ಫೆ.13: ಕುದ್ರೋಳಿಯಲ್ಲಿ ಪೂಜಾರಿ ವಿಶೇಷ ಪೂಜೆ
Team Udayavani, Feb 4, 2018, 10:02 AM IST
ಮಂಗಳೂರು: ಮಹಾ ಶಿವ ರಾತ್ರಿಯಂದು (ಫೆ. 13- ಮಂಗಳ ವಾರ) ಸಂಜೆ 5 ಗಂಟೆಗೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಬಿ. ಜನಾರ್ದನ ಪೂಜಾರಿ ನೇತೃತ್ವದಲ್ಲಿ ವಿಶೇಷ ಪೂಜೆ ಮತ್ತು ವಿವಿಧ ಕಾರ್ಯಕ್ರಮಗಳು ಜರಗಲಿವೆ.
ಅಂದು ಪೂಜಾರಿ ಅವರ ಆತ್ಮಕಥೆಯ 5,000 ಪ್ರತಿ ಮುದ್ರಣ ವಾಗಿ ಲಭಿಸಲಿವೆ. ಆಸಕ್ತರು ಪುಸ್ತಕ ಕೊಂಡುಕೊಳ್ಳಬಹುದು. ಪುಸ್ತಕದ ಬೆಲೆ 100 ರೂ. ನಿಗದಿಪಡಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.