‘ಬರವಣಿಗೆ ನಿಂತರೆ, ಉಸಿರು ನಿಂತಂತೆ!’


Team Udayavani, Mar 3, 2018, 11:41 AM IST

3-March-6.jpg

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಾ. 5ರಿಂದ 7ರವರೆಗೆ ನಡೆಯಲಿರುವ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷೆಯಾಗಿ ಎ.ಪಿ. ಮಾಲತಿ ಅವರು ಆಯ್ಕೆಯಾಗಿದ್ದಾರೆ. ಕಾದಂಬರಿಗಾರ್ತಿಯಾಗಿ ಮನ್ನಣೆ ಪಡೆದಿರುವ ಅವರು ಸಮ್ಮೇಳನ ಹಿನ್ನೆಲೆಯಲ್ಲಿ ಸುದಿನದೊಂದಿಗೆ ಮಾತನಾಡಿದ್ದು, ಸಾಹಿತ್ಯ, ಕನ್ನಡ ಕುರಿತಾಗಿ ಮುಕ್ತವಾಗಿ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

ನಿಮ್ಮ ಪಾಲಿಗೆ ಸಾಹಿತ್ಯ ಅಂದರೇನು?
ಸಾಹಿತ್ಯವೆಂದರೆ ನನ್ನ ಪಾಲಿಗೆ ಬದುಕು. ಬದುಕಿನ ಅರ್ಥ ಕಲಿಸಿ ಜೀವನೋತ್ಸಾಹ ತುಂಬಿಸಿದೆ. ಕೃಷಿ ನನ್ನ ವೃತ್ತಿ. ಸಾಹಿತ್ಯ ನನ್ನ ಪ್ರವೃತ್ತಿ. ಬರವಣಿಗೆ ನನಗೆ ಮಾನಸಿಕ ಸ್ಥಿತಪ್ರಜ್ಞತೆ ಕೊಟ್ಟಂತೆ ಜೀವನದ ಹಲವು ಸೌಂದರ್ಯಗಳನ್ನು ತೋರಿಸಿಕೊಟ್ಟಿದೆ. ಹಿರಿ-ಕಿರಿಯ ಲೇಖಕಿಯರ ಒಡನಾಟದಿಂದ ಬೌದ್ಧಿಕ ಜಗತ್ತು ವಿಸ್ತರಿಸಿದೆ. ಸಾಹಿತ್ಯಾಭಿಮಾನಿಗಳು, ಕಾರ್ಯಕ್ರಮಗಳಿಂದ ನಾನು ಸದಾ ಚೈತನ್ಯದಿಂದ ಇರುವಂತೆ ಸಾಧ್ಯವಾಗಿದೆ. ಸಾಹಿತ್ಯ ಬರವಣಿಗೆ ನಿಂತು ಹೋದರೆ ನನ್ನ ಉಸಿರು ನಿಂತಂತೆ!

 ಸಾಹಿತಿಗಳು ಈಗ ಅನ್ಯ ಕಾರಣದಿಂದಲೇ ಹೆಚ್ಚು ಸುದ್ದಿಯಾಗುತ್ತಾರಲ್ಲ?
ಸಮಾಜದ ಅನೇಕ ವೈರುಧ್ಯಗಳ ನಡುವೆ ಸಾಹಿತಿ ಬೆಳೆಯಬೇಕಾಗುತ್ತದೆ. ಬದುಕಿನ ವಾಸ್ತವದಲ್ಲಿ ಸಮಾಜದ ಒಳಿತು ಕೆಡಕುಗಳನ್ನು ಚಿಂತಿಸುವ ಬುದ್ಧಿವಂತ ಸಾಹಿತಿ ತನಗೆ ಕಂಡದ್ದನ್ನು ನಿಸ್ಸಂಕೋಚವಾಗಿ ಹೇಳುತ್ತಾನೆ. ಅವನ ಟೀಕೆ, ವಿಮರ್ಶೆಗಳಿಗೆ ಜನ ಹೆಚ್ಚು ಗಮನ ಕೊಡುತ್ತಾರೆ. ಹಾಗೆಂದು ಎಲ್ಲರಿಗೂ ಪಥ್ಯ ಆಗಲೇಬೇಕಿಲ್ಲ. ಅನಿಸಿದ್ದನ್ನು ಹೇಳುವ ಹಕ್ಕು ಪ್ರಜ್ಞಾವಂತ ಓದುಗನಿಗೂ ಇದೆ. ಸಾಹಿತಿ ಕೊಡುವ ಹೇಳಿಕೆ ಮೇಲೆ ಗೊಂದಲವಿಲ್ಲದ ಆರೋಗ್ಯಪೂರ್ಣ ಚರ್ಚೆ ನಡೆಯಬೇಕು. ಶಾಂತ, ಸಹಬಾಳ್ವೆ, ಸಾಮರಸ್ಯ ಇರುವಂತೆ ಸಾಹಿತಿ-ಓದುಗ- ಸಮಾಜ ಎಚ್ಚರವಾಗಿರಬೇಕು.

