ಇಸ್ಲಾಮಿಯಾ ಮದ್ರಸ: ಪ್ರತಿಭೋತ್ಸವ
Team Udayavani, Apr 11, 2019, 6:02 AM IST
ಪಕ್ಕಲಡ್ಕ: ಇಸ್ಲಾ ಮಿಯಾ ಮದ್ರಸದ ವತಿಯಿಂದ ವಾರ್ಷಿಕ ಪ್ರತಿಭೋತ್ಸವ ಕಾರ್ಯಕ್ರಮ ನಡೆಯಿತು.
ಅನಿವಾಸಿ ಇಸ್ಲಾಮಿ ಚಿಂತಕ ಮಹಮ್ಮದ್ ಇಸಾಕ್ ದಮಾಮ್ ಮತ್ತು ಸ್ಟೂಡೆಂಟ್ ಇಸ್ಲಾಮಿಕ್ ಆರ್ಗ ನೈಸೇಶನ್ ಆಫ್ ಇಂಡಿಯಾದ ದ.ಕ. ಜಿಲ್ಲಾಧ್ಯಕ್ಷ ರಿಝ್ವಾನ್ ಅಝ್ಹರಿ ಮುಖ್ಯ ಅತಿಥಿಗ ಳಾಗಿದ್ದರು. ಅನಂತರ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಮದ್ರಸ ಸಂಚಾಲಕ ಅಬ್ದುಸ್ಸಲಾಂ ಪಕ್ಕಲಡ್ಕ, ಹ್ಯೂಮನ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಯೂಸಫ್ ಪಕ್ಕಲಡ್ಕ ಅನಿಸಿಕೆ ವ್ಯಕ್ತಪಡಿಸಿದರು. ಜಮಾತೆ ಇಸ್ಲಾಮಿ ಪಕ್ಕಲಡ್ಕದ ಸಂಚಾಲಕ ಮೊಹಮ್ಮದ್ ಸಮೀರ್, ಅಶೀರುದ್ದೀನ್ ಆಲಿಯಾ ಉಪಸ್ಥಿತರಿದ್ದರು.