ಬೇಸಗೆ ಬರುತ್ತಿದೆ, ಗಿಡಗಳಿಗೆ ಬೆಂಕಿ ಹಚ್ಚದಿರಿ: ಹುಲ್ಲು ತೆರವಿನ ಹೆಸರಲ್ಲಿ ಕಡ್ಡಿ ಗೀರಬೇಡಿ


Team Udayavani, Jan 6, 2023, 6:20 AM IST

ಬೇಸಗೆ ಬರುತ್ತಿದೆ, ಗಿಡಗಳಿಗೆ ಬೆಂಕಿ ಹಚ್ಚದಿರಿ: ಹುಲ್ಲು ತೆರವಿನ ಹೆಸರಲ್ಲಿ ಕಡ್ಡಿ ಗೀರಬೇಡಿ

ಮಹಾನಗರ: ಮಳೆಗಾಲ ಮುಗಿದಿದೆ, ಎಲ್ಲ ಕಡೆಗಳಲ್ಲಿ ಚಿಗುರಿದ್ದ ಹುಲ್ಲು ಒಣಗುವ ಸಮಯ. ಪರಿಸರ ಸ್ವತ್ಛಗೊಳಿಸುವ ನೆಪದಲ್ಲಿ ಕೆಲವರು ಒಣಗಿದ ಹುಲ್ಲಿಗೆ ಬೆಂಕಿ ಹಾಕುವ ಅಭ್ಯಾಸ ಹೊಂದಿದ್ದಾರೆ, ಇದು ನಗರದಲ್ಲಿ ಅಳಿದುಳಿದ ಮರಗಿಡಗಳಿಗೂ ಮಾರಕವಾಗಿ ಪರಿಣಮಿಸುತ್ತಿದೆ.

ನಗರದ ಹಲವು ಭಾಗಗಳಲ್ಲಿ ರಸ್ತೆ ಇಕ್ಕೆಲಗಳಲ್ಲಿ, ಕೆಲವೊಂದು ಖಾಲಿ ಇರುವ ಸರಕಾರಿ ಜಾಗಗಳಲ್ಲಿ ಅನೇಕ ವರ್ಷಗಳಿಂದ ಗಿಡ ನೆಡಲಾಗುತ್ತಿದೆ. ಹೆದ್ದಾರಿ ಇಕ್ಕೆಲಗಳಲ್ಲಿ ಪ್ರತಿವರ್ಷ ನೆಟ್ಟ ಗಿಡಗಳಲ್ಲಿ ಶೇ.30ರಷ್ಟು ಈ ರೀತಿ ಬೆಂಕಿಗಾಹುತಿಯಾಗುತ್ತದೆ. ಪ್ರತಿ ಮಳೆಗಾಲದಲ್ಲಿ ಹೊಸ ಗಿಡ ನೆಡಬೇಕಾಗುತ್ತದೆ.

ನಗರದ ಹೊರವಲಯದ ಕುಲಶೇಖರ, ವಾಮಂ ಜೂರು, ಬೊಂದೇಲ್‌, ಕಾವೂರು ಮುಂತಾದ ಕಡೆ ಇನ್ನೂ ಕಾಡಿನ ಭಾಗಗಳು ಅಲ್ಪಸ್ವಲ್ಪ ಉಳಿದುಕೊಂಡಿದ್ದು, ನಗರಕ್ಕೆ ಶು ದ್ಧ ಉಸಿರಾಟದ ಗಾಳಿ ಪೂರೈಸುವ ಮೂಲಕ ಸಹಕಾರಿ. ಆದರೆ ಅಂತಹ ಕಾಡಿನ ಭಾಗದಲ್ಲೂ ಕಿಡಿಗೇಡಿಗಳ ಕೃತ್ಯದಿಂದಾಗಿ ಅಮೂಲ್ಯ ಹಸಿರು ನಶಿಸುತ್ತಿದೆ. ಇದಕ್ಕೆ ಉದಾಹರಣೆಯಾಗಿ ಕೆಲ ದಿನ ಹಿಂದೆ ಬೊಂದೇಲ್‌ ಬಳಿಯ ಮಂಜಲ್ಪಾದೆಯಲ್ಲಿ ಯಾರೋ ಮಾಡಿದ ಕುಕೃತ್ಯದಿಂದ ಸುಮಾರು ಅರ್ಧ ಕಿ.ಮೀ.ನಷ್ಟು ಉದ್ದಕ್ಕೆ ಮರಗಳು ಸುಟ್ಟು ಹೋಗಿವೆ. ಅದೃಷ್ಟವಶಾತ್‌ ಅದನ್ನು ನೋಡಿದ ರಾಷ್ಟ್ರೀಯ ಪರಿಸರ ಸಂರಕ್ಷಣ ಒಕ್ಕೂಟ (ಎನ್‌ಇಸಿಎಫ್‌) ಸದಸ್ಯರು ತತ್‌ಕ್ಷಣವೇ ಕದ್ರಿ ಹಾಗೂ ನವಮಂಗಳೂರು ಬಂದರಿನ ಅಗ್ನಿಶಾಮಕ ಎಂಜಿನ್‌ ತರಿಸಿ ಬೆಂಕಿ ಆರಿಸುವಲ್ಲಿ ಶ್ರಮಿಸಿದ್ದಾರೆ.

