ತುಂಬೆ ನೀರಾ ಘಟಕ: ಆಶಾದಾಯಕ ಬೆಳವಣಿಗೆ


Team Udayavani, Jul 13, 2017, 2:35 AM IST

1207bteph9.jpg

ಬಂಟ್ವಾಳ: ರಾಜ್ಯದಲ್ಲಿ ಪ್ರಥಮ ಅನುಷ್ಠಾನಿತ ಬಂಟ್ವಾಳ ತಾಲೂಕಿನ ತುಂಬೆಯಲ್ಲಿ ಸ್ಥಾಪಿತ ನೀರಾ ಘಟಕ ಮುಚ್ಚುಗಡೆ ಯಾಗಿ ಇಂದಿಗೆ ಸರಿಯಾಗಿ ಎರಡು ವರ್ಷವಾಗಿದ್ದು ಇದೀಗ ಆಶಾದಾಯಕ ಬೆಳವಣಿಗೆಯೊಂದು ನಡೆಯುವ ಮೂಲಕ ಘಟಕ ಪುನಶ್ಚೇತನ ಆಗುವ ಲಕ್ಷಣಗಳು ಗೋಚರಿಸಿವೆ.

ಪ್ರಸ್ತುತ ಹಂತದಲ್ಲಿ ಘಟಕ ಪುನಶ್ಚೇತನಕ್ಕೆ ರಾಜ್ಯ ಸರಕಾರವು ಸೂಕ್ತವಾದ ಅನುದಾನ ಒದಗಿಸಿದರೆ ಖಾಸಗಿ ನೇತೃತ್ವದ ಕಂಪೆನಿಗಳು ನೀರಾ ಯೋಜನೆಯನ್ನು ಅನುಷ್ಠಾನಿಸಲು ಮುಂದೆ ಬರಲಿದೆ ಎಂದು ತಿಳಿದುಬಂದಿದೆ. 

ರೈತರ ಪಾಲಿಗೆ ಉದ್ಯೋಗ ಪೂರಕ ಘಟಕವನ್ನು ಪುನಶ್ಚೇತನ ಮಾಡುವಲ್ಲಿ ಖಾಸಗಿ ಕಂಪೆನಿಗಳ ಸಹಭಾಗಿತ್ವದ ಪ್ರಯತ್ನವೊಂದು ನಡೆದಿದೆ. 

ಎರಡು ವರ್ಷದ ಹಿಂದೆ ಸ್ಥಗಿತ
ಘಟಕ ಆರಂಭವಾದಾಗ ಕೇರಳ ರಾಜ್ಯದ ಖಾಸಗಿ ಕಂಪೆನಿ ಗುತ್ತಿಗೆ ನಿರ್ವಹಣೆ ವಹಿಸಿತ್ತು.  ಕಂಪೆನಿಯನ್ನು ನಿರ್ವಹಿಸುತ್ತಾ ಮೂರು ವರ್ಷಗಳಿಂದ ಸಹಾಯಧನ ಲಾಭ ಪಡೆದ ಕಂಪೆನಿ ಎರಡು ವರ್ಷದ ಹಿಂದೆ ಇಲ್ಲಿನ ಘಟಕಕ್ಕೆ ವಿದಾಯ ಹೇಳಿ ಸದ್ದಿಲ್ಲದೆ ಹೋಗಿಬಿಟ್ಟಿದೆ.

ಹಾಪ್‌ಕಾಮ್‌ ಘಟಕಕ್ಕೆ ರವಾನೆ 
ಕಲ್ಪರಸ ಅಭಿದಾನದ ತೆಂಗಿನ ಮರದ ದ್ರವೋತ್ಪನ್ನ. ನೀರಾ ಸಾಫ್ಟ್ ಡ್ರಿಂಕ್ಸ್‌  ಎಳನೀರಿನಷ್ಟೆ ಶುದ್ಧ. ರಾಷ್ಟ್ರಮಟ್ಟ
ದಲ್ಲಿಯೇ ಅತ್ಯಂತ ಆಧುನಿಕತೆಯ ಪ್ರಥಮ ಘಟಕ.  ಇದು ಬಂಟ್ವಾಳ ತಾಲೂಕು ತುಂಬೆ ತೋಟಗಾರಿಕೆ ಕ್ಷೇತ್ರದಲ್ಲಿ  2011-12ನೇ ಸಾಲಿನಲ್ಲಿ ಮೊದಲಿಗೆ  ಅಳವಡಿಕೆ ಆಗಿತ್ತು.   ಸುದೀರ್ಘ‌ ಎರಡು ವರ್ಷಗಳ ಅವಧಿಯಲ್ಲಿ ನಿರ್ವಹಣೆ ವಿಚಾರದ ತಾಂತ್ರಿಕ ಅಡಚಣೆ ಬಳಿಕ ಅಧಿಕೃತ ಚಾಲನೆಗೆ ದಿನಗಣನೆ ಆರಂಭವಾಗಿತ್ತು. ಪ್ರಾಯೋಗಿಕ ಮಾರಾಟಕ್ಕಾಗಿ 2014 ಮೇ 6ರಂದು ನೀರಾ ತಂಪು ಪಾನೀಯ ಪ್ಯಾಕೆಟ್‌ ಮಾದರಿಯಲ್ಲಿ ಮಂಗಳೂರು ಹಾಪ್‌ಕಾಮ್‌ ಘಟಕಕ್ಕೆ ರವಾನೆಯಾಗಿದೆ.  ಅಂದು ಬಂಟ್ವಾಳ ತಾಲೂಕು ತೋಟಗಾರಿಕೆ  ಸಹಾಯಕ ನಿರ್ದೇಶಕ ಪಿ. ಸಂಜೀವ ನಾಯ್ಕ ಅವರು  ಮುತುವರ್ಜಿ ವಹಿಸಿ ಕೆಲಸ ಮಾಡಿದ್ದರು. ಆದರೆ ಅವರು ಕೆಲವೊಂದು ಹಿತಾಸಕ್ತಿಗಳಿಗೆ ಒಗ್ಗಿಕೊಳ್ಳದ ಕಾರಣ ಇಲ್ಲಿಂದ ಎತ್ತಂಗಡಿಯಾಗಿಉಡುಪಿಗೆ ವರ್ಗಾವಣೆಗೊಂಡರು. ಇದರೊಂದಿಗೆ ಬಂಟ್ವಾಳದಲ್ಲಿ ನೀರಾ ಘಟಕವು ಹಿಂದಡಿ ಇಡುತ್ತಾ ಅಂತಿಮವಾಗಿ ಮುಚ್ಚುಗಡೆ ಆಯಿತು.

ತೋಟಗಾರಿಕೆ ಇಲಾಖೆ, ತೆಂಗು ಅಭಿವೃದ್ಧಿ ಮಂಡಳಿ, ಪಾಲಕ್ಕಾಡ್‌ ತೆಂಗು ಉತ್ಪಾದಕರ ಕಂಪೆನಿ ಜಂಟಿಯಾಗಿ ಘಟಕ ಇಲ್ಲಿನ ಘಟಕವನ್ನು ನಿರ್ವಹಿಸಲು ಒಪ್ಪಿಕೊಂಡು, ಮೂರ್ತೆದಾರರ ಮಹಾ ಮಂಡಲದ ತಾತ್ವಿಕ ಒಪ್ಪಿಗೆಯಿಂದ ಮಾರಾಟ ಆರಂಭವಾಗಿತ್ತು.

ತುಂಬೆ ಘಟಕವು ದಿನಕ್ಕೆ ಗರಿಷ್ಠ 2,000 ಲೀ. ಸಂಗ್ರಹ ಮತ್ತು ಸಂಸ್ಕರಣೆ  ಸಾಮರ್ಥ್ಯ ಹೊಂದಿತ್ತು. ಕನಿಷ್ಠ ನೂರು ಮಂದಿ ನೀರಾ ಮೂರ್ತೆದಾರರು, ಅಷ್ಟೆ ಸಂಖ್ಯೆಯ ಸಹಾಯಕರು, ಸಂಸ್ಕರಣೆ, ಮಾರಾಟ ಮತ್ತು ವಿತರಣೆಗೆ ಸುಮಾರು ಐವತ್ತು ಮಂದಿ ಸಿಬಂದಿಗಳ ಮೂಲಕ ಹಲವು ಮಂದಿಗೆ ಉದ್ಯೋಗ ಪೂರಕವಾಗಿತ್ತು.

1 ಕೋ.ರೂ.  ಅನುದಾನ
ತೆಂಗಿನ ಬೆಳೆಗಾರರಿಗೆ ಪ್ರೋತ್ಸಾಹ ನೀಡುವ ಉದ್ದೇಶದಲ್ಲಿ  ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿ ನೂತನ ಘಟಕ ಯಂತ್ರೋಪಕರಣಗಳ ಅಳವಡಿಕೆ ಆಗಿದೆ. 2011-12ನೇ ಸಾಲಿನ ರಾಜ್ಯ ಮುಂಗಡ ಪತ್ರದಲ್ಲಿ ಒಂದು ಕೋಟಿ ರೂ. ಅನುದಾನವು ಇದಕ್ಕೆ ಬಿಡುಗಡೆ ಆಗಿತ್ತು ಘಟಕ ಎಲ್ಲೆಲ್ಲಿದೆ ಒರಿಸ್ಸಾದಲ್ಲಿ ಖಾಸಗಿ ವ್ಯವಸ್ಥೆ ಯಡಿಯಲ್ಲಿ  2005ರಲ್ಲಿ ನೀರಾ ಘಟಕಕ್ಕೆ ಅನುಮತಿ ದೊರೆತಿದೆ. ತಮಿಳುನಾಡು, ಆಂಧ್ರದಲ್ಲೂ ಖಾಸಗಿ ವ್ಯವಸ್ಥೆ ನಡೆಸುತ್ತದೆ, ಕೇರಳದಲ್ಲಿ ಸರಕಾರಿ ಪ್ರಾಯೋಜಕತ್ವದಲ್ಲಿ ಘಟಕ ಸ್ಥಾಪಿಸಲಾಗಿದೆ .

ಟಾಪ್ ನ್ಯೂಸ್

T20 World Cup: ಐಪಿಎಲ್‌ ಪ್ಲೇಆಫ್’ಗಿಲ್ಲ ಬಟ್ಲರ್‌, ಸಾಲ್ಟ್, ಬೇರ್‌ಸ್ಟೋ

T20 World Cup: ಐಪಿಎಲ್‌ ಪ್ಲೇಆಫ್’ಗಿಲ್ಲ ಬಟ್ಲರ್‌, ಸಾಲ್ಟ್, ಬೇರ್‌ಸ್ಟೋ

Temperature ಕರಾವಳಿಯಲ್ಲಿ ಬಿಸಿ ವಾತಾವರಣದ ಮುನ್ಸೂಚನೆ

Temperature ಕರಾವಳಿಯಲ್ಲಿ ಬಿಸಿ ವಾತಾವರಣದ ಮುನ್ಸೂಚನೆ

Election; ಮೊಹಬ್ಬತ್‌ ಕೀ ದುಕಾನ್‌ನಲ್ಲಿ ಫೇಕ್‌ ವೀಡಿಯೋಗಳು ಮಾರಾಟ: ಮೋದಿ

Election; ಮೊಹಬ್ಬತ್‌ ಕೀ ದುಕಾನ್‌ನಲ್ಲಿ ಫೇಕ್‌ ವೀಡಿಯೋಗಳು ಮಾರಾಟ: ಮೋದಿ

COVID vaccine ಅಡ್ಡಪರಿಣಾಮ ನಿವಾರಣೆ: ಈ ಗಳಿಗೆಯ ತುರ್ತು

COVID vaccine ಅಡ್ಡಪರಿಣಾಮ ನಿವಾರಣೆ: ಈ ಗಳಿಗೆಯ ತುರ್ತು

Supreme Court slams IMA

Supreme Court; ಪತಂಜಲಿ ಆಯ್ತು, ಈಗ ಐಎಂಎ ವಿರುದ್ಧ ಸುಪ್ರೀಂ ಕೋರ್ಟ್‌ ಗರಂ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Temperature ಕರಾವಳಿಯಲ್ಲಿ ಬಿಸಿ ವಾತಾವರಣದ ಮುನ್ಸೂಚನೆ

Temperature ಕರಾವಳಿಯಲ್ಲಿ ಬಿಸಿ ವಾತಾವರಣದ ಮುನ್ಸೂಚನೆ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Sullia ಮನೆಯಿಂದ ನಗ, ನಗದು ಕಳವು

Sullia ಮನೆಯಿಂದ ನಗ, ನಗದು ಕಳವು

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

T20 World Cup: ಐಪಿಎಲ್‌ ಪ್ಲೇಆಫ್’ಗಿಲ್ಲ ಬಟ್ಲರ್‌, ಸಾಲ್ಟ್, ಬೇರ್‌ಸ್ಟೋ

T20 World Cup: ಐಪಿಎಲ್‌ ಪ್ಲೇಆಫ್’ಗಿಲ್ಲ ಬಟ್ಲರ್‌, ಸಾಲ್ಟ್, ಬೇರ್‌ಸ್ಟೋ

Temperature ಕರಾವಳಿಯಲ್ಲಿ ಬಿಸಿ ವಾತಾವರಣದ ಮುನ್ಸೂಚನೆ

Temperature ಕರಾವಳಿಯಲ್ಲಿ ಬಿಸಿ ವಾತಾವರಣದ ಮುನ್ಸೂಚನೆ

Election; ಮೊಹಬ್ಬತ್‌ ಕೀ ದುಕಾನ್‌ನಲ್ಲಿ ಫೇಕ್‌ ವೀಡಿಯೋಗಳು ಮಾರಾಟ: ಮೋದಿ

Election; ಮೊಹಬ್ಬತ್‌ ಕೀ ದುಕಾನ್‌ನಲ್ಲಿ ಫೇಕ್‌ ವೀಡಿಯೋಗಳು ಮಾರಾಟ: ಮೋದಿ

COVID vaccine ಅಡ್ಡಪರಿಣಾಮ ನಿವಾರಣೆ: ಈ ಗಳಿಗೆಯ ತುರ್ತು

COVID vaccine ಅಡ್ಡಪರಿಣಾಮ ನಿವಾರಣೆ: ಈ ಗಳಿಗೆಯ ತುರ್ತು

Supreme Court slams IMA

Supreme Court; ಪತಂಜಲಿ ಆಯ್ತು, ಈಗ ಐಎಂಎ ವಿರುದ್ಧ ಸುಪ್ರೀಂ ಕೋರ್ಟ್‌ ಗರಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.