ಬಾಲ್ಯದಲ್ಲಿ ನಿಮ್ಮನ್ನು  ಸಾಹಿತಿಯಾಗಿ ಬೆಳೆಸಿದ  ಅಂಶಗಳು ಯಾವುದು?
ದಕ್ಷಿಣ ಕನ್ನಡದ ವಿಟ್ಲದವರಾದ ತಂದೆ ಉದ್ಯೋಗ ನಿಮಿತ್ತ ಉತ್ತರ ಕನ್ನಡದ ಕಾರವಾರ, ಕರ್ಕಿ, ಹೊನ್ನಾವರ, ಧಾರವಾಡ, ಆನಂತರ ಮುಂಬಯಿ ಹೀಗೆ ಹಲವಾರು ಸಣ್ಣ ದೊಡ್ಡ, ಮಹಾನಗರದಲ್ಲಿ ಇದ್ದವರು. ಕರ್ಕಿಯಲ್ಲಿ ಹಾಸ್ಯಗಾರರ ಯಕ್ಷಗಾನ ಮೇಳದ ಭಾಗವತಿಕೆ ಹಾಡು, ಕುಣಿತ, ವೇಷಭೂಷಣಗಳು ಮಕ್ಕಳಾದ ನಮ್ಮ ಮೇಲೆ ತುಂಬ ಪ್ರಭಾವ ಬೀರಿತ್ತು. 

ಧಾರವಾಡದಲ್ಲಿ ಖ್ಯಾತ ಕವಿ ದ.ರಾ.ಬೇಂದ್ರೆ, ವಿ.ಜಿ.ಭಟ್ಟ, ಪಾಂಡೇಶ್ವರ ಗಣಪತ ರಾಯರು, ಶಾಲೆಯಲ್ಲಿ ಕನ್ನಡ ಟೀಚರ್‌ರಿಂದ ಕಾರಂತರ ಮತ್ತು ಹಲವರ ಕಾದಂಬರಿಗಳನ್ನು ಓದುವ ಹವ್ಯಾಸ, ನರಸಿಂಹಯ್ಯನವರ ಪತ್ತೇದಾರಿ ಕಾದಂಬರಿಗಳ ಹುಚ್ಚು, ಓಪನ್‌ ಥಿಯೇಟರ್‌ನಲ್ಲಿ ನಾಟಕಗಳನ್ನು ನೋಡುವ ಗೀಳು, ಮುಂಬಯಿಯಲ್ಲಿ ಸುನೀತಾ ಶೆಟ್ಟಿ, ಶ್ರೀನಿವಾಸ ಹಾವನೂರು, ಯಶವಂತ ಚಿತ್ತಾಲ, ವ್ಯಾಸರಾಯ ಬಲ್ಲಾಳರು ಮುಂತಾದ ಸಾಹಿತಿಗಳ ಒಡನಾಟ, ಬಂಗಾಲೀ ಅನುವಾದಕ ಅಹೋಬಲ ಶಂಕರರಿಂದ ಬರವಣಿಗೆಗೆ ಮಾರ್ಗದರ್ಶನ ಈ ಹಲವು ಬಾಲ್ಯದಲ್ಲಿ ಬರೆಯಲು ಪ್ರೇರಣೆ ನೀಡಿದ್ದವು.

