ಪಿನಂಗಡಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರೊಬೆಷನರಿ ಸಹಾಯಕ ಎಸ್ಪಿ ಪ್ರದೀಪ್ ಗುಂಟೆಯವರು ದಿಢೀರ್ ನಿರ್ಧಾರ ತೆಗೆದುಕೊಂಡಿದ್ದರು. ಇದನ್ನು ವರ್ತಕರು ಸಭೆಯಲ್ಲಿ ಖಂಡಿಸಿದ್ದರು. ಆದರೂ ಕೆಲವರು ಇದು ಒಳ್ಳೆಯ ಬೆಳವಣಿಗೆ ಎಂದಿದ್ದರು.
3 ಕಡೆ ಅಳವಡಿಕೆ
ಪಟ್ಟಣದ ಪ್ರವೇಶ ದ್ವಾರ, ಹಳೇ ಬಸ್ ನಿಲ್ದಾಣ ಜಂಕ್ಷನ್ ಸೇರಿದಂತೆ ಶೆಣೈ ನರ್ಸಿಂಗ್ ಹೋಮ್ ಜಂಕ್ಷನ್ಗಳ ಮೂರು ಕಡೆಗಳಲ್ಲಿ ಬ್ಯಾರಿಕೇಡ್ ಹಾಕಿ ದಿನದ ಪಾಳಿಗೆ ಆರು ಪೊಲೀಸರು ಹಾಗೂ ಆರು ಗೃಹರಕ್ಷಕ ದಳ ಸಿಬಂದಿ ಕರ್ತವ್ಯ ನಿರ್ವಹಿಸುತ್ತಾ, ಏಕಮುಖ ಸಂಚಾರ ನಿಯಮ ಪಾಲನೆಯಾಗುತ್ತಿತ್ತು.
ಸಾರ್ವಜನಿಕರ ಮೆಚ್ಚುಗೆ
ರವಿವಾರ ಮುಂಜಾನೆಯಿಂದ ಮಧ್ಯಾಹ್ನದವರೆಗೆ ಪೊಲೀಸ್, ಗೃಹರಕ್ಷಕ ಸಿಬಂದಿ ಕರ್ತವ್ಯದಲ್ಲಿರಲಿಲ್ಲ. ಹೀಗಿದ್ದರೂ ಚಾಲಕರು ಅಳವಡಿಸಿದ ಬ್ಯಾರಿಕೇಡ್, ಅದರ ಮೇಲೆ ಇದ್ದ ಸೂಚನ ಫಲಕಗಳನ್ನು ಕಂಡು ಸ್ವಯಂಪ್ರೇರಿತರಾಗಿ ನಿಯಮ ಪಾಲನೆ ಮಾಡಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.
ಪ್ರಾಯೋಗಿಕ ವರದಿ
ಏಳು ದಿನಗಳವರೆಗೆ ಏಕಮುಖ ಸಂಚಾರ ಪ್ರಾಯೋಗಿಕವಾಗಿ ನಡೆಸಿ ಅದರ ಸಾಧಕ-ಬಾಧಕ ಕಲೆಹಾಕುವ ಪ್ರಯತ್ನವನ್ನು ಪೊಲೀಸ್ ಇಲಾಖೆ ನಡೆಸಿದೆ. ಬಳಿಕ ಮೇಲಾಧಿಕಾರಿಗಳಿಗೆ ವರದಿಯ ಮೂಲಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಎಸ್ಪಿ ಪ್ರದೀಪ್ ಗುಂಟೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