ಕುಡ್ಲ ಎಕ್ಸ್ಪ್ರೆಸ್ ಶೀಘ್ರ ಮಂಗಳೂರು ಸೆಂಟ್ರಲ್ಗೆ ವಿಸ್ತರಣೆ
Team Udayavani, Apr 28, 2017, 2:25 PM IST
ಮಂಗಳೂರು: ಮಂಗಳೂರು-ಬೆಂಗಳೂರು ನಡುವೆ ಇತ್ತೀಚೆಗೆ ಪ್ರಾರಂಭಗೊಂಡಿರುವ “ಕುಡ್ಲ ಎಕ್ಸ್ಪ್ರೆಸ್’ ಇಂಟರ್ ಸಿಟಿ ರೈಲು ಸಂಚಾರ ಶೀಘ್ರದಲ್ಲೇ ಮಂಗಳೂರು ಸೆಂಟ್ರಲ್ವರೆಗೆ ವಿಸ್ತರಣೆಯಾಗುವ ಸಾಧ್ಯತೆಯಿದೆ.
ಪಾಲಾ^ಟ್ನಲ್ಲಿ ಗುರುವಾರ ನಡೆದ ವಿಭಾಗೀಯ ರೈಲ್ವೇ ಬಳಕೆದಾರರ ಸಲಹಾ ಸಮಿತಿ ಸಭೆಯಲ್ಲಿ ಕುಡ್ಲ ಎಕ್ಸ್ಪ್ರೆಸ್ ರೈಲು ಸಂಚಾರವನ್ನು ಕಂಕನಾಡಿ ಜಂಕ್ಷನ್ ನಿಂದ ಸೆಂಟ್ರಲ್ವರೆಗೆ ವಿಸ್ತರಿಸುವ ಜತೆಗೆ ವೇಳಾಪಟ್ಟಿ ಬದಲಿಸುವ ಬೇಡಿಕೆ ಕುರಿತಂತೆ ವಿಸ್ತೃತ ಚರ್ಚೆ ನಡೆದಿದೆ. ಕುಡ್ಲ ಎಕ್ಸ್ಪ್ರೆಸ್ ರೈಲು ಸದ್ಯ ಕಂಕನಾಡಿ ಜಂಕ್ಷನ್ನಿಂದ ಹೊರಟು ಬೆಂಗಳೂರು ಸಿಟಿ ಬದಲಿಗೆ ಯಶವಂತ
ಪುರ ನಿಲ್ದಾಣ ತಲುಪುತ್ತಿದ್ದು, ಇದ ರಿಂದ ಪ್ರಯಾಣಿಕರಿಗೆ ತುಂಬಾ ಅನನುಕೂಲ ಆಗುತ್ತಿದೆ. ಈ ಕಾರಣದಿಂದ ಈ ರೈಲು ಜಂಕ್ಷನ್ ಬದಲು ಮಂಗಳೂರು ಸೆಂಟ್ರಲ್ನಿಂದ ಹೊರಟು ಬೆಂಗಳೂರು ಸೆಂಟ್ರಲ್ಗೆ ಸಂಚರಿಸುವಂತೆ ಬದಲಿಸಬೇಕೆಂದು ರೈಲ್ವೇ ಬಳಕೆದಾರರ ಸಮಿತಿ ಪರವಾಗಿ ಹನುಮಂತ್ ಕಾಮತ್ ಅವರು ಸಭೆಯಲ್ಲಿ ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ದಕ್ಷಿಣ ರೈಲ್ವೇ ಡಿಆರ್ಎಂ ನರೇಶ್ ಲಾಲ್ವಾನಿ, ಕುಡ್ಲ ಎಕ್ಸ್ಪ್ರೆಸ್ ಸಂಚಾರ ಸಂಬಂಧ, ಒಂದು ವೇಳೆ ನೈಋತ್ಯ ರೈಲ್ವೇ ವಲಯವು ವೇಳಾಪಟ್ಟಿಯನ್ನು ಮಾರ್ಪಡಿಸುವುದಾದರೆ, ಈ ರೈಲು ಅನ್ನು ಮಂಗಳೂರು ಸೆಂಟ್ರಲ್ವರೆಗೆ ಓಡಿಸುವುದಕ್ಕೆ ತೊಂದರೆಯಿಲ್ಲ. ಅಲ್ಲದೆ, ಈ ರೈಲು ಸೆಂಟ್ರಲ್ವರೆಗೆ ವಿಸ್ತರಣೆ ಯಾಗಬೇಕಾದರೆ ನಿಲುಗಡೆಗೂ ಅಲ್ಲಿ ಫ್ಲ್ಯಾಟ್ಫಾರಂ ಒದಗಿಸಬೇಕಾಗುತ್ತದೆ. ಹೀಗಾಗಿ, ಬೇರೆ ರೈಲಿನ ಸಂಚಾರದಲ್ಲಿ ಮಾರ್ಗ ಬದಲಾವಣೆ ಮಾಡುವ ಮೂಲಕ ಕುಡ್ಲ ಎಕ್ಸ್ಪ್ರೆಸ್