ಪುತ್ತೂರಿನಲ್ಲಿ ಮಾವ ಎ.ಪಿ.ಸುಬ್ಬಯ್ಯ ಮತ್ತು ಪತಿ ಎ.ಪಿ. ಗೋವಿಂದ ಭಟ್ಟರ ಪ್ರೋತ್ಸಾಹ, ಜಿ.ಟಿ.ನಾರಾಯಣರಾಯ ಅವರ ಸಹಕಾರ, ಶಿವರಾಮ ಕಾರಂತರ, ಅನುಪಮಾ ನಿರಂಜನ ದಂಪತಿಗಳ ಆತ್ಮೀಯ ಸ್ನೇಹಾಚಾರ ನೆರವಾಗಿದೆ.

ಸರಕಾರಿ ಕನ್ನಡ ಶಾಲೆಗಳ ಕುರಿತು ನಿಮ್ಮ ಅಭಿಪ್ರಾಯ ?
ಇತ್ತೀಚಿನ ದಿನಗಳಲ್ಲಿ ಕನ್ನಡ ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ. ವಾಸ್ತವದಲ್ಲಿ ಕನ್ನಡ ಭಾಷಾಭಿಮಾನ ಕುಂಠಿತವಾಗುತ್ತಿದೆ. ಇಂಗ್ಲಿಷ್‌ ವ್ಯಾಮೋಹದಿಂದ ಹೆತ್ತವರು ತಮ್ಮ ಅಸ್ಮಿತೆಯನ್ನು ಮರೆತರೆ ಕನ್ನಡ ಲಿಪಿ ಅರಿಯದ ಮಕ್ಕಳು ಕನ್ನಡದ ಬಗೆಗೆ ಸಂಪೂರ್ಣ ಅಜ್ಞಾನಿಗಳು. ಗಡಿನಾಡಿನಲ್ಲಿ ವಾಸಿಸುವ ಕನ್ನಡಿಗರ ಮತ್ತು ಕನ್ನಡ ಭಾಷೆಯ ಸ್ಥಿತಿ ಶೋಚನೀಯ. ವರ್ಷವೂ ಎಲ್ಲ ಸಮ್ಮೇಳನದಲ್ಲಿ ಕನ್ನಡ ಭಾಷಾ ಉಳಿವಿಗಾಗಿ ಎಚ್ಚರಿಕೆಯ ಗಂಟೆ ಬಾರಿಸಿದರೂ ಇನ್ನೂ ಫಲಿತಾಂಶ ಸಿಕ್ಕಿಲ್ಲ.

ಹೆತ್ತವರಲ್ಲಿ ಸರಕಾರಿ ಕನ್ನಡ ಶಾಲೆಗಳ ಬಗ್ಗೆ ನಂಬಿಕೆ ಮೂಡಿಸುವುದು ಹೇಗೆ?
ಹಳ್ಳಿಯಲ್ಲೂ ಉತ್ತಮ ಶಿಕ್ಷಣ ದೊರೆಯುತ್ತದೆ ಎಂಬ ನಂಬಿಕೆ ಮೂಡಿಸಬೇಕು. ಪ್ರತಿಭಾವಂತ ಶಿಕ್ಷಕ, ಶಿಕ್ಷಕಿಯರನ್ನು ಅರ್ಹತೆಯ ಆಧಾರದಲ್ಲಿ ನೇಮಕ ಮಾಡಬೇಕು. ಶಾಲೆಯಲ್ಲಿ ಮೂಲಸೌಕರ್ಯ ವೃದ್ಧಿ, ಶಾಲೆಗೆ ಹೋಗಿ ಬರುವ ಹಳ್ಳಿ ರಸ್ತೆಯ ಅಭಿವೃದ್ಧಿ, ವಾಹನ ವ್ಯವಸ್ಥೆ ಇತ್ಯಾದಿ ಒದಗಿಸಿದರೆ ಕನ್ನಡ ಶಾಲೆ ಉಳಿವ ಸಾಧ್ಯತೆ ಇದೆ.

