ಕುವೈಟ್ನಲ್ಲಿ ಸಂಕಷ್ಟದಲ್ಲಿರುವ ಯುವಕರು ಶೀಘ್ರ ತಾಯ್ನಾಡಿಗೆ?
Team Udayavani, May 31, 2019, 6:10 AM IST
ಮಂಗಳೂರು: ಕುವೈಟ್ನಲ್ಲಿ ಉದ್ಯೋಗ ಲಭಿಸದೆ ಸಂಕಷ್ಟದಲ್ಲಿರುವ ಕರ್ನಾಟಕ ಮತ್ತು ಇತರ ರಾಜ್ಯಗಳ 75 ಮಂದಿ ಯುವಕರ ಕೆಲಸದ ಪರವಾನಿಗೆಗೆ ಸಂಬಂಧಿಸಿದಂತೆ ವಂಚಿಸಿರುವ ಕಂಪೆನಿಯ ಕಚೇರಿಯಲ್ಲಿ ಕುವೈಟ್ನ ಕಾರ್ಮಿಕ ಹಿತರಕ್ಷಣ ಸಂಸ್ಥೆ (ಶೋನ್) ಗುರುವಾರ ವಿಚಾರಣೆ ನಡೆಸಿದ್ದು, ಪ್ರಕರಣ ಬಹುತೇಕ ಸುಖಾಂತ್ಯದ ಹಂತದಲ್ಲಿದೆ. ಯುವಕರು ಶೀಘ್ರ ತಾಯ್ನಾಡಿಗೆ ವಾಪಸಾಗುವ ಸಾಧ್ಯತೆಯಿದೆ.
4 ಗಂಟೆಗಳ ಸುದೀರ್ಘ ವಿಚಾರಣೆಯಲ್ಲಿ ಸಂತ್ರಸ್ತರು, ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು, ವಂಚನೆ ಮಾಡಿರುವ ಕಂಪೆನಿ ಪ್ರತಿನಿಧಿಗಳು ಮತ್ತು ಪಬ್ಲಿಕ್ ಅಥಾರಿಟಿ ಮ್ಯಾನ್ ಪವರ್ ಸದಸ್ಯರು ಭಾಗಿಯಾಗಿದ್ದರು.
ರವಿವಾರ ಸಭೆ
ಸಂತ್ರಸ್ತರ ವೀಸಾ ರದ್ದತಿಗೆ ಸಂಬಂಧಿಸಿ ರವಿವಾರ ಶೋನ್ ಸಭೆ ಕರೆದಿದೆ. ಸಂತ್ರಸ್ತರಿಂದ ಮತ್ತು ವಂಚಿಸಿದ ಕಂಪೆನಿಯಿಂದ ಶೋನ್ನಲ್ಲಿ ಪರಸ್ಪರ ದೂರು ದಾಖಲಾಗಿದೆ. ಈ ಬಗ್ಗೆ ವಿಚಾರಣೆ ನಡೆಯಲಿದ್ದು, ಬಳಿಕ ಯುವಕರ ವೀಸಾ ರದ್ದತಿ ಸಂಬಂಧ ಚರ್ಚೆಯಾಗಲಿದೆ. ವೀಸಾ ರದ್ದುಗೊಂಡರೆ ಕೂಡಲೇ ತಾಯ್ನಾಡಿಗೆ ಬರುವ ನಿರೀಕ್ಷೆಯಿದೆ.
ಕೆಲವು ಯುವಕರಿಗೆ ಏಜೆನ್ಸಿಯು ಆಹಾರ ಸರಬರಾಜು ಕಂಪೆನಿಯಲ್ಲಿ ಕೆಲಸ ಕೊಟ್ಟಿದ್ದರಿಂದ ಅಂಥವರಿಗೆ ಈಗಾಗಲೇ ದ್ವಿಚಕ್ರ ವಾಹನ ನೀಡಲಾಗಿದೆ.
ರವಿವಾರದ ಒಳಗೆ ಅವುಗಳನ್ನು ಹಿಂದಿರುಗಿಸುವಂತೆ ಸೂಚಿಸಲಾಗಿದೆ. ಯುವಕರು ಪುನಃ ಕೆಲಸ ಮಾಡುವುದಾದರೆ ಸಮರ್ಪಕವಾಗಿ ಸಂಬಳ ನೀಡುತ್ತೇವೆ ಎಂದು ಸಂಸ್ಥೆಯು ಭರವಸೆ ನೀಡಿದೆಯಾದರೂ ಯುವಕರು ಆಸಕ್ತಿ ತೋರಲಿಲ್ಲ.
“ಜೂ. 2ರಂದು ಕುವೈಟ್ನ ಕಾರ್ಮಿಕ ಹಿತರಕ್ಷಣಾ ಸಂಸ್ಥೆ ನಡೆಸುವ ಸಭೆಯಲ್ಲಿ 75 ಯುವಕರ ವೀಸಾ ರದ್ದುಗೊಳಿಸಿದರೆ, ಕೆಲವು ದಿನಗಳಲ್ಲಿ ಯುವಕರು ತಾಯ್ನಾಡಿಗೆ ಮರಳಬಹುದು. ಈ ವೇಳೆ ಯುವಕರಿಗೆ ಭಾರತಕ್ಕೆ ಮರಳಲು ವಿಮಾನ ಟಿಕೆಟ್ ವ್ಯವಸ್ಥೆಯನ್ನು ವಂಚಿಸಿದ ಸಂಸ್ಥೆ ಮಾಡಬೇಕು. ಒಂದು ವೇಳೆ ಟಿಕೆಟ್ ವ್ಯವಸ್ಥೆ ಮಾಡದಿದ್ದರೆ, ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಈ ನಿಟ್ಟಿನಲ್ಲಿ ಕ್ರಮಕ್ಕೆ ಮುಂದಾಗಬೇಕು’ ಎಂದು ಕುವೈಟ್ನಲ್ಲಿರುವ ಅನಿವಾಸಿ ಕನ್ನಡಿಗರೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
MUST WATCH
ಹೊಸ ಸೇರ್ಪಡೆ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