ಗಿಡಗಳ ಸಿರಿವಂತಿಕೆಯೇ ಇವರಿಗೆ ಜೀವಾಳ !


Team Udayavani, Aug 11, 2019, 5:17 AM IST

d-28

ಮಂಗಳೂರು: ಇಲ್ಲೋರ್ವರು ಉದ್ಯಮಿ ಸಾರ್ವಜನಿಕ ರಸ್ತೆಗಳಲ್ಲೆಲ್ಲ ಗಿಡ ನೆಡುವ ಕಾಯಕದಲ್ಲಿ ತೊಡಗಿದ್ದಾರೆ. ಬೆಳಗ್ಗೆ ಐದಕ್ಕೆ ಎದ್ದು ರಸ್ತೆಯುದ್ದಕ್ಕೂ ಸುತ್ತಿ ಗಿಡಗಳನ್ನು ಪೋಷಣೆ ಮಾಡುತ್ತಿದ್ದಾರೆ.

ಜಪ್ಪಿನಮೊಗರು ಬಂಟರ ಸಂಘದ ಬಳಿಯ ನಿವಾಸಿ ಜೆ. ಪ್ರವೀಣ್‌ಚಂದ್ರ ರೈ ಅವರೇ ಈ ವೃಕ್ಷಪ್ರೇಮಿ. ಉಜ್ಜೋಡಿಯ ಬೈಕ್‌ ಕ್ಲಿನಿಕ್‌ ಸಂಸ್ಥೆಯ ಮಾಲಕರಾಗಿರುವ ಪ್ರವೀಣ್‌ಚಂದ್ರ ಐದು ವರ್ಷಗಳಿಂದ ಜಪ್ಪಿನಮೊಗರು ಸಾರ್ವಜನಿಕ ರಸ್ತೆಗಳಲ್ಲಿ ಗಿಡ ನೆಟ್ಟು ಪೋಷಿಸುತ್ತಿದ್ದಾರೆ. ವಿವಿಧ ರಸ್ತೆ ಬದಿಗಳಲ್ಲಿ 730ಕ್ಕೂ ಹೆಚ್ಚು ನಾನಾ ಜಾತಿಯ ಗಿಡಗಳು ಅವರ ಪೋಷಣೆಯಲ್ಲಿವೆ.

ರಸ್ತೆ ಬದಿ ಮಾತ್ರವಲ್ಲದೆ, ಮನೆಯ ಸುತ್ತಮುತ್ತಲಿನ ಪರಿಸರದಲ್ಲೇ ಸುಮಾರು 147 ಗಿಡಗಳನ್ನು ನೆಟ್ಟು ಬೆಳೆಸು ತ್ತಿದ್ದಾರೆ. ನೇರಳೆ, ಚಿಕ್ಕು, ಕಹಿ ಬೇವು, ಕಾಡು ದಾಸವಾಳ, ವಿವಿಧ ಜಾತಿಯ ಔಷಧ ಗಿಡಗಳು, ಗಂಧ, ಕದಂಬ ಬಾಳೆ ಸಹಿತ ವೈವಿಧ್ಯ ಜಾತಿಯ ಗಿಡಗಳನ್ನು ಅವರು ನೆಟ್ಟು ಪೊಷಿಸುತ್ತಿದ್ದಾರೆ.

ಏಕಾಂಗಿಯಾಗಿ ಗಿಡಗಳ ಪೋಷಣೆ
ಅವರ ಈ ವೃಕ್ಷ ಪ್ರೇಮದ ಹಿಂದೆ ಏಕಾಂಗಿ ಶ್ರಮವಿದೆ. ಮಳೆ, ಚಳಿಯನ್ನು ಲೆಕ್ಕಿಸದೆ, ಪ್ರತಿದಿನ ಬೆಳಗ್ಗೆ 5 ಗಂಟೆಗೆ ಎದ್ದು ತಮ್ಮ ಕಾರಿನಲ್ಲಿ ರಸ್ತೆಯುದ್ದಕ್ಕೂ ಸಂಚರಿಸುತ್ತಾರೆ. ಬೆಳಗ್ಗೆ ಏಳೂವರೆ ತನಕ ನೆಟ್ಟ ಗಿಡಗಳ ಬಳಿ ಇರುವ ಕಳೆ ಕಿತ್ತು ರಕ್ಷಣೆ ನೀಡುತ್ತಾರೆ. ಗಿಡಗಳನ್ನು ನೆಡಲು ಗುಂಡಿ ತೋಡಲು ಹಣ ನೀಡಿ ಕೆಲಸಗಾರರ ಸಹಕಾರ ಪಡೆಯುವುದು ಬಿಟ್ಟರೆ ಮಿಕ್ಕೆಲ್ಲ ಕೆಲಸಗಳನ್ನು ಏಕಾಂಗಿಯಾಗಿಯೇ ನಿರ್ವಹಿಸುತ್ತಾರೆ. ಕೆಲವು ಗಿಡಗಳನ್ನು ಅರಣ್ಯ ಇಲಾಖೆ ಉಚಿತವಾಗಿ ನೀಡಿದ್ದರೆ, ಬಹುತೇಕ ಗಿಡಗಳನ್ನು ಹಣ ನೀಡಿ ಖರೀದಿ ಮಾಡಿದ್ದಾರೆ. ಗಿಡ ಖರೀದಿ ಸಹಿತ ಪಾಲನೆ – ಪೋಷಣೆಗೆ ಲಕ್ಷಾಂತರ ರೂ. ಖರ್ಚು ಮಾಡಿದ್ದಾರೆ.

