ಕನ್ನಡದ ಜಾಗತೀಕರಣ, ತಂತ್ರಜ್ಞಾನ ದೇಶೀಕರಣ
Team Udayavani, Jan 24, 2018, 11:36 AM IST
ಸುರತ್ಕಲ್ : ಕನ್ನಡದ ಜಾಗತೀಕರಣದ ನಡುವೆ ಆಧುನಿಕ ತಂತ್ರಜ್ಞಾನದ ದೇಶೀಕರಣ ಆಗುತ್ತಿರು ವುದರಿಂದ ಭಾಷೆಯ ತಲ್ಲಣ ನಡೆಯುತ್ತಿದೆ. ತಂತ್ರ ಜ್ಞಾನದ ಬಳಕೆಯಲ್ಲಿ ಯೂನಿಕೋಡ್ ಸಹಿತ ಸರಳ ಭಾಷೆ ಬಳಕೆಯಾಗುತ್ತಿರುವುದು ಸ್ವಾಗತಾರ್ಹ ಎಂದು ಹಳೆಯಂಗಡಿ ನಾರಾಯಣ ಸನಿಲ್ ಸರಕಾರಿ ಪ.ಪೂ. ಕಾಲೇಜಿನ ಉಪನ್ಯಾಸಕಿ ಜ್ಯೋತಿ ಚೇಳಾಯಿರು ಹೇಳಿದರು.
ಸುರತ್ಕಲ್ನ ಗೋವಿಂದದಾಸ ಕಾಲೇಜಿನಲ್ಲಿ ಜ. 23ರಂದು ನಡೆದ ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಾಹಿತ್ಯ ಮತ್ತು ಸಂಸ್ಕೃತಿ ಚಿಂತನೆಯ ವಿಚಾರ ಗೋಷ್ಠಿಯಲ್ಲಿ ಅವರು ಕನ್ನಡ ಸಾಹಿತ್ಯ ದಶಕದ ಸಂಕಥನ ಎಂಬ ವಿಷಯವನ್ನು ಮಂಡಿಸಿದರು.
ಸಾಹಿತ್ಯ ಶಾಸ್ತ್ರೀಯವಾಗಿಯೇ ಉಳಿದಲ್ಲ, ಪರಿಸರದ ಪ್ರಕೃತಿ ಸೌಂದರ್ಯದ ವರ್ಣನೆಯೇ ಸಾಹಿತ್ಯಕ್ಕೆ ಸೀಮಿತವಲ್ಲ,
ವಾಸ್ತವದ ನೆಲೆಗಟ್ಟಿನಲ್ಲಿ ವಿಸ್ತರಣೆಯಾಗಿದೆ. ಪ್ರಚಲಿತ ವಿದ್ಯನ್ಮಾನಗಳ ವಿಚಾರ ಮಂಡನೆಯು ನಡೆದಿದೆ. ಸಾಹಿತ್ಯ ಎಂದಿಗೂ ಸಂಭ್ರಮವಲ್ಲ, ಬದಲಾಗಿ ದಾಖಲೀಕರಣದ ಮೂಲವಾಗಿ ಹಾಗೂ ಕಲೆಯಿಂದ ಉದ್ಯಮದವರೆಗೂ ಬೆಳೆದಿದೆ, ಕನ್ನಡದೊಂದಿಗೆ ಕರಾವಳಿಯ ಬಹುಭಾಷೆಯ ಬೆಸುಗೆಯಲ್ಲಿ ಸಾಹಿತ್ಯವು ಅರಳಿದೆ ಎಂದರು. ಸಮ್ಮೇಳನದ ಅಧ್ಯಕ್ಷರಾದ ಪ್ರೊ| ಎಚ್. ರಮೇಶ ಕೆದಿಲಾಯ ಅಧ್ಯಕ್ಷತೆ ವಹಿಸಿದ್ದರು.