ಅಗ್ನಿಶಾಮಕ ದಳ ಬರುವುದಕ್ಕೆ ಮೊದಲೇ ಎನ್‌ಇಸಿಎಫ್‌ ಕಾರ್ಯಕರ್ತರು ಬಕೆಟ್‌ ಹಾಗೂ ಸಿಕ್ಕಿದ ಪಾತ್ರೆಗಳನ್ನು ಬಳಸಿಕೊಂಡು ಬೆಂಕಿಯ ತೀವ್ರತೆ ಕಡಿಮೆ ಮಾಡಲು, ಅದು ಹರಡದಂತೆ ನೀರು ಹಾಕಿ ಯೋಜನೆ ಹೂಡಿದ್ದರು. ಆದರೂ ಒಂದಷ್ಟು ಮರಗಳು ಕರಟಿವೆ.

ನಗರದ ವ್ಯಾಪ್ತಿಯಲ್ಲಿರುವ ಹಲವು ಶ್ಮಶಾನಗಳಲ್ಲಿ ಗಿಡ ಗಳನ್ನು ಪರಿಸರ ಪ್ರೇಮಿ ಜೀತ್‌ ಮಿಲನ್‌ ಅವರು ನೆಟ್ಟು ಬೆಳೆಸಿದ್ದರೆ, ನಗರದ ರಸ್ತೆ ಪಕ್ಕ ಎನ್‌ಇಸಿಎಫ್‌, ಮಾಧವ ಉಳ್ಳಾಲ ಮತ್ತಿತರರು ಗಿಡ ನೆಟ್ಟು ಬೆಳೆಸುತ್ತಿದ್ದಾರೆ. ನಂದಿ ಗುಡ್ಡೆಯಂತಹ ಹಿಂದು ರುದ್ರಭೂಮಿಗಳಲ್ಲು ಹಸುರು ಚಿಗಿತುಕೊಂಡಿದೆ, ಆದರೆ ಇಲ್ಲೂ ಬೇಸಗೆಯಲ್ಲಿ ಬೆಂಕಿ ಹಾಕಿ ಗಿಡಗಳನ್ನು ಕೊಲ್ಲುವ ಕಿಡಿಗೇಡಿಗಳಿದ್ದಾರೆ.

ಅನುಸರಿಸಬೇಕಾದ ಕ್ರಮಗಳು
ಯಾವುದೇ ಪ್ರದೇಶದಲ್ಲಿ ಒಣಹುಲ್ಲು ಇದ್ದರೆ ಅದನ್ನು ಕಾರ್ಮಿಕರನ್ನು ಬಳಸಿ ಗ್ರಾಸ್‌ ಕಟ್ಟರ್‌ ಮೂಲಕ ತೆರವು ಗೊಳಿಸುವುದು ಸೂಕ್ತ. ಬೆಂಕಿ ಹಚ್ಚುವ ಕೆಲಸ ಬೇಡ.
ಮರಗಳ ಸುತ್ತಲೂ ಇರುವ ಕಸ, ಹುಲ್ಲು ಇತ್ಯಾ ದಿಗಳನ್ನು ಮಳೆಗಾಲದ ಕೊನೆಯಲ್ಲೇ ತೆರವು ಮಾಡಿ ಸ್ವತ್ಛಗೊಳಿಸಿದರೆ ಮುಂದೆ ಬೆಂಕಿ ಬೀಳುವ ಸಾಧ್ಯತೆ ಕಡಿಮೆ.
ನಾಗರಿಕರು ತಮ್ಮ ಪರಿಸರದಲ್ಲಿ ಎಲ್ಲಾದರೂ ಗಿಡಗಳು, ಕಾಡಿಗೆ ಬೆಂಕಿ ಬಿದ್ದದ್ದು ಕಂಡರೆ ತತ್‌ಕ್ಷಣ ಅದನ್ನು ಅಗ್ನಿಶಾಮಕ ಇಲಾಖೆ, ಅರಣ್ಯ ಇಲಾಖೆಗೆ ತಿಳಿಸುವ ಮೂಲಕ ಸಂರಕ್ಷಣೆಗೆ ನೆರವಾಗಬೇಕು.