ಇಂಗ್ಲೀಷ್‌ ಶಿಕ್ಷಣ ಮಕ್ಕಳ ಸಾಹಿತ್ಯಾಸಕ್ತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆಯೇ?
ಕನ್ನಡ ಭಾಷೆಯನ್ನು ಪಠ್ಯದಲ್ಲಿ ಸೇರಿಸಿದರಷ್ಟೇ ಸಾಹಿತ್ಯಾಸಕ್ತಿಗೆ ಕಾರಣವಾಗದು. ಮನೆಯಲ್ಲಿ ಓದುವ ಸಂಸ್ಕೃತಿ ಇರಬೇಕು. ಮನೆಯ ಹಿರಿಯರು ದಿನ ಪತ್ರಿಕೆ, ವಾರ ಪತ್ರಿಕೆ, ಮಾಸ ಪತ್ರಿಕೆ, ಕಥೆ, ಕಾದಂಬರಿ – ಒಟ್ಟು ಸಾಹಿತ್ಯದ ಓದಿನಲ್ಲಿ ತೊಡಗಿದರೆ ಎಳೆಯ ಮಕ್ಕಳಲ್ಲಿ ಅದು ಗಾಢವಾದ ಪ್ರಭಾವ ಬೀರುತ್ತದೆ.

ಜಿಲ್ಲಾ ಸಮ್ಮೇಳನದ ಅಧ್ಯಕ್ಷತೆ ಮಹಿಳೆಗೆ ಸಿಕ್ಕ ಪ್ರಾಶಸ್ಯವೋ ಅಥವಾ ನಿಮ್ಮ ಸಾಹಿತ್ಯ ಕೃಷಿಗೆ ಸಿಕ್ಕಿದ ಸ್ಥಾನವೋ?
60 ವರ್ಷದ ಸುದೀರ್ಘ‌ ಜೀವನದಲ್ಲಿ ಸಾಹಿತ್ಯ ಕೃಷಿಯಲ್ಲಿದ್ದರೂ ಸಾಧನೆಯ ಬಗ್ಗೆ ಚಿಂತಿಸಲಿಲ್ಲ. ಪ್ರಶಸ್ತಿ ಪುರಸ್ಕಾರದ ಬೆನ್ನು ಹತ್ತಲಿಲ್ಲ. ಆದರೆ ಕಾಲಕಾಲಕ್ಕೆ ಸಾಧನೆಯ ನೆಲೆಯಲ್ಲಿ ಒಲಿದು ಬಂದ ಗೌರವವನ್ನು, ಜೀವಮಾನದ ಸಾಹಿತ್ಯ ಸಾಧನೆಗೆ ಬಂದ ಗೌರವವನ್ನೂ ವಿನೀತಳಾಗಿ ಒಪ್ಪಿಕೊಂಡಿದ್ದೇನೆ. ಜಿಲ್ಲಾ ಸಮ್ಮೇಳನಾಧ್ಯಕ್ಷ ಗೌರವ ಸ್ಥಾನ ದೊರೆತದ್ದು ನಾನು ಬಯಸದೇ ಬಂದ ಭಾಗ್ಯ.

ಸಾಹಿತ್ಯ ಕ್ಷೇತ್ರದಲ್ಲಿ ಮಹಿಳಾ ಬರಹಗಾರರ ಬಗ್ಗೆ ನಿಮ್ಮ ಅನಿಸಿಕೆ?
ಸೃಜನಶೀಲ ಕಥೆ ಕಾದಂಬರಿಗಿಂತ ಈಗಿನವರು ಕವನ, ಲಲಿತ ಪ್ರಬಂಧತ್ತ ಹೊರಳಿದ್ದಾರೆ ಎನ್ನಿಸುತ್ತದೆ. ಒಳ್ಳೆಯದೇ. ಆದರೆ ನಡೆಯಬೇಕಾದ ಹಾದಿ ದೂರವಿದೆ. ಸತತ ಬರವಣಿಗೆಯಿಂದಲೇ ಉತ್ತಮ ಕೃತಿಯ ಸಾಕ್ಷಾತ್ಕಾರ. ಇನ್ನೊಬ್ಬರ ರುಚಿ ನೋಡಿ ಬರೆಯುವುದಲ್ಲ. ನಮ್ಮ ರುಚಿ ಎತ್ತರಕ್ಕೆ ಓದುಗನನ್ನು ಕೊಂಡೊಯ್ಯಲು ಪ್ರಯತ್ನಿಸುವುದೇ ಲೇಖಕರ ಗುರಿಯಾಗಬೇಕು.

