ಕುತ್ಲೂರು: ಪೊಲೀಸರಿಂದ ನಕ್ಸಲ್ ಶಿವಕುಮಾರ್ ವಿಚಾರಣೆ
Team Udayavani, Apr 6, 2017, 2:26 PM IST
ಬೆಳ್ತಂಗಡಿ: ಕುತ್ಲೂರಿನಲ್ಲಿ 4 ವರ್ಷಧಿಗಳ ಹಿಂದೆ ನಡೆದ ಘಟನೆಗೆ ಸಂಬಂಧಿಸಿ ಪೊಲೀಸ್ ಕಸ್ಟಡಿಯಲ್ಲಿರುವ ನಕ್ಸಲ್ ನಾಯಕ ಶಿವಕುಮಾರ್ನನ್ನು ಬುಧವಾರ ಕುತ್ಲೂರಿಗೆ ಕರೆದೊಯ್ಯಲಾಯಿತು.
ನಕ್ಸಲ್ ರಾಜ್ಯ ನಾಯಕ ರಮೇಶ್ ಯಾನೆ ಸಮೀರ್ ಯಾನೆ ರಫಿ ಯಾನೆ ಮಾಧವ ಯಾನೆ ಶಿವಕುಮಾರ್ ಬಿ.ಎಸ್. (52)ನನ್ನು ಕುತ್ಲೂರು ರಾಮಚಂದ್ರ ಭಟ್ಟರ ಮನೆಗೆ ಕರೆದೊಯ್ಯಲಾಯಿತು. 2013ರಲ್ಲಿ ನಾರಾವಿ ಸಮೀಪದ ಕುತ್ಲೂರಿನಲ್ಲಿ ಬೈಕ್ ಹಾಗೂ ಆಮ್ನಿಗೆ ಬೆಂಕಿ ಹಚ್ಚಿದ ಪ್ರಕರಣದ ಹೆಚ್ಚಿನ ವಿಚಾರಣೆ ನಡೆಲಾಗುತ್ತಿದೆ. ಪೊಲೀಸ್ ವಾಹನದಿಂದ ಕೆಳಗಿಳಿಯಲು ಒಲ್ಲದ ಶಿವಕುಮಾರನನ್ನು ಪೊಲೀಸರು ತನಿಖೆಗಾಗಿ ಇಳಿಯುವಂತೆ ಸೂಚಿಸಿದರು. ಅನಂತರ ವಿಚಾರಣೆ ವೇಳೆ ಕೂಡ ತಾನು ಈ ಕೃತ್ಯದಲ್ಲಿ ನೇರ ಭಾಗಿಯಲ್ಲ, ತಮ್ಮ ಸಂಘಟನೆಯ ಬೇರೆ ಸದಸ್ಯರ ಕೃತ್ಯ ಆಗಿರಬಹುದು ಎಂದು ಹೇಳಿಕೆ ಕೊಟ್ಟ.
ಬೆಂಗಳೂರು ಕೋರಮಂಗಲ ಕ್ರೀಡಾಗ್ರಾಮದ ಕೃಷ್ಣ ನಗರ ಸ್ಲಂ ಏರಿಯಾ ನಿವಾಸಿ, ಸಿಪಿಐ ಮಾವೋವಾದಿಯ ರಾಜ್ಯ ಸಮಿತಿ ಸದಸ್ಯ ಶಿವಕುಮಾರ್ ನಕ್ಸಲ್ಪಾತಕ ಕಾರ್ಯಗಳಲ್ಲಿ ಪರಿಪೂರ್ಣವಾಗಿ ತೊಡಗಿಸಿಕೊಂಡು ಹೆಬ್ರಿಯ ಸೀತಾನದಿಯ ಭೋಜಶೆಟ್ಟಿ ಕೊಲೆ ಪ್ರಕರಣ, ಪೊಲೀಸ್ ಮಾಹಿತಿದಾರ ಕೇಶವ ಯಡಿಯಾಲ್ ಕೊಲೆ ಪ್ರಕರಣ, ಸದಾಶಿವ ಗೌಡ ಕೊಲೆ ಪ್ರಕರಣದ ಪ್ರಮುಖ ಆರೋಪಿ. ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ಕೊಲ್ಲಿಯಲ್ಲಿ ನಡೆದ ನಾಲ್ಕು ರಾಜ್ಯಧಿಗಳ ನಕ್ಸಲರು ಭಾಗವಹಿಸಿದ್ದ ಸಭೆಯಲ್ಲಿ ಶಿವಧಿಕುಮಾರ್ ಭಾಗಿಯಾಗಿದ್ದ. ಈ ಸಂದರ್ಭ ನಕ್ಸಲ್ ಕಾರ್ಯಚಟುವಟಿಕೆಯನ್ನು ಮಲೆನಾಡಿನಿಂದ ಕೇರಳಕ್ಕೆ ಸ್ಥಳಾಂತರಿಸಲು ನಿರ್ಣಯವಾಗಿತ್ತು. ಆಗಲೇ ಪೊಲೀಸ್ ದಾಳಿಯಾಗಿತ್ತು. ಅನಂತರ ಫಾರೆಸ್ಟ್ ತನಿಖಾ ಠಾಣೆ ಸೇರಿದಂತೆ ಅನೇಕ ದಾಳಿಗಳಲ್ಲಿ ಶಿವಕುಮಾರ್ ಭಾಗಿಯಾಗಿದ್ದ.
2016ರ ಸೆ. 11ರಂದು ಬೆಂಗಳೂರಿನಲ್ಲಿ ಆಂಧ್ರ ಪೊಲೀಸರಿಂದ ಬಂಧಿತನಾಗಿ ಕರ್ನಾಟಕ ಪೊಲೀಸರಿಗೆ ಹಸ್ತಾಂತರಿಸಲ್ಪಟ್ಟಿದ್ದ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
MUST WATCH
ಹೊಸ ಸೇರ್ಪಡೆ
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