ಸ್ವಯಂ ಜಾಗೃತಿ
ಸಾರ್ವಜನಿಕ ರಸ್ತೆ ಬದಿಯಲ್ಲಿ ಗಿಡ ನೆಡುವಾಗ ಒಂದಷ್ಟು ಮಂದಿ ತಕರಾರು ತೆಗೆದಿದ್ದರು. ಇವೆಲ್ಲವನ್ನು ಸಹಿಸಿ ಕೊಂಡು ಗಿಡಗಳನ್ನು ಪೋಷಿ ಸುತ್ತಿದ್ದೇನೆ ಎನ್ನುತ್ತಾರೆ ರೈ. ಗಿಡಗಳ ಮೇಲೆ ಕೆಲವರು ವಾಹನಗಳನ್ನು ತಂದು ನಿಲ್ಲಿಸುತ್ತಿರುವುದರಿಂದ ಅವುಗಳು ಸಾಯುತ್ತಿವೆ. ಗಿಡಗಳ ರಕ್ಷಣೆ ಅರಿವು ಸ್ವಯಂ ಜಾಗೃತಿಯಿಂದ ಬಂದರೆ ಮಾತ್ರ ಹಸುರು ಕಂಗೊಳಿಸಲು ಸಾಧ್ಯ ಎನ್ನುತ್ತಾರೆ ಅವರು.

ಕಾರಿನಲ್ಲಿ ಟ್ಯಾಂಕ್‌ ವ್ಯವಸ್ಥೆ
ವಿಶೇಷವೆಂದರೆ, ತಾವು ನೆಟ್ಟ ಗಿಡಗಳಿಗೆ ಬೇಸಗೆಯಲ್ಲಿ ನೀರು ಹಾಯಿಸಲು ಅವರು ತಮ್ಮ ಆಲೊrೕ ಕಾರಿನಲ್ಲಿ ಸಿಂಟೆಕ್ಸ್‌ ಟ್ಯಾಂಕ್‌ವೊಂದನ್ನು ಇರಿಸಿಕೊಂಡಿದ್ದಾರೆ. ಕಾರಿನ ಹಿಂಬದಿ ಸೀಟ್‌ಗಳನ್ನು ಸಂಪೂರ್ಣ ಕಿತ್ತು ಹಾಕಿ ಅಲ್ಲಿ ಟ್ಯಾಂಕ್‌ ಇರಿಸಲಾಗಿದ್ದು, ಟ್ಯಾಂಕಿಗೆ ನೀರು ತುಂಬಿಸಿ ಕೊಂಡೊಯ್ದು ಗಿಡಗಳಿಗೆ ನೀರು ಹಾಯಿಸುತ್ತಿದ್ದಾರೆ. ನೀರೆರೆಯಲು ಸುಲಭವಾಗುವಂತೆ ಟ್ಯಾಂಕಿಗೆ ಪೈಪ್‌ ಸಂಪರ್ಕ ನೀಡಲಾಗಿದೆ. ಗಿಡಗಳ ಪಕ್ಕದಲ್ಲಿರುವ ಕಳೆ ತೆಗೆಯಲು ಕತ್ತಿ, ಗಿಡ ನೆಡಲು ಗುಂಡಿ ತೋಡಲು ಹಾರೆಯನ್ನೂ ಕಾರಿನಲ್ಲಿ ಇರಿಸಿಕೊಂಡಿದ್ದಾರೆ. ಈ ಕಾರಿಗೆ ವೃಕ್ಷತೋರಣ ಎಂದು ಹೆಸರಿಟ್ಟಿದ್ದು, ಕಾರಿನಲ್ಲಿ ‘ಮುಂದಿನ ಜನಾಂಗಕ್ಕಾಗಿ ಗಿಡಮರಗಳ ರಕ್ಷಣೆ-ಪೋಷಣೆ; ಸ್ವಾರ್ಥಕ್ಕಾಗಿ ಅಲ್ಲ’ ಎಂಬ ಸಾಲನ್ನು ಬರೆದಿದ್ದಾರೆ.

ಇರುವ ಸ್ಥಳ ಬಳಸಿ ಗಿಡ ಬೆಳೆಸಿನಮ್ಮ ಬಾಲ್ಯದಲ್ಲಿ ಮರಗಿಡಗಳೆಲ್ಲ ಸೊಂಪಾಗಿ ಬೆಳೆಯುತ್ತಿದ್ದವು. ಪ್ರಸ್ತುತ ಎಲ್ಲೆಡೆಯೂ ಕಾಂಕ್ರಿಟ್ ಕಾನನವೇ ತುಂಬಿಕೊಂಡಿದೆ. ಎಸಿ ಇಲ್ಲದೆ ಒಂದು ಕ್ಷಣವೂ ಕುಳಿತುಕೊಳ್ಳಲಾಗದಷ್ಟು ಭೂಮಿಯ ಉಷ್ಣತೆ ಜಾಸ್ತಿಯಾಗಿದೆ. ಇರುವ ಸ್ಥಳಾವಕಾಶವನ್ನೇ ಬಳಸಿಕೊಂಡು ಗಿಡ ಬೆಳೆಸಿದರೆ ವಾತಾವರಣಕ್ಕೂ, ನಮ್ಮ ಜೀವನಕ್ಕೂ ಹಿತ. ಇದಕ್ಕಾಗಿಯೇ ಗಿಡ ಬೆಳೆಸಲು ಮುಂದಾದೆ.
– ಜೆ. ಪ್ರವೀಣ್‌ಚಂದ್ರ ರೈ, ಗಿಡಗಳ ಪೋಷಕ

ಧನ್ಯಾ ಬಾಳೆಕಜೆ

ಟಾಪ್ ನ್ಯೂಸ್

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.