ಈಗ ಶುದ್ಧ ಸಾಹಿತ್ಯವಿಲ್ಲ ಎನ್ನುತ್ತಾರೆ. ನಿಮ್ಮ ಅಭಿಪ್ರಾಯ ಏನು?
ಶುದ್ಧ ಸಾಹಿತ್ಯವೆಂದರೇನು? ಅಪ್ಪಟ ಕನ್ನಡದಲ್ಲಿದ್ದರಷ್ಟೇ ಶುದ್ಧ ಸಾಹಿತ್ಯವೇ? ಅದಕ್ಕಿಂತ ಬೇರೆ ಹೆಚ್ಚಿನದ್ದೇನೋ ಇದೆ. ಬದುಕಿನ ಅರ್ಥವನ್ನು ಶೋಧಿಸಿ ನಮ್ಮ ಜೀವನಕ್ಕೆ ಹೊಸ ಹಾದಿ ತೋರುವ ಸಾಹಿತ್ಯ ನನಗೆ ಶುದ್ಧ ಸಾಹಿತ್ಯ ಅಂದೆನಿಸುತ್ತದೆ. ನಮ್ಮ ನೆಲೆದ ಸಂಸ್ಕೃತಿಯಲ್ಲಿ ಹುಟ್ಟುವ ಕೃತಿ, ಮಾತೃಭಾಷೆಯಲ್ಲಿ ಸಂವಹನ ಸರಿಯಾಗಿದ್ದರೆ ಸಾಹಿ ತ್ಯವೂ ಶುದ್ಧವಾಗಿರುತ್ತದೆ. ಸಮುದಾಯದ ಭಾಷೆಯನ್ನು ಸಾಹಿತ್ಯ ಕೃತಿಗಳಲ್ಲಿ ಹಿತಮಿತವಾಗಿ ಬಳಸಿದರೆ ಸಾಹಿತ್ಯದ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಇಂಗ್ಲಿಷನ್ನು ಹೆಚ್ಚು ಬಳಸಿದರೆ ಕಲಸುಮೇಲೋಗರವಾಗುತ್ತದೆ.

ಎ.ಪಿ.ಮಾಲತಿ ಅವರ ಬಗ್ಗೆ
20 ಕಾದಂಬರಿ, 8 ಇತರ ಕೃತಿಗಳು, 2 ಸಣ್ಣ ಕಥಾ ಸಂಕಲನ, 3 ಜೀವನ ಚರಿತ್ರೆ ಪುಸ್ತಕಗಳನ್ನು ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಆತ್ಮಕಥನ ಸ್ಮತಿಯಾನ ಬಿಡುಗಡೆಗೊಳ್ಳಲಿದೆ. ಹೊಸ ಕೃತಿಯೊಂದು ಪ್ರಕಟನೆಯ ಹಂತದಲ್ಲಿದೆ. ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕಥಾರಂಗ ಪ್ರಶಸ್ತಿ ಇತ್ಯಾದಿ ಸಂದಿವೆ. ಉತ್ತರಕನ್ನಡದ ಭಟ್ಕಳದಲ್ಲಿ ಜನಿಸಿದ ಅವರು ಪತಿ ಎ.ಪಿ. ಗೋವಿಂದ ಭಟ್ಟರೊಂದಿಗೆ ಆರ್ಯಾಪು ಗ್ರಾಮದ ಸಂಟ್ಯಾರಿನಲ್ಲಿ ವಾಸವಾಗಿದ್ದಾರೆ. ಪುತ್ರ ಡಾ| ಎ.ಪಿ. ರಾಧಾಕೃಷ್ಣ ಪುತ್ತೂರು ಫಿಲೋಮಿನಾ ಕಾಲೇಜಿನ ಭೌತಶಾಸ್ತ್ರ ಪ್ರಾಧ್ಯಾಪಕರಾಗಿದ್ದಾರೆ. ಪುತ್ರಿ ಲಲಿತಾ ಮೈಸೂರಿನಲ್ಲಿ ಉದ್ಯಮಿ ಆಗಿದ್ದಾರೆ.

ಕಿರಣ್‌ ಪ್ರಸಾದ್‌ ಕುಂಡಡ್ಕ 

ಟಾಪ್ ನ್ಯೂಸ್

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.