ಮೌಲ್ಯಕ್ಕೆ ಬೆಲೆಯಿಲ್ಲ
ಮೂಡಬಿದಿರೆ ಆಳ್ವಾಸ್ ಕಾಲೇಜಿನ ಉಪನ್ಯಾಸಕ ಡಾ| ಯೋಗೀಶ್ ಕೈರೋಡಿ ಅವರು ಆಧುನೀಕರಣದ ಪ್ರಕ್ರಿಯೆ ಮತ್ತು ಬದುಕು ಎಂಬ ವಿಷಯವನ್ನು ಮಂಡಿಸಿ, ಪ್ರಕೃತಿಯಂತೆ ಸ್ವಾಭಾವಿಕವಾಗಿ ಆಧುನಿಕ ಬೌದ್ಧಿಕ ವಿಷಯಕ್ಕೆ ಮಿತಿಯಿಲ್ಲ, ಅಸಹನೆ, ಟೀಕೆ, ಋಣಾತ್ಮಕ ಚಿಂತನೆಗೆ ಮನ್ನಣೆ ನೀಡುವ ನಾವು, ಯಾಂತ್ರಿಕ ಯುಗದಲ್ಲಿ ಕಳೆದ 20 ವರ್ಷಗಳಲ್ಲಿನ ಅಂತರ ನಮ್ಮನ್ನು ಬಹುಬೇಗ ಬೆಳೆಸಿದೆ. ಮೌಲ್ಯಕ್ಕೆ ಬೆಲೆಯಿಲ್ಲವಾಗಿದೆ. ಮಾರುಕಟ್ಟೆಯ ದೃಷ್ಟಿಯಲ್ಲಿ ನಮ್ಮನ್ನು ಬೆಳೆಸಿಕೊಳ್ಳುತ್ತಿದ್ದೇವೆ, ವಸ್ತುಗಳ ವ್ಯಾಮೋಹ ಹಾಗೂ ಆರ್ಥಿಕ ಶಕ್ತಿಯ ಮರುಪಾವತಿಗಾಗಿಯೇ ಜೀವನವನ್ನು ಮೀಸಲಿಡುತ್ತಿದ್ದೇವೆ. ಬದುಕು ಸ್ಪರ್ಧಾತ್ಮಕವಾಗಿ ರಚನೆಯಾಗುತ್ತಿದೆ ಎಂದು ಹೇಳಿದರು. ಅರುಣಾ ಕುಮಾರಿ ನಾಗರಾಜ್ ಸ್ವಾಗತಿಸಿ, ಮೋಲಿ ಮಿರಾಂದ ವಂದಿಸಿದರು, ರಘು ಇಡ್ಕಿದು ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kerala “ವೆಸ್ಟ್ನೈಲ್’ ಜ್ವರದ ಆತಂಕ; ದ.ಕ. ಜಿಲ್ಲೆಯಲ್ಲೂ ವಿಶೇಷ ನಿಗಾ
ನೈಋತ್ಯ ಕ್ಷೇತ್ರ; ಬಿಜೆಪಿ- ಜೆಡಿಎಸ್ ಒಮ್ಮತದ ಅಭ್ಯರ್ಥಿಗೆ ಗೆಲುವು: ಡಾ| ಧನಂಜಯ ಸರ್ಜಿ
Mulki ಪ್ರೇಯಸಿ ಆತ್ಮಹತ್ಯೆ ಬೆನ್ನಲ್ಲೇ ಪ್ರಿಯತಮನೂ ಆತ್ಮಹತ್ಯೆ
Surathkal; ಉದ್ಯಮಿಯ ಮೇಲೆ ಪತ್ನಿ, ಸಂಬಂಧಿಕರಿಂದ ಹಲ್ಲೆ, ಗೃಹಬಂಧನ
Moodabidri ಹೊಸಬೆಟ್ಟು: ಈಜುಕೊಳಕ್ಕೆ ಧುಮುಕಿದ ಯುವಕ ಸಾವು
MUST WATCH
ಹೊಸ ಸೇರ್ಪಡೆ
National Conference ರೋಡ್ ಶೋ ವೇಳೆ ಮೂವರಿಗೆ ಚಾಕು ಇರಿತ
ಸಾವಿರ ವರ್ಷಗಳ ಭಾರತಕ್ಕಾಗಿ ಯೋಜನೆ; ಈಗಿನ ಯೋಜನೆಗಳಿಂದ ಭಾರತದ ಭವಿಷ್ಯ ಉಜ್ವಲ
Charmady: ರಸ್ತೆಯಲ್ಲಿ ಸಿಲುಕಿದ ಕಂಟೈನರ್ ಲಾರಿ; ಟ್ರಾಫಿಕ್ ಜಾಮ್
ಅನಾಮಧೇಯ ಲಿಂಕ್ ಕ್ಲಿಕ್ಕಿಸಿ ಲಕ್ಷಾಂತರ ರೂ. ಕಳೆದುಕೊಂಡ ವ್ಯಕ್ತಿ
Madhya Pradesh:ಮಗ ಮಾಡಿದ ತಪ್ಪಿಗೆ ದಲಿತ ತಂದೆ,ತಾಯಿಗೆ ಕಂಬಕ್ಕೆ ಕಟ್ಟಿ ಥಳಿಸಿ,ಬೂಟಿನ ಹಾರ