ಕಾಣಿಯೂರು-ಕಾಞಂಗಾಡ್ ರೈಲ್ವೇ ಮಾರ್ಗಕ್ಕೆ ಶಾಶ್ವತ ಹಿನ್ನಡೆ
Team Udayavani, Sep 19, 2022, 6:10 AM IST
ಸುಳ್ಯ: ಕಾಞಂಗಾಡ್ – ಕಾಣಿಯೂರು ರೈಲ್ವೇ ಮಾರ್ಗ ಪ್ರಸ್ತಾವವನ್ನು ಈ ಹಿಂದೆ ರೈಲ್ವೇ ಇಲಾಖೆಯೂ ತಿರಸ್ಕರಿಸಿದ್ದು, ಎರಡೂ ರಾಜ್ಯಗಳು ಒಪ್ಪಿಗೆ ನೀಡಿದರೆ ಪರಿಶೀಲನೆ ನಡೆಸಬಹುದು ಎಂದಿತ್ತು. ಈಗ ರಾಜ್ಯ ಸರಕಾರ ಇದನ್ನು ತಿರಸ್ಕರಿಸಿದೆ.
ಕೇರಳ ಮತ್ತು ಕರ್ನಾಟಕ ಹಾಗೂ ಪುಣ್ಯಕ್ಷೇತ್ರಗಳನ್ನು ಸಂಪರ್ಕಿಸುವ ದೃಷ್ಟಿಯಿಂದ ಅನೇಕ ವರ್ಷಗಳ ಹಿಂದೆಯೇ ಈ ಪ್ರಸ್ತಾವ ಚಾಲನೆಗೆ ಬಂದಿತ್ತು.
ಸರ್ವೇ ನಡೆಸಲು ಬಜೆಟ್ನಲ್ಲಿ ಹಣವನ್ನೂ ಮೀಸಲಿರಿಸಲಾಗಿತ್ತು. ರೈಲ್ವೇ ಮಾರ್ಗದ ಅನುಷ್ಠಾನಕ್ಕೆ ಕೇರಳ ಸರಕಾರ ಹೆಚ್ಚಿನ ಉತ್ಸುಕತೆ ತೋರಿತ್ತಲ್ಲದೆ ಕೇರಳದ ಪಾಣತ್ತೂರಿನವರೆಗೆ ಸರ್ವೇ ಪೂರ್ತಿಗೊಳಿಸಿತ್ತು.
ಈ ಯೋಜನೆ ನನೆಗುದಿಗೆ ಬೀಳುವ ಹಂತದಲ್ಲಿದ್ದಾಗ ಸುಳ್ಯ ಭಾಗದ ಕೆಲವು ಮುಖಂಡರು ಕ್ರಿಯಾಸಮಿತಿ ರಚಿಸಿ ಕಾಞಂಗಾಡ್ ಭಾಗದ ಜನಪ್ರತಿನಿಧಿಗಳೊಂದಿಗೆ ಕೇಂದ್ರ – ರಾಜ್ಯ ಸಚಿವರನ್ನು ಭೇಟಿ ಮಾಡಿದ್ದರು. ಆಗ ಭರವಸೆಗಳು ದೊರೆತಿದ್ದವು. ಆದರೆ ರಾಜ್ಯ ಸರಕಾರ ತಿರಸ್ಕರಿಸುವುದರೊಂದಿಗೆ ಯೋಜನೆ ಶಾಶ್ವತವಾಗಿ ಬದಿಗೆ ಸರಿಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