ಶ್ರೀ ಕೃಷ್ಣ ಜನ್ಮಾಷ್ಟಮಿಗೆ ನಗರಾದ್ಯಂತ ಭರದ ಸಿದ್ಧತೆ
Team Udayavani, Aug 14, 2017, 6:45 AM IST
ಮಹಾನಗರ: ಶ್ರೀ ಕೃಷ್ಣ ಜನ್ಮಾಷ್ಟಮಿಗೆ ಜಿಲ್ಲೆಯ ಜನತೆ ಸಿದ್ಧರಾಗುತ್ತಿದ್ದಾರೆ. ಮಾರುಕಟ್ಟೆಗಳಲ್ಲಿ ಹೂ, ಹಣ್ಣು, ತರಕಾರಿ, ಮೂಡೆ ಎಲೆ ಖರೀದಿ ಭರಾಟೆಯೂ ಜೋರಾಗಿದೆ.ವಸ್ತುಗಳ ಬೆಲೆ ತುಸು ಏರಿಕೆಯಾಗಿದ್ದರೂ ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಜನಸಂದಣಿ ಹೆಚ್ಚಿದೆ.
ಅಷ್ಟಮಿ ಹಿನ್ನೆಲೆಯಲ್ಲಿ ತರಕಾರಿಯ ಬೆಲೆಯೂ ತುಸು ಹೆಚ್ಚಾಗಿದೆ. ಹಬ್ಬಕ್ಕೆ ಎಲ್ಲ ಮನೆಗಳಲ್ಲೂ ಪಾಯಸ ಮಾಡುವುದು ಸಾಮಾನ್ಯವಾಗಿರುವುದರಿಂದ ಬೆಲ್ಲ, ಬೇಳೆಗೂ ಬೇಡಿಕೆ ಕುದುರಿದೆ. ನಗರದ ಮುಖ್ಯರಸ್ತೆಗಳ ಬದಿಯಲ್ಲಿ ಹೂ, ಹಣ್ಣುಗಳ ಮಾರಾಟ ಜೋರಾಗಿ ನಡೆಯುತ್ತಿದೆ.ನಗರದ ಕೆಲವು ಸಂಘ ಸಂಸ್ಥೆಗಳು ಅಷ್ಟಮಿ ಪ್ರಯುಕ್ತ ಕೃಷ್ಣ ವೇಷ ಸಹಿತ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ.