ಹಣ್ಣಿನಲ್ಲೇ ತಯಾರಾದ ವಿಶ್ವಕಪ್ ಟ್ರೋಫಿ
Team Udayavani, Jun 9, 2019, 6:10 AM IST
ಪಿಲಿಕುಳ: ಹಣ್ಣುಗಳ ಉತ್ಸವ ಆಯೋಜಿಸುವುದರ ಮೂಲಕ ವಿವಿಧ ಹಣ್ಣುಗಳ ಉತ್ಪನ್ನಕ್ಕೆ ಪ್ರಾಮುಖ್ಯ ನೀಡು ತ್ತಿರುವುದು ಶ್ಲಾಘನೀಯ. ಆರೋಗ್ಯಕ್ಕೂ ಉತ್ತಮವಾಗಿರುವ ಹಣ್ಣುಗಳನ್ನು ಜನಸಾಮಾನ್ಯರಿಗೆ ತಲುಪಿಸುವುದು ಅಗತ್ಯವೂ ಆಗಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಡಾ| ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದಲ್ಲಿ ತೋಟಗಾರಿಕಾ ಇಲಾಖಾ ಸಹಯೋಗದೊಂದಿಗೆ ಜೂ. 9ರ ವರೆಗೆ ನಡೆಯುವ ಹಣ್ಣುಗಳ ಉತ್ಸವ ಮತ್ತು ಹಲಸು ಮೇಳವನ್ನು ಅವರು ಶನಿವಾರ ಉದ್ಘಾಟಿಸಿದರು.
ಹಲಸಿನ ಹಣ್ಣಿನ ಮೇಳ ಪಿಲಿಕುಳದಲ್ಲಿ ನಡೆಯುತ್ತಿದೆ. ಆದರೆ, ಹಲಸಿನ ಹಣ್ಣು ತೀರಾ ಕಡಿಮೆ ಇದೆ. ರೈತರು ಹಲಸಿನ ಹಣ್ಣಿನ ಬೆಳೆಗೆ ಪ್ರಾಮುಖ್ಯ ನೀಡಬೇಕು ಎಂದವರು ಹೇಳಿದರು.
ಮೂಡುಶೆಡ್ಡೆ ಗ್ರಾ.ಪಂ. ಅಧ್ಯಕ್ಷ ಹರೀಶ್ ಶೆಟ್ಟಿ, ಎಂಆರ್ಪಿಎಲ್ನ ಚೀಫ್ ಜನರಲ್ ಮ್ಯಾನೇಜರ್ ಯು. ವಿ. ಐತಾಳ್, ಭಾರತೀಯ ರೆಡ್ಕ್ರಾಸ್ ದ.ಕ. ಘಟಕದ ಚೆಯರ್ಮನ್ ಶಾಂತಾರಾಮ ಶೆಟ್ಟಿ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಪುರಾಣಿಕ್, ಪಿಲಿಕುಳ ನಿಸರ್ಗಧಾಮದ ಕಾರ್ಯ ನಿರ್ವಾಹಕ ನಿರ್ದೇಶಕಿ ಮೇಘನಾ, ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಕೆ.ವಿ. ರಾವ್ ಮತ್ತಿತರರು ಉಪಸ್ಥಿತರಿದ್ದರು.
ಘಮಘಮ ಗುಜ್ಜೆ ಕಬಾಬ್
ಹಣ್ಣುಗಳ ಉತ್ಸವದಲ್ಲಿ ಹಲಸಿನ ಮೇಳವನ್ನೂ ಆಯೋಜಿ ಸಲಾಗಿತ್ತಾದರೂ ಹಲಸಿನ ಹಣ್ಣುಗಳ ಸಂಖ್ಯೆ ತೀರಾ ಕಡಿಮೆ ಇತ್ತು. ವಿವಿಧ ಜಾತಿಯ ಮಾವಿನ ಹಣ್ಣುಗಳು ಬಾಯಿಯಲ್ಲಿ ನೀರೂರಿಸುವಂತಿದ್ದವು. ಹಲಸು, ಮಾವಿನ ಹಣ್ಣಿನಿಂದ ಮಾಡಿದ ವೈವಿಧ್ಯ ಖಾದ್ಯ, ಗುಜ್ಜೆ ಕಬಾಬ್, ಹಪ್ಪಳ, ಸಂಡಿಗೆ ಹಣ್ಣು ಪ್ರಿಯರನ್ನು ಆಕರ್ಷಿಸುತ್ತಿತ್ತು. ಜ್ಯಾಕ್ಫ್ರುಟ್, ಕಿತ್ತಳೆ, ಅನನಾಸ್ ಹಣ್ಣುಗಳು ಮಾತ್ರವಲ್ಲದೆ, ವಿವಿಧ ಸಾವಯವ ಉತ್ಪನ್ನಗಳ ಮಳಿಗೆ, ಹೂವು, ಹಣ್ಣುಗಳ ಗಿಡಗಳ ಮಾರಾಟವೂ ಇತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
MUST WATCH
ಹೊಸ ಸೇರ್ಪಡೆ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