ಮೂಲ ಸೌಕರ್ಯವಿಲ್ಲದೆ ಕಡಬ ಮೀನು ಮಾರುಕಟ್ಟೆ ಕ್ಷೀಣ
Team Udayavani, Nov 2, 2018, 10:34 AM IST
ಕಡಬ: ತಾಲೂಕು ಕೇಂದ್ರ ಕಡಬದಲ್ಲಿ ಸುಸಜ್ಜಿತ ಮೀನು ಮಾರುಕಟ್ಟೆ ಇಲ್ಲ. ಪ್ರಸ್ತುತ ಇರುವ ಹಸಿ ಮೀನು ಮಾರುಕಟ್ಟೆಯಲ್ಲಿ ಮೂಲ ಸೌಕರ್ಯಗಳಿಲ್ಲದೇ ಮೀನು ವ್ಯಾಪಾರ ನಡೆಯುತ್ತಿಲ್ಲ. ಆದರೆ ಹರಾಜಿನಲ್ಲಿ ಮೀನು ಮಾರಾಟದ ಹಕ್ಕು ಪಡೆದು ಪಂಚಾಯತ್ಗೆ 8 ಲಕ್ಷ ರೂ. ಪಾವತಿಸಿದರೂ ಟೆಂಡರ್ ಪಡೆದವರು ರಸ್ತೆಯ ಬದಿಯಲ್ಲೇ ಮೀನು ಮಾರಬೇಕಾದ ಅನಿವಾರ್ಯತೆ ಎದುರಾಗಿದೆ.
ಪ್ರಸ್ತುತ ಸಂತಕಟ್ಟೆಯ ಒಳಗೆ ಇರುವ ಮೀನು ಮಾರುಕಟ್ಟೆಯಲ್ಲಿ ಯಾವುದೇ ಮೂಲ ಸೌಕರ್ಯಗಳಿಲ್ಲ. ಮಾರುಕಟ್ಟೆಯಿಂದ ತ್ಯಾಜ್ಯ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆಗಳಿಲ್ಲ. ತ್ಯಾಜ್ಯ ನೀರು ಸಂಗ್ರಹವಾಗಲು ನಿರ್ಮಿಸಲಾಗಿದ್ದ ಸಣ್ಣ ಗುಂಡಿಯಲ್ಲಿ ನೀರು ತುಂಬಿ ಹರಿಯುತ್ತಿದ್ದು, ದುರ್ವಾಸನೆ ಬೀರಲು ಆರಂಭವಾದ ಕಾರಣದಿಂದಾಗಿ ಕಳೆದ ವರ್ಷ ಮೀನು ಮಾರಾಟಗಾರರು ಮಾರುಕಟ್ಟೆಯಲ್ಲಿ ಮೀನು ಮಾರಲು ಸಾಧ್ಯವಿಲ್ಲ ಎಂದು ಪಂಚಾಯತ್ಗೆ ದೂರು ನೀಡಿದ್ದರು.
ಅನಂತರ ರಸ್ತೆಯ ಬದಿಯಲ್ಲಿ ತಾತ್ಕಾಲಿಕ ನೆಲೆಯಲ್ಲಿ ಮೀನು ಮಾರಲು ಪಂಚಾಯತ್ ಅವಕಾಶ ನೀಡಿತ್ತು. ಆದರೆ ವರ್ಷ ಕಳೆದು ಹೊಸ ಹರಾಜು ಪ್ರಕ್ರಿಯೆ ನಡೆದರೂ ಮೀನು ಮಾರುಕಟ್ಟೆಯ ಸಮಸ್ಯೆ ಮಾತ್ರ ಬಗೆಹರಿದಿಲ್ಲ. ಮೀನು ಮಾರಾಟದ ಹಕ್ಕಿಗಾಗಿ ನಡೆಯುವ ಹರಾಜಿನಲ್ಲಿ ಪಂಚಾಯತ್ಗೆ ಲಕ್ಷಾಂತರ ರೂ. ಆದಾಯ ಇದೆ. ಆದರೂ ಸುಸಜ್ಜಿತ ಮೀನು ಮಾರುಕಟ್ಟೆ ನಿರ್ಮಾಣಕ್ಕೆ ಮುಂದಾಗದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸ್ವಚ್ಛ ಗ್ರಾಮ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ಕಡಬ ಗ್ರಾ.ಪಂ. ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸುವ ಅಗತ್ಯವಿದೆ.