ಅನ್ನು ಪ್ರಯಾಣಿಕರಿಗೆ ಹೆಚ್ಚು ಅನು ಕೂಲವಾಗುವಂತೆ ಮಂಗಳೂರು ಸೆಂಟ್ರಲ್ ಹಾಗೂ ಬೆಂಗಳೂರು ಸೆಂಟ್ರಲ್ ನಡುವೆ ಓಡಿಸುವುದಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಕಾರವಾರ – ಮಂಗಳೂರು – ಬೆಂಗಳೂರು ರೈಲನ್ನು ಹಾಸನ ಮಾರ್ಗವಾಗಿ ಓಡಿಸುವುದರಿಂದ ಬೆಂಗಳೂರಿಗೆ ಹೋಗುವವರಿಗೆ 3 ತಾಸು ಪ್ರಯಾಣದ ಅವಧಿ ಉಳಿತಾಯವಾಗುತ್ತದೆ. ಈ ರೈಲಿನ ಸಮಯ ಮತ್ತು ಮಾರ್ಗದ ಬದಲಾವಣೆ ಮಾಡಿದರೆ ಕುಡ್ಲ ಎಕ್ಸ್ಪ್ರೆಸ್ ರೈಲಿನ ವೇಳಾಪಟ್ಟಿ ಬದಲಾವಣೆ ಹಾಗೂ ಮಂಗಳೂರು ಸೆಂಟ್ರಲ್ನಲ್ಲಿ ಫ್ಲ್ಯಾಟ್ಫಾರಂನಲ್ಲಿ ಸ್ಥಳಾವಕಾಶ ದೊರೆಯಲಿದೆ ಎಂಬ ಸಲಹೆಯನ್ನೂ ಹನುಮಂತ್ ಕಾಮತ್ ಸಭೆಯಲ್ಲಿ ನೀಡಿದ್ದಾರೆ ಎನ್ನಲಾಗಿದೆ.
ಈ ಬೇಡಿಕೆ ಬಗ್ಗೆಯೂ ಸಕಾರಾತ್ಮಕವಾಗಿ ಸ್ಪಂದಿಸಲಾಗುವುದು ಎಂದು ರೈಲ್ವೇ ಅಧಿಕಾರಿಗಳು ಹೇಳಿದ್ದಾರೆ. ಈ ನಡುವೆ “ಉದಯವಾಣಿ ‘ ಪತ್ರಿಕೆಯು ಕುಡ್ಲ ಎಕ್ಸ್ಪ್ರೆಸ್ ರೈಲು ಸಂಚಾರದ ವೇಳಾಪಟ್ಟಿ ಅನನುಕೂಲದ ಬಗ್ಗೆ ಇತ್ತೀಚೆಗೆ ನಡೆಸಿದ್ದ ರಿಯಾಲಿಟಿ ಚೆಕ್ ವರದಿ ಬಗ್ಗೆಯೂ ಸಭೆಯಲ್ಲಿ ಪ್ರಸ್ತಾವವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap ಮಂಗಳೂರು: ಕಾರು ಢಿಕ್ಕಿ; ಬೈಕ್ ಸವಾರ ಸಾವು
“ಪ್ರೇತ’ ಮದುವೆಗೆ ಕೊನೆಗೂ ಸಿಕ್ಕಿದ “ವರ’! ಆಟಿಯಲ್ಲಿ ನಡೆಯಲಿದೆ “ಪ್ರೇತ ಮದುವೆ’
Mangaluru University; ಪದವಿ 3 ವರ್ಷಕ್ಕೆ; ಪಠ್ಯಕ್ರಮ ಬದಲಾವಣೆಗೆ ವಿ.ವಿ. ನಿರ್ಧಾರ
Kerala “ವೆಸ್ಟ್ನೈಲ್’ ಜ್ವರದ ಆತಂಕ; ದ.ಕ. ಜಿಲ್ಲೆಯಲ್ಲೂ ವಿಶೇಷ ನಿಗಾ
ನೈಋತ್ಯ ಕ್ಷೇತ್ರ; ಬಿಜೆಪಿ- ಜೆಡಿಎಸ್ ಒಮ್ಮತದ ಅಭ್ಯರ್ಥಿಗೆ ಗೆಲುವು: ಡಾ| ಧನಂಜಯ ಸರ್ಜಿ