ಕಸ ತೆರವು ಆರಂಭ
ಅರಣ್ಯ ಇಲಾಖೆ ಕೆಲವು ಕಡೆಗಳಲ್ಲಿ ನೆಡುತೋಪುಗಳಲ್ಲಿ ಕಸ ತೆರವು ಪ್ರಾರಂಭಿಸಿದೆ. ತಲಪಾಡಿಯಿಂದ ಪಂಪ್‌ವೆಲ್‌, ಪಂಪ್‌ವೆಲ್‌ನಿಂದ ನಂತೂರು ವರೆಗೆ ಹೆದ್ದಾರಿ ಇಕ್ಕೆಲಗಳಲ್ಲಿ ಗಿಡಗಳ ಸುತ್ತ ಒಣಹುಲ್ಲು ತೆರವು ಮಾಡಿದ್ದೇವೆ, ಶಕ್ತಿನಗರ, ವಾಮಂಜೂರು ಬಳಿಯೂ ಕೆಲಸವಾಗುತ್ತಿದೆ, ಸಾಧ್ಯವಾದಷ್ಟೂ ಎಲ್ಲ ರಸ್ತೆ ಬದಿ ಗಿಡಗಳನ್ನು ಸಂರಕ್ಷಿಸುವ ಕೆಲಸ ಮಾಡುತ್ತೇವೆ.
– ಪ್ರಶಾಂತ ಪೈ, ವಲಯ ಅರಣ್ಯಾಧಿಕಾರಿ, ಮಂಗಳೂರು

ಟಾಪ್ ನ್ಯೂಸ್

ಜನ ಮೋದಿ ಮೋದಿ ಎಂದರೆ ಕಾಂಗ್ರೆಸ್ ಗೆ ಭೇದಿ ಜಾಸ್ತಿಯಾಗುತ್ತೆ ಅದಕ್ಕೆ ಚೆಂಬು ಬಿಡುತ್ತಿಲ್ಲ

ಜನ ಮೋದಿ ಮೋದಿ ಎಂದರೆ ಕಾಂಗ್ರೆಸ್ ಗೆ ಭೇದಿ ಜಾಸ್ತಿಯಾಗುತ್ತೆ ಅದಕ್ಕೆ ಚೆಂಬು ಬಿಡುತ್ತಿಲ್ಲ

Sandalwood: ಬಿಸಿಲ ಧಗೆ ಎಫೆಕ್ಟ್; ಔಟ್‌ಡೋರ್‌ ಶೂಟಿಂಗ್‌ನಿಂದ ಸಿನಿಮಂದಿ ದೂರ

Sandalwood: ಬಿಸಿಲ ಧಗೆ ಎಫೆಕ್ಟ್; ಔಟ್‌ಡೋರ್‌ ಶೂಟಿಂಗ್‌ನಿಂದ ಸಿನಿಮಂದಿ ದೂರ

12-gangavathi

ವಿಧಾನಸಭಾ ಚುನಾವಣೆಯಲ್ಲಿ ಸಿದ್ದು,ಡಿಕೆಶಿ ನನ್ನ ಜತೆ ಕೈ ಜೋಡಿಸಿದ್ದರು:ಗಾಲಿ ಜನಾರ್ದನ ರೆಡ್ಡಿ

Godrej:  ಜನಪ್ರಿಯ ಗೋದ್ರೆಜ್‌ ಸಮೂಹ ಇಬ್ಭಾಗ: ಜಮ್ಶೆಡ್‌, ನಾದಿರ್‌ ನೂತನ ಮುಖ್ಯಸ್ಥರು

Godrej:  ಜನಪ್ರಿಯ ಗೋದ್ರೆಜ್‌ ಸಮೂಹ ಇಬ್ಭಾಗ: ಜಮ್ಶೆಡ್‌, ನಾದಿರ್‌ ನೂತನ ಮುಖ್ಯಸ್ಥರು

ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗುವುದನ್ನು ಪ್ಲ್ಯಾನ್ ಮಾಡಿದವರು ದೇವೇಗೌಡರು – ಸಿಎಂ ಆರೋಪ

ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗುವುದನ್ನು ಪ್ಲ್ಯಾನ್ ಮಾಡಿದವರು ದೇವೇಗೌಡರು – ಸಿಎಂ ಆರೋಪ

Vijayapura: ಗೃಹಿಣಿ ಮೇಲೆ ಅತ್ಯಾಚಾರ,ಚಿತ್ರೀಕರಣ: ಮಗನೊಂದಿಗೆ ನಾಪತ್ತೆಯಾದ ಸಂತ್ರಸ್ತೆ

Vijayapura: ಗೃಹಿಣಿ ಮೇಲೆ ಅತ್ಯಾಚಾರ,ಚಿತ್ರೀಕರಣ: ಮಗನೊಂದಿಗೆ ನಾಪತ್ತೆಯಾದ ಸಂತ್ರಸ್ತೆ

11-

Koppala: ವೈದ್ಯರ ನಿರ್ಲಕ್ಷ್ಯ-ಚಿಕಿತ್ಸೆ ಫಲಿಸದೇ ಗರ್ಭಿಣಿ ಸಾವು ; ಕುಟುಂಬಸ್ಥರ ಪ್ರತಿಭಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

17

Justice: ಕೋಮು ದ್ವೇಷದಿಂದ ಹತ್ಯೆ ಪ್ರಕರಣ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

Temperature ಕರಾವಳಿಯಲ್ಲಿ ಬಿಸಿ ವಾತಾವರಣದ ಮುನ್ಸೂಚನೆ

Temperature ಕರಾವಳಿಯಲ್ಲಿ ಬಿಸಿ ವಾತಾವರಣದ ಮುನ್ಸೂಚನೆ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಜನ ಮೋದಿ ಮೋದಿ ಎಂದರೆ ಕಾಂಗ್ರೆಸ್ ಗೆ ಭೇದಿ ಜಾಸ್ತಿಯಾಗುತ್ತೆ ಅದಕ್ಕೆ ಚೆಂಬು ಬಿಡುತ್ತಿಲ್ಲ

ಜನ ಮೋದಿ ಮೋದಿ ಎಂದರೆ ಕಾಂಗ್ರೆಸ್ ಗೆ ಭೇದಿ ಜಾಸ್ತಿಯಾಗುತ್ತೆ ಅದಕ್ಕೆ ಚೆಂಬು ಬಿಡುತ್ತಿಲ್ಲ

Sandalwood: ಬಿಸಿಲ ಧಗೆ ಎಫೆಕ್ಟ್; ಔಟ್‌ಡೋರ್‌ ಶೂಟಿಂಗ್‌ನಿಂದ ಸಿನಿಮಂದಿ ದೂರ

Sandalwood: ಬಿಸಿಲ ಧಗೆ ಎಫೆಕ್ಟ್; ಔಟ್‌ಡೋರ್‌ ಶೂಟಿಂಗ್‌ನಿಂದ ಸಿನಿಮಂದಿ ದೂರ

12-gangavathi

ವಿಧಾನಸಭಾ ಚುನಾವಣೆಯಲ್ಲಿ ಸಿದ್ದು,ಡಿಕೆಶಿ ನನ್ನ ಜತೆ ಕೈ ಜೋಡಿಸಿದ್ದರು:ಗಾಲಿ ಜನಾರ್ದನ ರೆಡ್ಡಿ

Bengaluru water crisis: ನೀರು ಯಾವಾಗ ಬರುತ್ತೆ?: ಮೊಬೈಲಲ್ಲೇ ಮಾಹಿತಿ

Bengaluru water crisis: ನೀರು ಯಾವಾಗ ಬರುತ್ತೆ?: ಮೊಬೈಲಲ್ಲೇ ಮಾಹಿತಿ

10

Bengaluru: ಫ್ಲೈಓವರ್‌ಗಳಲ್ಲೂ ಕಸ ಸುರಿಯುವ ವಾಹನ ಸವಾರರು 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.