ಪಂಚಾಯತ್ಗೆ ಹೆಚ್ಚಿನ ಆದಾಯ
ಈ ಬಾರಿ 1 ವರ್ಷದ ಅವಧಿಗೆ ಕಡಬ ಪೇಟೆಯಲ್ಲಿ ಹಸಿಮೀನು ಮಾರಾಟದ ಹಕ್ಕಿಗಾಗಿ ನಡೆದ ಹರಾಜಿನಲ್ಲಿ ಪಂಚಾಯತ್ ಗೆ 8,01,600 ರೂ. ಆದಾಯ ಬಂದಿದೆ. ಕಡಬದ ಸಂತೆ ಮಾರು ಕಟ್ಟೆಯ ಬಳಿಯ ಹಸಿಮೀನು ಮಾರಾಟದ ಜಾಗದ ಹಕ್ಕು ಉಪ್ಪಿನಂಗಡಿಯ ಯು.ಕೆ. ಯೂಸುಫ್ ಅವರಿಗೆ 4.01 ಲಕ್ಷ ರೂ.ಗೆ (ಕಳೆದ ಬಾರಿ 8.10 ಲಕ್ಷ ರೂ.) ಹಾಗೂ ಕಡಬದ ರೈತ ಸಂಪರ್ಕ ಕೇಂದ್ರದ ಬಳಿಯ ಜಾಗದ ಹಕ್ಕು ಉಪ್ಪಿನಂಗಡಿಯ ಮುಸ್ತಾಫ ಕೆಂಪಿ ಅವರಿಗೆ 4,00,600 ರೂ.ಗಳಿಗೆ (ಕಳೆದ ಬಾರಿ 6.21 ಲಕ್ಷ ರೂ.) ಸಿಕ್ಕಿದೆ. ಕಳೆದ ಬಾರಿ ಮೀನು ವ್ಯಾಪಾರಿಗಳ ಪೈಪೋಟಿಯಿಂದಾಗಿ ಮೇಲಿನ ಎರಡೂ ಸ್ಟಾಲ್ಗಳು ಒಟ್ಟು 14.31 ಲಕ್ಷ ರೂ. ಗೆ ಹರಾಜಾಗಿತ್ತು.
ಪ್ರತ್ಯೇಕ ಜಾಗಕ್ಕೆ ಪ್ರಯತ್ನ
ಕಡಬ ಪೇಟೆಯಲ್ಲಿ ಹೊಸದಾಗಿ ಸುಸಜ್ಜಿತ ಮೀನು ಮಾರುಕಟ್ಟೆ ನಿರ್ಮಿಸಲು ಪೇಟೆಯ ಹತ್ತಿರದಲ್ಲಿ ಪ್ರತ್ಯೇಕ ಜಾಗಕ್ಕೆ ಪ್ರಯತ್ನಿಸಲಾಗುತ್ತಿದೆ. ಸರಕಾರಿ ಜಾಗವನ್ನು ಪಂಚಾಯತ್ನ ವಶಕ್ಕೆ ಪಡೆದು ಮೀನು ಮಾರುಕಟ್ಟೆ ನಿರ್ಮಿಸಲು ಕೊಂಚ ಕಾಲಾವಕಾಶದ ಅಗತ್ಯವಿದೆ. ಸಂತೆಕಟ್ಟೆಯ ಬಳಿ ಈಗ ಇರುವ ಮೀನು ಮಾರುಕಟ್ಟೆ ಹಾಗೂ ಹಳೆಯ ವಾಣಿಜ್ಯ ಕಟ್ಟಡಗಳನ್ನು ಕೆಡವಿ ಹೊಸದಾಗಿ ವಾಣಿಜ್ಯ ಕಟ್ಟಡ ನಿರ್ಮಿಸಲು ಉದ್ದೇಶಿಸಲಾಗಿದೆ.
– ಚೆನ್ನಪ್ಪ ಗೌಡ ಕಜೆಮೂಲೆ, ಕಡಬ ಪಿಡಿಒ
ನಾಗರಾಜ್ ಎನ್.ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Book Brahma ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು
Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ
ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ
Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ
ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್ಆ್ಯಪ್ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