ಕಲ್ಲಡ್ಕ ಶ್ರೀರಾಮ ಕಾಲೇಜು: ಗುರುಪೂಜೆ
Team Udayavani, Jul 23, 2017, 7:45 AM IST
ಬಂಟ್ವಾಳ : ವ್ಯಕ್ತಿಯ ಮಾನಸಿಕ, ದೆ„ಹಿಕ ಮತ್ತು ಶಾರೀರಿಕ ಬೆಳವಣಿಗೆಗೆ ಶಾಖೆಯು ಮೂಲಸ್ಥಾನವಾಗಿದೆ. ಶಾಖೆಯ ಮೂಲಕ ಒಂದು ಸಂಘಟನೆ ಗಟ್ಟಿಯಾಗುವುದಲ್ಲದೆ ನಮ್ಮ ಜೀವನದಲ್ಲಿ ಸಾಮರಸ್ಯ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ರಾಷ್ಟ್ರ ಸೇವಿಕಾ ಸಮಿತಿ ಮಂಗಳೂರು ವಿಭಾಗದ ಸಹಕಾರ್ಯವಾಹಿಕ ಕಲ್ಪನಾ ಭಟ್ ಹೇಳಿದರು.
ಅವರು ಜು. 22ರಂದು ಕಲ್ಲಡ್ಕ ಶ್ರೀರಾಮ ಕಾಲೇಜಿನಲ್ಲಿ ನಡೆದ ಗುರುಪೂಜಾ ಉತ್ಸವದಲ್ಲಿ ಪಾಲ್ಗೊಂಡು ಬೌದ್ಧಿಕ್ ನೀಡಿದರು.
ವೇದಿಕೆಯಲ್ಲಿ ರಾಷ್ಟ್ರ ಸೇವಿಕಾ ಸಮಿತಿ ಹೊಯ್ಸಳ ಪ್ರಾಂತದ ಸಹಸಂಚಾಲಿಕ ಡಾ| ಕಮಲಾ ಪ್ರಭಾಕರ್ ಭಟ್, ಮುಖ್ಯ ಶಿಕ್ಷಕಿ ತೇಜಸ್ವಿನಿ ಬಿ.ವಿ. ಹಾಗೂ 900 ಮಂದಿ ಸೇವಿಕೆಯರು ಉಪಸ್ಥಿತರಿದ್ದರು. ವಿನುತಾಲಕ್ಷ್ಮೀ ಸ್ವಾಗತಿಸಿ,ಶೋಭಾ ವಿ. ಶೆಟ್ಟಿ ವಂದಿಸಿದರು.